ಸೊಹ್ರಾಬುದ್ದೀನ್, ಪ್ರಜಾಪತಿ ಎನ್ ಕೌಂಟರ್ ಪ್ರಕರಣ : ಎಲ್ಲ ಆರೋಪಿಗಳು ಖುಲಾಸೆ
![ಸೊಹ್ರಾಬುದ್ದೀನ್, ಪ್ರಜಾಪತಿ ಎನ್ ಕೌಂಟರ್ ಪ್ರಕರಣ : ಎಲ್ಲ ಆರೋಪಿಗಳು ಖುಲಾಸೆ ಸೊಹ್ರಾಬುದ್ದೀನ್, ಪ್ರಜಾಪತಿ ಎನ್ ಕೌಂಟರ್ ಪ್ರಕರಣ : ಎಲ್ಲ ಆರೋಪಿಗಳು ಖುಲಾಸೆ](https://www.varthabharati.in/sites/default/files/images/articles/2018/12/21/169016.jpg)
ಸೊಹ್ರಾಬುದ್ದೀನ್ ಶೇಖ್
ಮುಂಬೈ , ಡಿ.21 : ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಂ ಪ್ರಜಾಪತಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಎಲ್ಲ 22 ಆರೋಪಿಗಳನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಶುಕ್ರವಾರ ದೋಷ ಮುಕ್ತಗೊಳಿಸಿ ತೀಪು ನೀಡಿದೆ.
ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಂ ಪ್ರಜಾಪತಿ ಎಂಬವರನ್ನು ಕೊಲ್ಲಲಾಗಿದೆ ಎಂಬ ವಿಚಾರದಲ್ಲಿ ಪ್ರಬಲ ಸಾಕ್ಷ್ಯಾಧರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಸೊಹ್ರಾಬುದ್ದೀನ್ ನನ್ನು 2005ರಲ್ಲಿ ಮತ್ತು ಆತನ ಸಹಚರ ತುಳಸಿರಾಂ ಪ್ರಜಾಪತಿಯನ್ನು 2006ರಲ್ಲಿ ಎನ್ ಕೌಂಟರ್ ನಡೆಸಿ ಕೊಲ್ಲಲಾಗಿತ್ತು. ಈ ಎರಡೂ ಎನ್ ಕೌಂಟರ್ ಗಳೂ ನಕಲಿ ಎಂದು ಆರೋಪ ಮಾಡಲಾಗಿತ್ತು
Next Story