ಮಂಗಳೂರು: ಟೀಂ ಮೋದಿಗೆ ಚಾಲನೆ
ಮಂಗಳೂರು, ಡಿ.16: ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿಸುವ ಉದ್ದೇಶದೊಂದಿಗೆ ಹುಟ್ಟಿಕೊಂಡಿರುವ ‘ಟೀಂ ಮೋದಿ’ ಸಂಘಟನೆಗೆ ರವಿವಾರ ನಗರದಲ್ಲಿ ಚಾಲನೆ ನೀಡಲಾಯಿತು.
ಕಾಮನ್ವೆಲ್ತ್ ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು ಪ್ರದೀಪ್ ಕುಮಾರ್ ‘ಟೀಮ್ ಮೋದಿ’ ಅವರು ಜಿಲ್ಲಾ ಸಂಪರ್ಕ ಪ್ರಮುಖ್ ಭಾಸ್ಕರ್ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಹಂಪನಕಟ್ಟೆಯಲ್ಲಿ ಚಾಲನೆ ನೀಡಿದರು. ನೆಹರೂ ಮೈದಾನದಲ್ಲಿ ಜಾಥಾ ಸಮಾಪನಗೊಂಡಿತು.
ಟೀಂ ಮೋದಿ ವಕ್ತಾರ ಅರುಣ್ ಶೇಟ್, ಟೀಮ್ ಮೋದಿ ಕಾರ್ಯಕರ್ತರಾದ ಸಮಿತ್, ಸುಶಾಂತ್, ಅಶೋಕ್, ದಯಾ ಆಕಾಶ್, ಚೈತ್ರಾ, ಭವ್ಯಾ,ಶ್ರೀಪತಿ, ಮುದ್ರಾ ಯೋಜನೆಯ ಫಲಾನುಭವಿ ಸುಮಾ ಕೋಡಿಕಲ್ ಮತ್ತಿತರರಿದ್ದರು.
ಕಾರ್ಯಕ್ರಮದ ಬಳಿಕ ಸ್ಟೇಟ್ಬ್ಯಾಂಕ್, ಮೀನು ಮಾರುಕಟ್ಟೆ ಮತ್ತು ಬಸ್ ನಿಲ್ದಾಣದಲ್ಲಿ ಚಹಾ ವಿತರಿಸಲಾಯಿತು. ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಟೀಂ ಮೋದಿಗೆ ಚಾಲನೆ ನೀಡಲಾಯಿತು.