ಉರ್ಜಿತ್ ಪಟೇಲ್ ರಾಜೀನಾಮೆಗೆ ಸರಕಾರ ಯಾವತ್ತೂ ಒತ್ತಡ ಹೇರಿಲ್ಲ : ಅರುಣ್ ಜೇಟ್ಲಿ
![ಉರ್ಜಿತ್ ಪಟೇಲ್ ರಾಜೀನಾಮೆಗೆ ಸರಕಾರ ಯಾವತ್ತೂ ಒತ್ತಡ ಹೇರಿಲ್ಲ : ಅರುಣ್ ಜೇಟ್ಲಿ ಉರ್ಜಿತ್ ಪಟೇಲ್ ರಾಜೀನಾಮೆಗೆ ಸರಕಾರ ಯಾವತ್ತೂ ಒತ್ತಡ ಹೇರಿಲ್ಲ : ಅರುಣ್ ಜೇಟ್ಲಿ](https://www.varthabharati.in/sites/default/files/images/articles/2018/12/18/168527.jpg)
ಹೊಸದಿಲ್ಲಿ, ಡಿ. 18: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡುವಂತೆ ಉರ್ಜಿತ್ ಪಟೇಲ್ ರಿಗೆ ಸರಕಾರ ಯಾವತ್ತೂ ಒತ್ತಡ ಹೇರಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಅಜೆಂಡಾ ಆಜ್ ತಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರಕಾರಕ್ಕೆ ಆರ್ ಬಿ ಐ ಮೀಸಲು ನಿಧಿಯಿಂದ ಈಗಿನ ಆರ್ಥಿಕ ವರ್ಷದಲ್ಲಿ ನಯಾ ಪೈಸೆ ಕೂಡ ಬೇಕಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.
ಪಟೇಲ್ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಸರಕಾರ ಎದುರಿಸಬೇಕಾದ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ''ಆರ್ ಬಿ ಐ ಹೊಂದಬೇಕಾದ ಸೂಕ್ತ ಮೀಸಲು ಮೊತ್ತದ ಕುರಿತಂತೆ ಆರ್ ಬಿ ಐ ಮಂಡಳಿ ಸಭೆಯಲ್ಲಿ ಸೌಹಾರ್ದಯುತ ಮಾತುಕತೆಗಳು ನಡೆದಿತ್ತು'' ಎಂದು ಜೇಟ್ಲಿ ಹೇಳಿದ್ದಾರೆ.
''ಸರಕಾರ ಯಾವತ್ತೂ ಅವರ ರಾಜೀನಾಮೆ ಕೇಳಿಲ್ಲ'' ಎಂದು ಜೇಟ್ಲಿ ಮತ್ತೆ ಸ್ಪಷ್ಟ ಪಡಿಸಿದರು.
Next Story