ಅಡೂರು ಗಣೇಶ ರಾವ್ ನಿಧನ

ಉಡುಪಿ, ಡಿ.11: ಹಿರಿಯ ಹಿಮ್ಮೇಳ ವಾದಕ, ಧರ್ಮಸ್ಥಳ ಮೇಳದ ಕಲಾವಿದ ಅಡೂರು ಗಣೇಶ ರಾವ್ (50) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿ ಗಳನ್ನು ಅಗಲಿದ್ದಾರೆ.
ಗಣೇಶ್ ರಾವ್ಗೆ ಯಕ್ಷಗಾನ ವಂಶಪಾರಂಪರ್ಯವಾಗಿ ಬಂದ ಬಳುವಳಿ. ಅವರ ತಂದೆ, ಅಜ್ಜಂದಿರು ಮದ್ದಳೆ ವಾದಕರಾಗಿದ್ದರು. ನೆಡ್ಲೆ ನರಸಿಂಹ ಭಟ್ಟರಲ್ಲಿ ಯಕ್ಷಗಾನ ಹಿಮ್ಮೆಳ ವಾದನ ಅಧ್ಯಯನ ಮಾಡಿ ತಮ್ಮ 13 ವರ್ಷಕ್ಕೆ ಮೇಳದ ತಿರುಗಾಟ ಆರಂಭಿಸಿದ್ದರು.
ಸುರತ್ಕಲ್, ಕದ್ರಿ, ಪುತ್ತೂರು, ಕಟೀಲು, ಮೇಳದಲ್ಲಿ ಕಲಾಸೇವೆ ಮಾಡಿದ ಬಳಿಕ ಕಳೆದ ಎರಡು ದಶಕಗಳಿಂದ ಧರ್ಮಸ್ಥಳ ಮೇಳದಲ್ಲಿ ಹಿಮ್ಮೇಳ ವಾದಕರಾಗಿದ್ದರು. ಗಣೇಶ ರಾವ್ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story