Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಿಮ್ಮ ಮೊಬೈಲ್ ಗೆ ಈ ಸಂದೇಶ ಬಂದರೆ...

ನಿಮ್ಮ ಮೊಬೈಲ್ ಗೆ ಈ ಸಂದೇಶ ಬಂದರೆ ಹುಷಾರಾಗಿರಿ !

ಆದಾಯ ತೆರಿಗೆ ನೀಡಿದೆ ಎಚ್ಚರಿಕೆ

ವಾರ್ತಾಭಾರತಿವಾರ್ತಾಭಾರತಿ14 Dec 2018 8:35 PM IST
share
ನಿಮ್ಮ ಮೊಬೈಲ್ ಗೆ ಈ ಸಂದೇಶ ಬಂದರೆ ಹುಷಾರಾಗಿರಿ !

ಹೊಸದಿಲ್ಲಿ, ಡಿ.14: ಆದಾಯ ತೆರಿಗೆ ಇಲಾಖೆಯ ಹೆಸರಲ್ಲಿ ಹುಸಿ ಸಂದೇಶ ರವಾನೆಯಾಗಿರುವ ಬಗ್ಗೆ ಇಲಾಖೆ ಜನತೆಗೆ ಎಚ್ಚರಿಕೆ ನೀಡಿದೆ. ಆದಾಯ ತೆರಿಗೆ ಸಲ್ಲಿಕೆಯ ಕುರಿತು ತಮಗೆ ಬಂದಿರುವ ಈ ನಕಲಿ ಸಂದೇಶವನ್ನು ನಂಬಿ ಜನ ಟ್ವಿಟರ್‌ನಲ್ಲಿ ಈ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ.

  ಇ-ಫೈಲಿಂಗ್ ವ್ಯವಸ್ಥೆಯ ಮೂಲಕ ಆದಾಯ ತೆರಿಗೆ ಪಾವತಿಸಿದ ಸಂದರ್ಭ ನೀಡುವ ಫೋನ್ ನಂಬರ್ ಅನ್ನು ಬಳಸಿಕೊಂಡು ಈ ಸಂದೇಶ ಕಳುಹಿಸಿರುವ ಬಗ್ಗೆ ಶಂಕಿಸಲಾಗಿದೆ. ಈ ಸಂದೇಶದಲ್ಲಿ ವ್ಯಕ್ತಿಯ ಹೆಸರು, ಫೋನ್ ನಂಬರ್ ಎಲ್ಲಾ ಸರಿಯಾಗಿಯೇ ಇರುವ ಕಾರಣ ಇದು ಆದಾಯತೆರಿಗೆ ಇಲಾಖೆಯಿಂದ ಬಂದಿರುವ ಸಂದೇಶವೆಂದೇ ಜನತೆ ನಂಬುವ ಸಾಧ್ಯತೆಯಿದೆ.

 'ಪ್ರಿಯ ಪ್ರದೀಪ್ ಕೆ(ಇ-ಫೈಲಿಂಗ್ ವೆಬ್‌ಸೈಟ್‌ಗೆ ನೀಡಲಾದ ಫೋನ್ ನಂಬರ್‌ಗೆ ಸಂಪರ್ಕಿಸಿದ ಹೆಸರು), ನೀವು ಹಕ್ಕು ಸಾಧಿಸದ(ಅನ್‌ಕ್ಲೇಮ್), ತೆರಿಗೆ ಮರುಪಾವತಿ ಮೊತ್ತವಾಗಿರುವ 29,754 ರೂ.ಯನ್ನು ಪಡೆಯಲು ಅಗತ್ಯವಿರುವ ಅಧಿಕೃತ ಕೋರಿಕೆ ಅರ್ಜಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ 'ಎಂದು ಸಂದೇಶ ರವಾನೆಯಾಗಿದೆ. ಮತ್ತು ಕೆಳಗೆ ಸ್ಟೇಟ್‌ಬ್ಯಾಂಕ್‌ನ ನಕಲಿ ಆನ್‌ಲೈನ್ ವೆಬ್‌ಸೈಟ್‌ನ ಲಿಂಕ್ ನೀಡಲಾಗಿದೆ.

  ಈ ವೆಬ್‌ಸೈಟ್‌ಗೆ ಲಾಗಿನ್ ಆದರೆ ಆಗ ಎಸ್‌ಬಿಐ ಇಂಟರ್‌ನೆಟ್ ಬ್ಯಾಂಕಿಂಗ್‌ನ ಲಾಗಿನ್ ಮಾಹಿತಿಯನ್ನು ಹ್ಯಾಕರ್‌ಗಳು ಪಡೆಯುತ್ತಾರೆ. ಆದಾಯ ತೆರಿಗೆ ಇಲಾಖೆ ಯಾವತ್ತೂ ಜನರಿಂದ ಬ್ಯಾಂಕಿಂಗ್ ಲಾಗಿನ್ ಮಾಹಿತಿಯನ್ನು ಕೇಳುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

  

 ದೇಶದಲ್ಲಿ ವ್ಯಾಪಕವಾಗಿ ಚಲಾವಣೆಯಲ್ಲಿರುವ ಮೋಸಗಾರಿಕೆಯ ಮತ್ತೊಂದು ತಂತ್ರವೆಂದರೆ 'ಸಿಮ್ ಕಾರ್ಡ್ ಸ್ವಾಪ್' ವಿಧಾನ. ಇಲ್ಲಿ ಸಿಮ್‌ಕಾರ್ಡ್ ಬದಲಾವಣೆ ಎಂಬ ಕಾರಣ ನೀಡಿ ನಿಮ್ಮ ಫೋನ್ ನಂಬರ್‌ಗೆ ಹೊಸ ಸಿಮ್ ಕಾರ್ಡನ್ನು ನೋಂದಾಯಿಸಲಾಗುತ್ತದೆ. ನಿಮ್ಮ ಫೋನ್ ನಂಬರ್‌ಗೆ ಹೊಸ ಸಿಮ್ ಕಾರ್ಡ್ ಜೋಡಣೆಯಾದರೆ ಸಿಮ್ ಕಾರ್ಡ್ ಅಮಾನ್ಯವಾಗುತ್ತದೆ ಮತ್ತು ಫೋನ್ ಸಿಗ್ನಲ್‌ಗಳನ್ನು ಪಡೆಯುವುದು ಸ್ಥಗಿತಗೊಳ್ಳುತ್ತದೆ. ನಿಮ್ಮ ಫೋನ್ ನಂಬರ್ ವಂಚಕರಿಗೆ ಸಿಕ್ಕಿದರೆ, ಅವರಿಗೆ ನಿಮ್ಮ ಒಟಿಪಿ(ವನ್ ಟೈಮ್ ಪಾಸ್‌ವರ್ಡ್)ಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ, ಆನ್‌ಲೈನ್ ಶಾಪಿಂಗ್ ಮುಂತಾದವುಗಳನ್ನು ಮಾಡಬಹುದು.

ಇತ್ತೀಚೆಗೆ ನೋಯ್ಡಾದ ನಿವಾಸಿಯೊಬ್ಬನ ಎಸ್‌ಬಿಐ ಖಾತೆಯಲ್ಲಿದ್ದ 6.8 ಲಕ್ಷ ರೂ.ಗಳನ್ನು ಇಂಟರ್‌ನೆಟ್ ವಂಚಕರು ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಬ್ಯಾಂಕಿಂಗ್ ಮೂಲಕ ಸಿಮ್ ಸ್ವಾಪ್ ನಡೆಸಿ ವರ್ಗಾಯಿಸಿಕೊಂಡಿದ್ದರು. ತನ್ನಲ್ಲಿ ಸ್ಮಾರ್ಟ್‌ಫೋನ್ ಇಲ್ಲ ಎಂದು ಈ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಕಳೆದ ಎರಡು ತಿಂಗಳಲ್ಲಿ ಯುಪಿಐ ಆ್ಯಪ್ ಬಳಸಿಕೊಂಡು ವಂಚಕರು ಈತನ ಎಸ್‌ಬಿಐ ಖಾತೆಯಲ್ಲಿದ್ದ 6.8 ಲಕ್ಷ ರೂ ಹಣ ಲಪಟಾಯಿಸಿದ್ದಾರೆ. ಬ್ಯಾಂಕಿನಿಂದ ಹಣ ಹಿಂಪಡೆಯಲು ತೆರಳಿದಾಗಲಷ್ಟೇ ತನಗಾದ ಮೋಸದ ಬಗ್ಗೆ ಈತನಿಗೆ ತಿಳಿದಿದೆ. ಬಳಿಕ ಈತ ಪೊಲೀಸರಿಗೆ ದೂರು ನೀಡಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X