Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ17 Dec 2018 12:08 AM IST
share
ಓ ಮೆಣಸೇ...

ಯಾರು ಏನೇ ಹೇಳಲಿ ಜನರಿಗೆ ಸುಲಭವಾಗಿ ಸಿಗುವ ಮುಖ್ಯಮಂತ್ರಿ ನಾನು - ಕುಮಾರಸ್ವಾಮಿ, ಮುಖ್ಯಮಂತ್ರಿ

 ಬಿಜೆಪಿಯವರು ಇದನ್ನೇ ಹೇಳುತ್ತಾರೆ.

---------------------

ಈಗ ಅಧಿಕಾರದಲ್ಲಿರುವವರೇ ಆಶ್ವಾಸನೆ ನೀಡಿ ರಾಮಮಂದಿರ ಮರೆತಿದ್ದಾರೆ - ಸುರೇಶ್ ಭಯ್ಯಾಜಿ, ಆರೆಸ್ಸೆಸ್ ನಾಯಕ

ಜನರನ್ನೇ ಮರೆತಿದ್ದಾರೆ ಎನ್ನುವುದು ಶ್ರೀಸಾಮಾನ್ಯನ ಕಳವಳ.

---------------------

ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟಿದ್ದಾರೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬಹುಶಃ ಚಟಗಳನ್ನು ಮುಂದುವರಿಸುವುದು ಸರಿಯಲ್ಲ.

---------------------

ನಾನು ಪ್ರತಿದಿನ ರಾಮ, ಯೇಸು, ಪೈಗಂಬರ್ ನೆನೆದೇ ಮಲಗುತ್ತೇನೆ - ಜನಾರ್ದನ ಪೂಜಾರಿ - ಕಾಂಗ್ರೆಸ್ ಮುಖಂಡ
 ಪ್ರಭಾಕರ ಭಟ್ಟರ ಹೆಸರನ್ನೇಕೆ ಬಿಟ್ಟಿರಿ?
---------------------
 
ರಾಜ್ಯ ಸರಕಾರ ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದೆ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಮೋದಿ ಸರಕಾರ ಅದನ್ನೂ ಮಾಡುತ್ತಿಲ್ಲ.

---------------------
  ರಾಮಮಂದಿರಕ್ಕಾಗಿ ಹನುಮನ ರೀತಿ ಹೋರಾಟ ಮಾಡಬೇಕಿದೆ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಮೊದಲು ಬಾಲ ಕಟ್ಟಿಕೊಳ್ಳಿ.

---------------------

ಸಿದ್ದರಾಮಯ್ಯ ಸೋತರೂ ಅವರೇ ನಮಗೆ ಮುಖ್ಯಮಂತ್ರಿ -ಮುನಿಯಪ್ಪ, ಸಂಸದ
ಮುಖ್ಯಮಂತ್ರಿ ಚಂದ್ರು ಇದ್ದ ಹಾಗೆ.

---------------------
  ಅನ್ನಕೊಟ್ಟ ಸಿದ್ದರಾಮಯ್ಯರಿಗೆ ಜನ ವಿಷಕೊಟ್ಟರು
- ರಮೇಶ್‌ಕುಮಾರ್, ಸ್ಪೀಕರ್
ಪ್ರಸಾದ ಎಂದು ವಿಷ ಕೊಡುವವರು ಇರುವ ಸಮಾಜ ನಮ್ಮದು.

---------------------
  ಕಸ ಗುಡಿಸಿದರೆ ಸಾಲದು, ಮನಸ್ಸನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು
- ಡಾ.ಸಿದ್ದಲಿಂಗಯ್ಯ, ಹಿರಿಯ ಕವಿ
ಮೋದಿ ದೇಶವನ್ನೇ ಗುಡಿಸಿ ಹಾಕುತ್ತಿದ್ದಾರೆ.

---------------------

ಕರ್ನಾಟಕ ಸಮ್ಮಿಶ್ರ ಸರಕಾರ ಕುಮಾರಸ್ವಾಮಿಯವರ ಪಾಪದ ಶಿಶು - ಪ್ರಹ್ಲಾದ್‌ಜೋಷಿ, ಸಂಸದ
ಹೆತ್ತವರಿಗೆ ಹೆಗ್ಗಣ ಮುದ್ದು.

---------------------

ದೇಶದಲ್ಲಿ ಬಿಜೆಪಿ ತನ್ನ ಪ್ರಭಾವ ಕಳೆದುಕೊಳ್ಳುತ್ತಿದೆ
- ರಜನಿಕಾಂತ್, ನಟ
ಮೋದಿ ನಟನೆಯಲ್ಲಿ ನಿಮ್ಮನ್ನು ಮೀರಿಸಿದ್ದು ಕಾರಣವಿರಬಹುದು.

---------------------

ಸೋಲು ಮತ್ತು ಗೆಲುವು ಜೀವನದ ಅವಿಭಾಜ್ಯ ಅಂಗ - ನರೇಂದ್ರ ಮೋದಿ, ಪ್ರಧಾನಿ
ನಿಮ್ಮದಲ್ಲ, ದೇಶದ ಗತಿಯನ್ನು ಹೇಳಿ.

---------------------

ಪ್ರತಾಪ್ ಚಂದ್ರ ಶೆಟ್ಟಿ ಕರಾವಳಿಯ ಭೀಷ್ಮ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ನಾಯಕ
ಜನರು ಶರಶಯ್ಯೆಯ ದೃಶ್ಯಕ್ಕಾಗಿ ಕಾಯುತ್ತಿದ್ದಾರೆ.

---------------------

(ಪಂಚ ರಾಜ್ಯಗಳ ಚುನಾವಣೆಯಲ್ಲಿ) ಮತದಾರರು ಬಿಜೆಪಿಗೆ ತ್ರಿವಳಿ ತಲಾಖ್ ನೀಡಿದ್ದಾರೆ - ಶಶಿ ತರೂರು, ಸಂಸದ

ತ್ರಿವಳಿ ತಲಾಖ್ ಅಪರಾಧ ಎಂದು ಮೋದಿ ಘೋಷಿಸಿದ್ದು ಇದೇ ಕಾರಣಕ್ಕಿರಬಹುದೇ?
---------------------
  ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ನವರು ಹೇಳಿದ್ದಕ್ಕೆಲ್ಲಾ ಹೆಬ್ಬೆಟ್ಟು ಒತ್ತುತ್ತಿದ್ದಾರೆ - ಬಸವರಾಜ ಹೊರಟ್ಟಿ, ವಿ.ಪ.ಸದಸ್ಯ

ನನಗೆ ಸಹಿ ಹಾಕುವುದಕ್ಕೆ ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರಂತೆ.

---------------------

ಪಕ್ಕದ ಮನೆಯಲ್ಲಿ ಗಂಡು ಮಗು ಹುಟ್ಟಿದರೆ ಅದು ನನ್ನದೇ ಮಗು ಎನ್ನುವಂತೆ ಸರಕಾರ ವರ್ತಿಸುತ್ತಿದೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ಹಿರಿಯ ನಾಯಕ

ನೆರೆಹೊರೆ ಎಂದ ಮೇಲೆ ಕೊಡುಕೊಳ್ಳುವಿಕೆ ಇರುವುದು ಸಹಜ.

---------------------

ಪಪ್ಪು (ರಾಹುಲ್ ಗಾಂಧಿ) ಈಗ ಪರಮ ಪೂಜ್ಯರಾಗಿ ಬದಲಾಗಿದ್ದಾರೆ - ರಾಜ್‌ಠಾಕ್ರೆ, ಎಂ.ಎನ್.ಎಸ್ ಮುಖಂಡ

ತಾವು ರಾಹುಲ್‌ಸೇನೆ ಕಟ್ಟಲು ಹೊರಟಂತಿದೆ.

---------------------

ಆರ್‌ಬಿಐ ಸ್ವಾಯತ್ತೆ ಎತ್ತಿ ಹಿಡಿಯಲು ಪ್ರಯತ್ನಿಸುವೆ - ಶಕ್ತಿಕಾಂತ್ ದಾಸ್, ಆರ್‌ಬಿಐ ಗವರ್ನರ್
ಎತ್ತಿ ಯಾರ ಕೈಗೆ ಒಪ್ಪಿಸಲಿದ್ದೀರಿ ಎನ್ನುವುದನ್ನು ಹೇಳಿ ಬಿಡಿ.

---------------------

ಹಿಂದೆ ಮೂರು ವರ್ಷ ಸಚಿವನಾಗಿ ಮೂರು ಕೋಟಿ ರೂಪಾಯಿ ಸಾಲ ಮಾಡಿಕೊಂಡೆ - ಎಸ್.ಆರ್.ಪಾಟೀಲ್, ಮೇಲ್ಮನೆ ಸದಸ್ಯ

ಯಾವ ಬ್ಯಾಂಕನ್ನು ಮುಳುಗಿಸಹೊರಟಿದ್ದೀರಿ ಎನ್ನುವುದನ್ನೂ ಹೇಳಿ.

---------------------

ನಾನು ನಾಲ್ಕು ಕಾದಂಬರಿ ಬರೆದಿದ್ದೇನೆ, ಆಸಕ್ತಿ ಇದ್ದರೆ ಅದು ನಿಮ್ಮಿಂದಲೂ ಸಾಧ್ಯ - ಡಾ.ವೀರಪ್ಪ ಮೊಯ್ಲಿ, ಸಂಸದ

ಬರೆಯುವುದು ಮುಖ್ಯವಲ್ಲ, ಓದುವವರೂ ಬೇಕು.

---------------------

ಚೌಕಿದಾರ ಯಾವತ್ತೂ ಚೋರ ಆಗಿರಲು ಸಾಧ್ಯವಿಲ್ಲ - ಅಮಿತ್‌ಶಾ, ಬಿಜೆಪಿ ಅಧ್ಯಕ್ಷ

ಆದರೆ ಚೋರ ಕೆಲವೊಮ್ಮೆ ಚೌಕಿದಾರ ಆಗುವ ಸಾಧ್ಯತೆಗಳಿರುತ್ತವೆ.

---------------------

ಮಹಿಳಾ ಪೊಲೀಸರಿಗೆ ಪ್ಯಾಂಟ್ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಲಾಗುವುದು - ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಸೀರೆಯೊಳಗೆ ಪಿಸ್ತೂಲನ್ನು ಎಲ್ಲಿ ಇಟ್ಟುಕೊಳ್ಳುವುದು ?
---------------------

ಭಾರತ ಅಮೆರಿಕದ ನಿಜವಾದ ನಂಬಿಕಸ್ಥ ಸ್ನೇಹಿತ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಈ ಹಿಂದೆ ಪಾಕಿಸ್ತಾನವೂ ಇದನ್ನು ಕೇಳಿ ಹಿರಿ ಹಿರಿ ಹಿಗ್ಗಿತ್ತು. 

---------------------

ಭಾರತಕ್ಕಾಗಿ ದುಡಿದ ಪ್ರಧಾನಿ ಮೋದಿಯ ನಾಯಕತ್ವದ ಬಗ್ಗೆ ಅನುಮಾನ ಪಡುವುದು ಸರಿಯಲ್ಲ - ಬಾಬಾ ರಾಮ್‌ದೇವ್, ಯೋಗಗುರು

ಪತಂಜಲಿ ಸಂಸ್ಥೆಯನ್ನೇ ಭಾರತ ಎಂದು ನಂಬಲು ಕರೆಕೊಟ್ಟಂತಿದೆ.

---------------------

ವಿಜಯ ಮಲ್ಯ ಕಳ್ಳ ಅಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ

ಕಳ್ಳನಿಗೆ ಸುಳ್ಳನ ಸಾಕ್ಷಿ.

---------------------

ತನ್ನದೇ ಪ್ರಜೆಗಳನ್ನು ಕೊಲ್ಲುವ ಯಾವುದೇ ದೇಶ ಯುದ್ಧ ಗೆಲ್ಲುವುದಿಲ್ಲ - ಮೆಹಬೂಬ ಮುಫ್ತಿ, ಜಮ್ಮು - ಕಾಶ್ಮೀರ ಮಾಜಿ ಮುಖ್ಯಮಂತ್ರಿ

 ತನ್ನ ಪ್ರಜೆಗಳು ಎಂದು ಸರಕಾರ ಭಾವಿಸುವುದು ಮುಖ್ಯ.

share
ಪಿ.ಎ.ರೈ
ಪಿ.ಎ.ರೈ
Next Story
X