Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಬಡತನದಲ್ಲಿ ಅರಳಿದ ಕುಸುಮ ರಜನಿಗೆ ಚಿನ್ನದ...

ಬಡತನದಲ್ಲಿ ಅರಳಿದ ಕುಸುಮ ರಜನಿಗೆ ಚಿನ್ನದ ಪದಕ

ಜೂನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್

ವಾರ್ತಾಭಾರತಿವಾರ್ತಾಭಾರತಿ19 Dec 2018 11:29 PM IST
share
ಬಡತನದಲ್ಲಿ ಅರಳಿದ ಕುಸುಮ ರಜನಿಗೆ ಚಿನ್ನದ ಪದಕ

ನಾನು ಆರು ಮಂದಿ ಒಡಹುಟ್ಟಿದವರ ಪೈಕಿ ಮೂರನೇಯವಳು. ನಾನು ಬೆಳಗ್ಗೆ ಎದ್ದೇಳುವ ಮೊದಲೇ ತಂದೆ ತನ್ನ ಕೆಲಸ ಆರಂಭಿಸುತ್ತಾರೆ. ಹಳ್ಳಿ ಮನೆಗಳಿಂದ ಲಸ್ಸಿಯನ್ನು ಸಂಗ್ರಹಿಸುತ್ತಾರೆ. ನಮ್ಮ ಹಳ್ಳಿಯಿಂದ ಪಾಣಿಪತ್‌ಗೆ ಬೈಕ್‌ನಲ್ಲಿ ಹೋಗಿ ಲಸ್ಸಿ ಮಾರಾಟ ಮಾಡುತ್ತಾರೆ. ನಾನು ಬಾಕ್ಸಿಂಗ್‌ನತ್ತ ಒಲವು ತೋರಿದಾಗ ಅವರು ನನಗೆ ಬೆಂಬಲ ನೀಡಿದ್ದರು. ನನ್ನ ಹಳ್ಳಿಯಲ್ಲಿ ಸುರಿಂದರ್ ಸಿಂಗ್‌ರಿಂದ ತರಬೇತಿ ಪಡೆಯುತ್ತಿದ್ದೇನೆ. ಹಳೆಯ ಗ್ಲೌಸ್‌ವೊಂದಿಗೆ ಬಾಕ್ಸಿಂಗ್ ಅಭ್ಯಾಸ ಮಾಡುತ್ತೇನೆ. ಒಂದು ಕಾಲದಲ್ಲಿ ನಮಗೆ ಮೂರು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ. ನನ್ನ ತಾಯಿ ಉಷಾ ರಾಣಿ ಉಳಿದ ಅಲ್ಪಸ್ವಲ್ಪ ಮೊಸರಿನಿಂದ ತುಪ್ಪ ಮಾಡಿ ನನಗೆ ನೀಡುತ್ತಿದ್ದರು

ರಜನಿ, ಚಿನ್ನದ ಪದಕ ವಿಜೇತೆ

ಚಂಡಿಗಡ, ಡಿ.19: ದ್ವಿತೀಯ ಆವೃತ್ತಿಯ ಜೂನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತರಪ್ರದೇಶದ 16ರ ಹರೆಯದ ರಜನಿ ಚಿನ್ನದ ಪದಕ ಜಯಿಸಿ ಗಮನ ಸೆಳೆದಿದ್ದಾರೆ.

ಚಂಡೀಗಡ ಯುನಿವರ್ಸಿಟಿಯಲ್ಲಿ ನಡೆದ ಮಹಿಳೆಯರ 48 ಕೆಜಿ ಫೈನಲ್‌ನಲ್ಲಿ ರಾಗಿನಿ ಉಪಾಧ್ಯಾಯ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿ ಚಿನ್ನದ ನಗೆ ಬೀರಿದರು.

ರಜನಿ ಪದಕ ಸ್ವೀಕರಿಸಿದ ತಕ್ಷಣ ಹಾಲ್‌ನ ಹೊರಗಿರುವ ಮಿಲ್ಕ್ ಬೂತ್‌ನತ್ತ ಓಡಿ ಒಂದು ಗ್ಲಾಸ್ ಹಾಲು ಕುಡಿದರು. ಆ ಬಳಿಕ ತನ್ನ ಬಟ್ಟೆಯಿಂದ ಪದಕವನ್ನು ಸ್ವಚ್ಛಗೊಳಿಸಿ ತನ್ನ ಬ್ಯಾಗ್‌ನಲ್ಲಿರಿಸಿದರು. ತನ್ನ ತಂದೆ ಜಸ್ಮೀರ್ ಸಿಂಗ್ ಕೈಗೆ ನೀಡುವ ತನಕ ಪದಕವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ರಜನಿಯ ಉದ್ದೇಶವಾಗಿತ್ತು.

ತನ್ನನ್ನು ಬಾಕ್ಸರ್ ಆಗಿ ರೂಪಿಸಿದ ತಂದೆ ಪ್ರತಿದಿನ ಎಷ್ಟೊಂದು ಕಷ್ಟಪಡುತ್ತಾರೆಂದು ರಜನಿಗೆ ಚೆನ್ನಾಗಿ ಗೊತ್ತಿದೆ. ರಜನಿ ತಂದೆ ದಿನಕ್ಕೆ 12 ಗಂಟೆ ಕಾಲ ಪಾಣಿಪತ್‌ನಲ್ಲಿ ಲಸ್ಸಿ ಮಾರುತ್ತಾರೆ. ‘‘ನಾನು ಆರು ಮಂದಿ ಒಡಹುಟ್ಟಿದವರ ಪೈಕಿ ಮೂರನೇಯವಳು. ನಾನು ಬೆಳಗ್ಗೆ ಎದ್ದೇಳುವ ಮೊದಲೇ ತಂದೆ ತನ್ನ ಕೆಲಸ ಆರಂಭಿಸುತ್ತಾರೆ. ಹಳ್ಳಿ ಮನೆಗಳಿಂದ ಲಸ್ಸಿಯನ್ನು ಸಂಗ್ರಹಿಸುತ್ತಾರೆ. ನಮ್ಮ ಹಳ್ಳಿಯಿಂದ ಪಾಣಿಪತ್‌ಗೆ ಬೈಕ್‌ನಲ್ಲಿ ಹೋಗಿ ಲಸ್ಸಿ ಮಾರಾಟ ಮಾಡುತ್ತಾರೆ. ನಾನು ಬಾಕ್ಸಿಂಗ್‌ನತ್ತ ಒಲವು ತೋರಿದಾಗ ಅವರು ನನಗೆ ಬೆಂಬಲ ನೀಡಿದ್ದರು. ನನ್ನ ಹಳ್ಳಿಯಲ್ಲಿ ಸುರಿಂದರ್ ಸಿಂಗ್‌ರಿಂದ ತರಬೇತಿ ಪಡೆಯುತ್ತಿದ್ದೇನೆ. ಹಳೆಯ ಗ್ಲೌಸ್‌ವೊಂದಿಗೆ ಬಾಕ್ಸಿಂಗ್ ಅಭ್ಯಾಸ ಮಾಡುತ್ತೇನೆ. ನಮಗೆ ಒಂದು ಕಾಲದಲ್ಲಿ ಮೂರು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ. ನನ್ನ ತಾಯಿ ಉಷಾ ರಾಣಿ ಉಳಿದ ಅಲ್ಪಸ್ವಲ್ಪ ಮೊಸರಿನಿಂದ ತುಪ್ಪ ಮಾಡಿ ನನಗೆ ನೀಡುತ್ತಿದ್ದರು’’ ಎಂದು ರಜನಿ ತನ್ನ ಬಾಲ್ಯದ ಕಷ್ಟವನ್ನು ನೆನಪಿಸಿಕೊಂಡರು.

ರಜನಿ ತನ್ನ ಹಳ್ಳಿಯ ಫುಲ್ ಸಿಂಗ್ ಸ್ಮಾರಕ ಬಾಕ್ಸಿಂಗ್ ಕ್ಲಬ್‌ನಲ್ಲಿ ಕೋಚ್ ಮಲಿಕ್‌ರಿಂದ ತರಬೇತಿಯನ್ನು ಆರಂಭಿಸಿದ್ದರು. ಕಳೆದ ವರ್ಷ ಡೆಹ್ರಾಡೂನ್‌ನಲ್ಲಿ ನಡೆದ ಮೊದಲ ಬಿಎಸ್‌ಎಫ್ ಜೂನಿಯರ್ ನ್ಯಾಶನಲ್ಸ್‌ನಲ್ಲಿ 46 ಕೆಜಿ ವಿಭಾಗದಲ್ಲಿ ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.

ಈ ವರ್ಷ ಸರ್ಬಿಯದಲ್ಲಿ ನಡೆದಿರುವ ನೇಶನ್ಸ್ ಜೂನಿಯರ್ ಕಪ್‌ನಲ್ಲಿ ಚಿನ್ನ ಪದಕ ಜಯಿಸಿದ್ದಾರೆ. ಫೈನಲ್‌ನಲ್ಲಿ ರಶ್ಯದ ಅನಸ್ಟೇಸಿಯ ಕಿರಿಯೆಂಕೊರನ್ನು ಮಣಿಸಿದ್ದರು. ರಜನಿಗೆ ಅದು ಮೊದಲ ವಿದೇಶ ಪ್ರವಾಸವಾಗಿತ್ತು. ‘‘ನನ್ನ ಹಳ್ಳಿಯಿಂದ 100 ಕಿ.ಮೀ. ದೂರದಲ್ಲಿರುವ ಪಾಣಿಪತ್‌ಗೆ ಬೈಕ್‌ನಲ್ಲಿ ತೆರಳಿ ಲಸ್ಸಿ ಮಾರುತ್ತೇನೆ. ಕೆಲವೊಮ್ಮೆ 400-500 ರೂ.ಲಾಭವಾಗುತ್ತದೆ. ಬೇಸಿಗೆಯಲ್ಲಿ ಲಸ್ಸಿ ಬೇಗನೆ ಕೆಡುತ್ತದೆ. ಆಗ ಲಾಭ ಇರುವುದಿಲ್ಲ. ರಜನಿ ಬಾಕ್ಸಿಂಗ್‌ನಲ್ಲಿ ಆಸಕ್ತಿ ತೋರಿದಾಗ ನಾವು ಮಾಡದ್ದನ್ನು ಆಕೆ ಮಾಡಬೇಕೆಂದು ಬಯಸಿದ್ದೆವು’’ ಎಂದು ರಜನಿ ತಂದೆ ಜಸ್ಮೀರ್ ಸಿಂಗ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X