Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಇಂದು ಐಪಿಎಲ್ ಆಟಗಾರರ ಹರಾಜು: ಒಟ್ಟು 346...

ಇಂದು ಐಪಿಎಲ್ ಆಟಗಾರರ ಹರಾಜು: ಒಟ್ಟು 346 ಕ್ರಿಕೆಟಿಗರು ಕಣದಲ್ಲಿ

ವಾರ್ತಾಭಾರತಿವಾರ್ತಾಭಾರತಿ17 Dec 2018 11:49 PM IST
share
ಇಂದು ಐಪಿಎಲ್ ಆಟಗಾರರ ಹರಾಜು: ಒಟ್ಟು 346 ಕ್ರಿಕೆಟಿಗರು ಕಣದಲ್ಲಿ

ಜೈಪುರ, ಡಿ.17: 2019ರ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ವಿವಿಧ 8 ಫ್ರಾಂಚೈಸಿಗಳ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ‘ಪಿಂಕ್ ಸಿಟಿ’ಖ್ಯಾತಿಯ ಜೈಪುರದಲ್ಲಿ ಒಂದೇ ದಿನ ನೆರವೇರಲಿದೆ.

ಈ ಹಿಂದೆ 1,003 ಆಟಗಾರರು ಹೆಸರನ್ನು ನೋಂದಾಯಿಸಿದ್ದರು. ಫ್ರಾಂಚೈಸಿಗಳು ತಮ್ಮ ಅಂತಿಮ ಪಟ್ಟಿಯನ್ನು ಸಲ್ಲಿಸಿದ ಬಳಿಕ ಒಟ್ಟು 346 ಕ್ರಿಕೆಟಿಗರು ಹರಾಜಿನ ಅಂಗಣದಲ್ಲಿದ್ದಾರೆ. 70 ಸ್ಥಾನಗಳಿಗಾಗಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.

ಹರಾಜಿನಲ್ಲಿ ಭಾಗವಹಿಸುವ ತಂಡಗಳ ವಿವರ

►ಚೆನ್ನೈ ಸೂಪರ್ ಕಿಂಗ್ಸ್:

ಹಾಲಿ ಚಾಂಪಿಯನ್ ಚೆನ್ನೈ 2018ರಲ್ಲಿ ಮೂರನೇ ಬಾರಿ ಐಪಿಎಲ್ ಟ್ರೋಫಿ ಜಯಿಸಿದ್ದ ಹೆಚ್ಚಿನೆಲ್ಲಾ ಆಟಗಾರರನ್ನು ಉಳಿಸಿಕೊಂಡಿದೆ. ಚೆನ್ನೈ ತಂಡದಲ್ಲಿ ಇನ್ನು 2 ಸ್ಥಾನ ಖಾಲಿಯಿದೆ. ಎರಡೂ ಸ್ಥಾನಗಳು ಭಾರತದ ಆಟಗಾರರು ತುಂಬಲಿದ್ದಾರೆ. ತಂಡದ ಕೈಯ್ಯಲ್ಲಿ 8.40 ಕೋ.ರೂ.ಇದೆ.

►ಸನ್‌ರೈಸರ್ಸ್ ಹೈದರಾಬಾದ್:2016ರ ಐಪಿಎಲ್ ಚಾಂಪಿಯನ್‌ಗೆ ಹರಾಜಿನಲ್ಲಿ ಭರ್ತಿ ಮಾಡಲು 5 ಸ್ಥಾನ ಖಾಲಿಯಿದೆ. ಕಳೆದ ಋತುವಿನಲ್ಲಿದ್ದ 17 ಆಟಗಾರರನ್ನು ಉಳಿಸಿಕೊಂಡಿದೆ. 2018ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹೈದರಾಬಾದ್ ಫೈನಲ್‌ನಲ್ಲಿ ಎಡವಿ 2ನೇ ಸ್ಥಾನ ಪಡೆದಿತ್ತು.9.70 ಕೋ.ರೂ.ಹೊಂದಿರುವ ಸನ್‌ರೈಸರ್ಸ್ ಭಾರತ 3 ಹಾಗೂ ವಿದೇಶದ ಇಬ್ಬರನ್ನು ಆಯ್ಕೆ ಮಾಡಬೇಕು.

►ಕೋಲ್ಕತಾ ನೈಟ್ ರೈಡರ್ಸ್: ಎರಡು ಬಾರಿಯ ಚಾಂಪಿಯನ್ ಕೆಕೆಆರ್ 2018ರಲ್ಲಿ ಫೈನಲ್‌ಗೆ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಈ ಬಾರಿ ತಂಡವನ್ನು ಬಲಿಷ್ಠಗೊಳಿಸಲು ಬಯಸಿದೆ. ಕಳೆದ ಋತುವಿನ 13 ಆಟಗಾರರನ್ನು ಉಳಿಸಿಕೊಂಡಿರುವ ಕೆಕೆಆರ್ ಮಂಗಳವಾರದ ಹರಾಜಿನಲ್ಲಿ ಭಾರತದ ಗರಿಷ್ಠ 7 ಹಾಗೂ ವಿದೇಶದ 5 ಆಟಗಾರರಿಗೆ ಬಿಡ್ ಸಲ್ಲಿಸಬಹುದು. ಕಳೆದ ವರ್ಷ 3ನೇ ಸ್ಥಾನ ಪಡೆದಿದ್ದ ಕೋಲ್ಕತಾ ಬಳಿ 15.20 ಕೋ.ರೂ. ಇದೆ.

►ರಾಜಸ್ಥಾನ ರಾಯಲ್ಸ್:ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ತಂಡದೊಂದಿಗೆ ಕಳೆದ ವರ್ಷ 2 ವರ್ಷಗಳ ನಿಷೇಧ ಅವಧಿ ಪೂರೈಸಿ ಟೂರ್ನಿಗೆ ವಾಪಸಾಗಿತ್ತು. ರಾಜಸ್ಥಾನ 4ನೇ ಸ್ಥಾನ ಪಡೆದಿತ್ತು. 2018ರ ಆವೃತ್ತಿಯಲ್ಲಿ ಆಡಿದ್ದ 16 ಆಟಗಾರರನ್ನು ಉಳಿಸಿಕೊಂಡಿದೆ. 9 ಆಟಗಾರರ ಸ್ಥಾನ ತೆರವಾಗಿದೆ. ರಾಜಸ್ಥಾನ ತನ್ನ ಖಾತೆಯಲ್ಲಿ 20.95 ಕೋ.ರೂ.ಹೊಂದಿದೆ. ಭಾರತದ ಗರಿಷ್ಠ 6 ಹಾಗೂ ವಿದೇಶದ ಮೂವರು ಆಟಗಾರರನ್ನು ಖರೀದಿಸಲು ಅವಕಾಶವಿದೆ.

►ಮುಂಬೈ ಇಂಡಿಯನ್ಸ್:ಎರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 2018ರಲ್ಲಿ 5ನೇ ಸ್ಥಾನ ಪಡೆದು ನಿರಾಸೆಗೊಳಿಸಿತ್ತು. ಕಳೆದ ಆವೃತ್ತಿಯ 17 ಆಟಗಾರರನ್ನು ಉಳಿಸಿಕೊಂಡಿರುವ ಮುಂಬೈ, ಆರ್‌ಸಿಬಿಯಿಂದ ಕ್ವಿಂಟನ್ ಡಿಕಾಕ್‌ರನ್ನು ಖರೀದಿಸಿದೆ. 7 ಸ್ಥಾನ ತೆರವಾಗಿದ್ದು, ಭಾರತದ 6 ಹಾಗೂ ವಿದೇಶದ ಒಬ್ಬ ಆಟಗಾರನನ್ನು ಖರೀದಿಸಬಹುದು. ಹರಾಜಿನಲ್ಲಿ ಒಟ್ಟು 11.15 ಕೋ.ರೂ.ವ್ಯಯಿಸಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಟಾರ್ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಮತ್ತೊಮ್ಮೆ 15 ಆಟಗಾರರನ್ನು ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿ ಆರನೇ ಸ್ಥಾನ ಪಡೆದಿತ್ತು. ಆರ್‌ಸಿಬಿಗೆ 10 ಸ್ಥಾನ ತುಂಬಲು ಬಾಕಿಯಿದ್ದು, 18.15 ಕೋ.ರೂ. ಹೊಂದಿದೆ.

►ಕಿಂಗ್ಸ್ ಇಲೆವೆನ್ ಪಂಜಾಬ್:ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿದ್ದ ಪಂಜಾಬ್ ತಂಡ ಕನಿಷ್ಠ 10 ಆಟಗಾರರನ್ನು ಉಳಿಸಿಕೊಂಡಿದೆ. ಹರಾಜಿನಲ್ಲಿ 15 ಆಟಗಾರರನ್ನು ಭರ್ತಿ ಮಾಡಿಕೊಳ್ಳಬೇಕಾಗಿದೆ. ತಂಡದ ಬಳಿ 36.20 ಕೋ.ರೂ. ಇದೆ. 11 ಸ್ಥಾನಗಳು ಭಾರತೀಯರಿಗೆ ಮೀಸಲಾಗಿದೆ.

►ಡೆಲ್ಲಿ ಡೇರ್ ಡೆವಿಲ್ಸ್: ಕಳೆದ ವರ್ಷ ನೀರಸ ಪ್ರದರ್ಶನ ನೀಡಿದ್ದ ಡೆಲ್ಲಿ ತಂಡ ಈ ಬಾರಿ ತನ್ನ ಹೆಸರನ್ನು ಡೆಲ್ಲಿ ಕ್ಯಾಪಿಟಲ್ಸ್ ಎಂದು ಬದಲಾಯಿಸಿಕೊಂಡಿದೆ. 14 ಆಟಗಾರರನ್ನು ಉಳಿಸಿಕೊಂಡಿರುವ ಡೆಲ್ಲಿ 10 ಸ್ಥಾನಗಳನ್ನು(ಭಾರತ 7,ವಿದೇಶಿಗರು-3) ಭರ್ತಿ ಮಾಡಬೇಕಾಗಿದೆ. ಕೈಯ್ಯಲ್ಲಿ 25.50 ಕೋ.ರೂ. ಇದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X