ಅಸೆಂಬ್ಲಿ ಚುನಾವಣೆಯಲ್ಲಿ ಗೆಲುವು: ಅನಿವಾಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
ರಿಯಾದ್, ಡಿ. 12: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಸೌದಿ ಅರೇಬಿಯಾದ ಅಲ್ ತಾಯಿಫ್ ಘಟಕದ ಅಧ್ಯಕ್ಷ ಕೆ.ಪಿ ಇಬ್ರಾಹಿಂ ಕನ್ನಂಗಾರ್ ನೇತೃತ್ವದಲ್ಲಿ ಸೂಕ್ ಬಲದ್ ನಲ್ಲಿ ನಡೆಯಿತು.
ಕೇಂದ್ರದಲ್ಲಿ ಇರುವ ಮೋದಿ ಸರ್ಕಾರ ಕೇವಲ ಸುಳ್ಳು ಭರವಸೆ ನೀಡಿ, ಐದು ವರ್ಷದಲ್ಲಿ ದೇಶ ಯಾವುದೇ ಅಭಿವೃದ್ಧಿ ಕಾಣದೇ ಕೇವಲ ಸುಳ್ಳು ಪ್ರಚಾರ ನಡೆಸಿದಂತಹ ಸರ್ಕಾರದ ವಿರುದ್ಧ ಪಂಚ ರಾಜ್ಯಗಳ ಮತದಾರರು ಒಂದೇ ಒಂದು ರಾಜ್ಯದಲ್ಲಿ ಬಹುಮತ ಕೊಡದೆ, ಸರ್ಕಾರ ರಚಿಸಲು ಅವಕಾಶ ನೀಡದೇ, ಜಾತಿ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ರಾಜಕೀಯ ಮಾಡುವಂತಹ ಕೋಮುವಾದಿ ಸರ್ಕಾರದ ಅಗತ್ಯವಿಲ್ಲ ಎಂದು ಮೋದಿಯವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗುವುದರ ಜೊತೆಗೆ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಮೋದಿಗೆ ತಾವೇ ಮುಕ್ತವಾಗುವ ದಿನ ದೂರವಿಲ್ಲಾ ಎಂದು ಆಲೋಚಿಸುವ ದಿನ ಬಂದಿದೆ ಎಂದು ವಿಜಯೋತ್ಸವದ ನೇತೃತ್ವ ವಹಿಸಿದ್ದ ಅನಿವಾಸಿ ಕಾಂಗ್ರೆಸ್ ತಾಯಿಫ್ ಘಟಕದ ಅಧ್ಯಕ್ಷ ಕೆ.ಪಿ ಇಬ್ರಾಹಿಂ ಕನ್ನಂಗಾರ್ ಹೇಳಿದರು.
ಅನಿವಾಸಿ ಕಾಂಗ್ರೆಸ್ ತಾಯಿಫ್ ಘಟಕದ ಪದಾಧಿಕಾರಿಗಳಾದ ಸಂಶುದ್ದೀನ್ ಕಾಟಿಪಳ್ಳ, ಝುಬೈರ್ ತುಂಬೆ, ಇಮ್ತಿಯಾಝ್ ಕುಂದಾಪುರ, ಸದಕ ಅಡ್ಡೂರ್, ಕಾರ್ಯಕರ್ತರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.