Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮೂಳೆ ಬೆಳವಣಿಯನ್ನು ಕುಂಠಿತಗೊಳಿಸುವ...

ಮೂಳೆ ಬೆಳವಣಿಯನ್ನು ಕುಂಠಿತಗೊಳಿಸುವ ಅಪರೂಪದ ಹೊಸ ರೋಗ ಪತ್ತೆ ಹಚ್ಚಿದ ಮಣಿಪಾಲ ಜೆನೆಟಿಕ್ಸ್ ತಂಡ

ವಾರ್ತಾಭಾರತಿವಾರ್ತಾಭಾರತಿ14 Dec 2018 9:11 PM IST
share
ಮೂಳೆ ಬೆಳವಣಿಯನ್ನು ಕುಂಠಿತಗೊಳಿಸುವ ಅಪರೂಪದ ಹೊಸ ರೋಗ ಪತ್ತೆ ಹಚ್ಚಿದ ಮಣಿಪಾಲ ಜೆನೆಟಿಕ್ಸ್ ತಂಡ

ಮಣಿಪಾಲ, ಡಿ.14: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಕಲ್ ಜೆನೆಟಿಕ್ಸ್ ವಿಭಾಗದ ವೈದ್ಯಕೀಯ ವಿಜ್ಞಾನಿಗಳ ತಂಡವು ಮಕ್ಕಳಲ್ಲಿ ಮೂಳೆ ಬೆಳವಣಿಗೆಯನ್ನು ಕುಂಠಿತ ಮಾಡಬಲ್ಲ ಅಪರೂಪದ ರೋಗವೊಂದನ್ನು ಮೊದಲ ಬಾರಿಗೆ ಪತ್ತೆ ಮಾಡಿದ್ದಾರೆ.

ಈ ಸ್ಥಿತಿಯು ಮೂಳೆಗಳ ಅಸಹಜ ಬೆಳವಣಿಗೆಯಿಂದ ವ್ಯಕ್ತಿಗಳಲ್ಲಿ ಕುಬ್ಜತೆ ಯನ್ನು ಉಂಟು ಮಾಡಬಲ್ಲದು. ಇದರ ಜೆನೆಟಿಕ್ ಮೂಲವನ್ನೂ ಸಹ ಪತ್ತೆ ಹಚ್ಚುವುದರಲ್ಲಿ ತಂಡವು ಯಶಸ್ವಿಯಾಗಿದೆ ಎಂದು ತಂಡದ ಮುಖ್ಯಸ್ಥರಾದ ಡಾ. ಗಿರೀಶ್ ಕಟ್ಟ ಅವರು ತಿಳಿಸಿದ್ದು, ಹೊಸ ಆವಿಷ್ಕಾರದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.

ಕೆಎಂಸಿ ತಂಡದ ಈ ಸಂಶೋಧನೆಯನ್ನು ಹೆಸರಾಂತ ವೈದ್ಯಕೀಯ ಪತ್ರಿಕೆಯಾದ ‘ಹ್ಯೂಮನ್ ಮ್ಯೂಟೇಶನ್’ನಲ್ಲಿ (ಪ್ರಕಾಶಕರು-ವೈಲಿ, ಅಮೇರಿಕಾ) ಪ್ರಕಟಿಸಲಾಗಿದೆ.

ಎರಡು ಬೇರೆ ಬೇರೆ ಕುಟುಂಬದ ಮಕ್ಕಳನ್ನು ಪರಿಶೀಲಿಸಿದಾಗ ಅವರ ಬೆಳವಣಿಗೆ ಸಾಮಾನ್ಯ ಮಕ್ಕಳಿಗಿಂತ ತುಂಬಾ ಕುಂಠಿತವಾಗಿರುವುದು ಮತ್ತು ಅವರ ಬೆಳವಣಿಗೆ ಬಹಳ ನಿಧಾನಗತಿಯಲ್ಲಿರುವುದನ್ನು ಮಕ್ಕಳ ತಜ್ಞರು ಗಮನಿಸಿ ಮಣಿಪಾಲದ ಜೆನೆಟಿಕ್ಸ್ ವೈದ್ಯರಲ್ಲಿಗೆ ಸಲಹೆಗಾಗಿ ಶಿಫಾರಸು ಮಾಡಿದ್ದರು. ಮಣಿಪಾಲದ ವೈದ್ಯಕೀಯ ಜೆನೆಟಿಕ್ಸ್ ತಜ್ಞರಾದ ಡಾ.ಗಿರೀಶ್ ಕಟ್ಟ ಮತ್ತು ಡಾ. ಅಂಜು ಶುಕ್ಲಾ, ಇದು ಸಾಮಾನ್ಯವಾಗಿ ಕಂಡುಬರುವ ಸ್ಥಿತಿ ಯಲ್ಲ ಎಂಬುದನ್ನು ಅರಿತು ಎಕ್ಸೋಮ್ ಸಿಕ್ವೆನ್ಸಿಂಗ್ ಎಂಬ ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಯ ಎಲ್ಲಾ ಅನುವಂಶಿಕ ಧಾತು(ಜೀನ್ಸ್)ಗಳ ಅಧ್ಯಯನ ನಡೆಸಿದರು.

ಈ ವೈದ್ಯಕೀಯ ತಂಡ ಮಣಿಪಾಲದ ಬಯೋ ಇನ್‌ಫಾರ್ಮಾಟಿಕ್ಸ್ ಪರಿಣಿತರಾದ ನೀತುಕೃಷ್ಣ ಕೌಸ್ತುಭಮ್ ಹಾಗೂ ಡಾ. ಶ್ರೀಲಕ್ಷ್ಮಿ ಭವಾನಿ ಅವರ ಸಹಾಯದಿಂದ ಈ ರೋಗದ ಕಾರ್ಯವಿಧಾನ ಹಾಗೂ ಲಕ್ಷಣದ ಪರಸ್ಪರ ಸಂಬಂಧವನ್ನು ಪತ್ತೆ ಮಾಡಿತು. ಈ ಹೊಸ ಅನುವಂಶಿಕ ಧಾತುವಿನ ಯಶಸ್ವಿ ಆವಿಷ್ಕಾರದ ನಂತರ ಜರ್ಮನಿಯ ವಿಜ್ಞಾನಿಗಳಾದ ಡಾ. ಕರ್ಸ್ಟಿನ್ ಕುಶೆ ಮತ್ತು ಡಾ. ಲೆಯೊನ್ನಿ ವೊನ್ ಎಲ್ಸನರ್ ಸಹಯೋಗದಲ್ಲಿ ತಂಡವು ಈ ರೋಗದ ಕುರಿತು ಮತ್ತಷ್ಟು ಪ್ರಯೋಗಗಳನ್ನು ನಡೆಸಿತು. ಈ ಸಂಶೋಧನೆಯ ಮೇಲ್ವಿಚಾರಣೆಯಲ್ಲಿ ಬೆಲ್ಜಿಯಂನ ಆಂಟ್ವೆರ್ಪ್ ವಿಶ್ವವಿದ್ಯಾಲಯದ ಡಾ. ಹರ್ಟ್ ಮೊರ್ಟಿಯರ್ ಸಹಕರಿಸಿದ್ದರು ಎಂದು ಮಾಹೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಣಿಪಾಲ ತಂಡದ ಈ ಹೊಸ ಅವಿಷ್ಕಾರವನ್ನು ಪ್ರಶಂಸಿಸಿದ ಮಾಹೆಯ ಕುಲಪತಿ ಡಾ.ವಿನೋದ್ ಭಟ್, ಸತತ ಮೂರು ವರ್ಷಗಳ ಈ ಆವಿಷ್ಕಾರ, ಮಾಹೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಮ್ಮ ಬದ್ಧತೆಯನ್ನು ವಿವರಿಸುತ್ತದೆ ಎಂದರು. ಈ ಸಂಶೋಧನೆಯಲ್ಲಿ ನೆರವಾದ ಜರ್ಮನಿ ಮತ್ತು ಬೆಲ್ಜಿಯಂನ ಸಹಯೋಗಿಗಳು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಂದರ್ಶಕ ಉಪನ್ಯಾಸಕರಾಗಿದ್ದಾರೆ ಎಂದು ಕೆಎಂಸಿಯ ಡೀನ್ ಡಾ. ಪ್ರಜ್ಞಾ ರಾವ್ ತಿಳಿಸಿದ್ದಾರೆ.

ಈಗಾಗಲೇ ಸುಮಾರು 15 ಹೊಸ ರೋಗಗಳನ್ನು ಪತ್ತೆ ಹಚ್ಚಿರುವ ಮಣಿಪಾಲ ಜೆನೆಟಿಕ್ಸ್ ತಂಡವನ್ನು ಕುಲಪತಿ ಡಾ.ವಿನೋದ್ ಭಟ್ ಅಭಿನಂದಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X