ಅಭಿವೃದ್ಧಿ ಮರೆತು ಮಂದಿರ, ಪ್ರತಿಮೆ, ಹೆಸರು ಬದಲಾವಣೆಗೆ ಗಮನ ಹರಿಸಿದ್ದರಿಂದ ಸೋಲು: ಬಿಜೆಪಿ ಸಂಸದ ಕಾಕಡೆ
"ರಾಜಸ್ಥಾನ, ಛತ್ತೀಸ್ ಗಢದಲ್ಲಿ ಸೋಲುತ್ತೇವೆಂದು ಮೊದಲೇ ತಿಳಿದಿತ್ತು"
ಹೊಸದಿಲ್ಲಿ, ಡಿ.11: ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ನಾವು ಸೋಲುತ್ತೇವೆ ಎಂದು ಮೊದಲೇ ತಿಳಿದಿತ್ತು. ಆದರೆ ಮಧ್ಯಪ್ರದೇಶದ ಬೆಳವಣಿಗೆ ಆಶ್ಚರ್ಯ ತರಿಸಿದೆ ಎಂದು ಬಿಜೆಪಿ ಸಂಸದ ಸಂಜಯ್ ಕಾಕಡೆ ಪ್ರತಿಕ್ರಿಯಿಸಿದ್ದಾರೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾವು ಅಭಿವೃದ್ಧಿಯನ್ನು ಮರೆತುಬಿಟ್ಟೆವು ಹಾಗು ರಾಮಮಂದಿರ, ಪ್ರತಿಮೆ ಹಾಗು ಹೆಸರು ಬದಲಾವಣೆ ಬಗ್ಗೆ ಗಮನ ಹರಿಸಿದೆವು ಎಂದು ಕಾಕಡೆ ಹೇಳಿದರು.
Next Story