ಕನ್ನಡ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ
ಬೆಂಗಳೂರು, ಡಿ.15: ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅನಿಕೇತನ ಕನ್ನಡ ದಳ ಹಾಗೂ ಪರಸ್ಪರ ಸ್ನೇಹ ಬಳಗ ವತಿಯಿಂದ ಕನ್ನಡ ಭಾಷೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಸ್ತುತ ಸಾಲಿನ ಕನ್ನಡ ಆದರ್ಶ ದಂಪತಿ ಪ್ರಶಸ್ತಿ ಅನ್ನು ಪ್ರದಾನ ಮಾಡಲಾಯಿತು.
ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸ್ತುತ ಸಾಲಿನ ಪ್ರಶಸ್ತಿ ಅನ್ನು ಎಚ್.ಆನಂದ್ ಹಾಗೂ ಸುಧಾ, ಎಸ್.ಎಂ.ಶಿವರಾಮ್, ಎಸ್.ರಾಧಮ್ಮ ಅವರಿಗೆ ಪ್ರದಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾಯಣ್ಣ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಪರ ನಿರ್ದೇಶಕ ಕೆ. ಎಸ್. ಮೃತ್ಯುಂಜಯ, ಸಾಹಿತಿ ಡಾ.ಲೀಲಾದೇವಿ ದೇವದಾಸ್, ಪತ್ರಕರ್ತ ಎಂ.ರಾಮು ಸೇರಿದಂತೆ ಮತ್ತಿತರಿದ್ದರು.
Next Story