ಚುನಾವಣಾ ಫಲಿತಾಂಶ ಮೋದಿ, ‘ನಕಲಿ ಚಾಣಕ್ಯ’ ಅಮಿತ್ ಶಾಗೆ ಜನರು ನೀಡಿರುವ ಹೊಡೆತ: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್
ಹೊಸದಿಲ್ಲಿ, ಡಿ.11: ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, “ಇದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡುವ ಪ್ರಧಾನಿ ಮೋದಿಗೆ ಜನತೆ ನೀಡಿರುವ ಹೊಡೆತ” ಎಂದಿದ್ದಾರೆ.
ಛತ್ತೀಸ್ ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ. ಮಧ್ಯಪ್ರದೇಶದ ಫಲಿತಾಂಶ ಇನ್ನೇನು ಕೆಲ ಕ್ಷಣಗಳಲ್ಲಿ ಹೊರಬೀಳಲಿದೆ. ಇದು ಮೋದಿ ಮತ್ತು ‘ಡೂಪ್ಲಿಕೇಟ್ ಚಾಣಕ್ಯ’ ಅಮಿತ್ ಶಾಗೆ ದೇಶದ ಜನರು ನೀಡಿರುವ ಉತ್ತರ ಎಂದವರು ಹೇಳಿದ್ದಾರೆ.
Next Story