ಜೂಜು ಅಡ್ಡೆಗೆ ಸಿಸಿಬಿ ದಾಳಿ: 23 ಮಂದಿಯ ಬಂಧನ
![ಜೂಜು ಅಡ್ಡೆಗೆ ಸಿಸಿಬಿ ದಾಳಿ: 23 ಮಂದಿಯ ಬಂಧನ ಜೂಜು ಅಡ್ಡೆಗೆ ಸಿಸಿಬಿ ದಾಳಿ: 23 ಮಂದಿಯ ಬಂಧನ](https://www.varthabharati.in/sites/default/files/images/articles/2018/12/18/168580.jpg)
ಬೆಂಗಳೂರು, ಡಿ.18: ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪದಡಿ 23 ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 71 ಸಾವಿರ ರೂ. ನಗರದ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಬಿ.ಇ.ಎಲ್ ರಸ್ತೆ, ಚಿಕ್ಕಮಾರನಹಳ್ಳಿ, ದೇವಸಂದ್ರದ ಕಟ್ಟಡವೊಂದರಲ್ಲಿ ಸಾಯಿ ಚಿರಾಗ್ ಸ್ಪೋರ್ಟ್ಸ್ ರಿಕ್ರಿಯೇಷನ್ ಅಸೋಶಿಯೇಷನ್ ಕ್ಲಬ್ನಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Next Story