ಎಸ್ಸೆಸ್ಸೆಫ್ ಮಣಿಪುರ ಶಾಖೆ ಮಹಾಸಭೆ
ಕಟಪಾಡಿ, ಡಿ.17: ಎಸ್ಸೆಸ್ಸೆಫ್ ಕಟಪಾಡಿ ಸೆಕ್ಟರ್ ವ್ಯಾಪ್ತಿಯ ಮಣಿಪುರ ಶಾಖೆಯ ಮಹಾಸಭೆ ಹಾಗೂ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಮಣಿಪುರದಲ್ಲಿ ಇತ್ತೀಚೆಗೆ ನಡೆಯಿತು.
ಉಡುಪಿ ಜಿಲ್ಲಾ ಎಸ್ವೈಎಸ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವು ಕಲ್ಕಟ್ಟ ದುವಾ ನೆರವೇರಿಸಿದರು. ಶಾಖಾಧ್ಯಕ್ಷ ಸಲ್ಮಾನ್ ಅಧ್ಯಕ್ಷತೆ ವಹಿಸಿದ್ದರು. ವೀಕ್ಷಕ ರಾಗಿ ಶಾಹುಲ್ ದೊಡ್ಡಣಗುಡ್ಡೆ ಆಗಮಿಸಿದ್ದರು. ಪ್ರಧಾನ ಕಾರ್ಯದರ್ಶಿ ಅನ್ಸಾರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಝೀರ್ ತೋಕೊಲಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ರಾಹಿಲ್, ಕೋಶಾಧಿಕಾರಿಯಾಗಿ ಇಬ್ರಾಹಿಂ ಫಾಲಿಲಿ, ಉಪಾಧ್ಯಕ್ಷರಾಗಿ ಇರ್ಶಾದ್ ಮುನ್ನ, ಸುಹೈಲ್, ಜೊತೆ ಕಾರ್ಯದರ್ಶಿಯಾಗಿ ಇರ್ಶಾದ್, ಸಿರಾಜ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮಹಮ್ಮದ್ ಅಫ್ರೀದ್, ಸೆಕ್ಟರ್ ಕೌನ್ಸಿಲ್ ಸದಸ್ಯರಾಗಿ ಸಲ್ಮಾನ್, ನಿಝಾಮುದ್ದೀನ್, ಅನ್ಸಾರ್, ಸುಹೈಲ್, ಇಬ್ರಾಹಿಂ ಫಾಲಿಲಿ, ಈಝುದ್ದೀನ್, ನಝೀರ್ ತೋಕೊಲಿ, ಶಾಹಿದ್, ಇರ್ಶಾದ್, ಅಫ್ರೀದ್ ಅವರನ್ನು ಆರಿಸಲಾಯಿತು.