ಆತ್ಮಸಾಕ್ಷಿಗನುಗುಣವಾಗಿ ರಾಜೀನಾಮೆ ನೀಡಿದೆ: ನ್ಯಾ.ಶಿವರಾಜ್ ಪಾಟೀಲ್
ಬೆಂಗಳೂರು, ಡಿ.22: ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ಮೇಲೆ ಲೋಕಾಯುಕ್ತ ಹುದ್ದೆಗೆ ನೇಮಿಸಿದ್ದಾಗ ನಾನು ಯಾವುದೇ ಅನ್ಯಾಯ ಎಸಗದಿದ್ದರೂ, ಅನಗತ್ಯವಾಗಿ ಆರೋಪ ಮಾಡಲಾಯಿತು. ನನ್ನ ಆತ್ಮಸಾಕ್ಷಿಗನುಗುಣವಾಗಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದೆ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾ.ಶಿವರಾಜ್ ವಿ.ಪಾಟೀಲ್ ಅಭಿಪ್ರಾಯಪಟ್ಟರು.
ಶನಿವಾರ ನಗರದ ಕಸಾಪದಲ್ಲಿ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಾಯುಕ್ತ ಹುದ್ದೆ ನನಗೆ ಅಗತ್ಯವಿರಲಿಲ್ಲ. ರಾಜ್ಯ ಮಟ್ಟದ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ನಿಯಮಗಳೇನೂ ಇಲ್ಲ. ಆದರೂ ನೇಮಿಸಿದ್ದರು. ಆದರೆ, ಯಾವುದೇ ತಪ್ಪು ಮಾಡದಿದ್ದರೂ ಆರೋಪ ಮಾಡಿದರು. ಹೀಗಾಗಿ, ಇದನ್ನು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಅದಕ್ಕೆ ರಾಜೀನಾಮೆ ನೀಡಿದೆ ಎಂದರು.
ಲೋಕಾಯುಕ್ತ ನ್ಯಾಯಮೂರ್ತಿ ಸ್ಥಾನದಲ್ಲಿ ಕುಳಿತು ಇನ್ನೊಬ್ಬರಿಗೆ ನ್ಯಾಯ ಕೊಡುವಾಗ ಯಾವುದೇ ಸಂಶಯಕ್ಕೆ ಆಸ್ಪದ ನೀಡಬಾರದು ಎಂದು ನನ್ನ ಆತ್ಮಸಾಕ್ಷಿ ಹೇಳಿತು. ಹಾಗಾಗಿ, ನಾನು ಯಾವುದೇ ತಪ್ಪು ಮಾಡದಿದ್ದರೂ ಈ ಹುದ್ದೆ ನನಗೆ ಬೇಡ ಅನ್ನಿಸಿತು. ಆತ್ಮಸಾಕ್ಷಿಗನುಗುಣವಾಗಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದೆ. ದಾವಣಗೆರೆಯಲ್ಲಿ ನಡೆದ ಸಾರ್ವಜನಿಕರ ಸಮಾರಂಭದಲ್ಲಿ ಸಿರಿಗೆರೆ ಶ್ರೀಗಳು ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಎಂದು ನುಡಿದರು.
ಯಾವುದೇ ವ್ಯಕ್ತಿ ಸಾಧನೆ ಮಾಡಬೇಕಾದರೆ ಗುರಿ, ಪರಿಶ್ರಮ, ಸಮಯದ ಸದುಪಯೋಗ, ಶಿಸ್ತು ಮತ್ತು ತಾಳ್ಮೆ ಇರಬೇಕು. ರಾಯಚೂರು ಜಿಲ್ಲೆ, ದೇವರಾಯದುರ್ಗ ತಾಲೂಕು, ಅತ್ಯಂತ ಹಿಂದುಳಿದ ಮಲದಕಲ್ಲು ಗ್ರಾಮದಲ್ಲಿ ಹುಟ್ಟಿದ ನಾನು, ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಸ್ವಗ್ರಾಮದಲ್ಲಿ ಪೂರೈಸಿದೆ. ಪ್ರೌಢಶಾಲೆಯನ್ನು ರಾಯಚೂರು ಮತ್ತು ಕಾನೂನು ಪದವಿಯನ್ನು ಕಲಬುರ್ಗಿಯಲ್ಲಿ ಪಡೆದಿದ್ದು, ಅಲ್ಲಿಂದಲೇ ವಕೀಲ ವೃತ್ತಿಯನ್ನು ಪ್ರಾರಂಭಿಸಿದೆ ಎಂದರು.
ಜಗಜ್ಯೋತಿ ಬಸವೇಶ್ವರ ಮತ್ತು ಸ್ವಾಮಿ ವಿವೇಕಾನಂದ ಅವರು ನನ್ನ ಜೀವನದ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳಾಗಿದ್ದಾರೆ. 55 ವರ್ಷಗಳ ಸುಖಕರ ದಾಂಪತ್ಯ ಜೀವನ ನಮ್ಮದಾಗಿದೆ. ಉತ್ತರ ಕರ್ನಾಟಕದ ಭಾಗದಿಂದ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಮೊದಲಿಗ ನಾನು. ನನ್ನ ಜತೆ ಕೆಲಸ ಮಾಡಿದ ಕಿರಿಯ ವಕೀಲರಲ್ಲಿ ಒಟ್ಟು 40 ಮಂದಿ ಸುಪೀಂಕೋರ್ಟ್, ಹೈಕೋರ್ಟ್ ಸೇರಿದಂತೆ ನಾನಾ ಕೋರ್ಟ್ಗಳಲ್ಲಿ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರಾಗಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ನೆಲೆಸಿರುವ ಬಹಳಷ್ಟು ಕಾರ್ಪೊರೇಟ್ ಕಂಪನಿಗಳು ಸಾಮಾಜಿಕ ಕಾರ್ಯಗಳಿಗೆ ದಾನದ ರೂಪದಲ್ಲಿ ಹಣ ನೀಡಲು ಸಿದ್ಧವಿದ್ದು, ಅದನ್ನು ಸಾಮಾಜಿಕ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಲಾಗುವುದು. ಸಮ್ಮಿಶ್ರ ಸರಕಾರ ದಾನ ನೀಡಲು ಸಿದ್ಧವಿರುವ ಕಂಪನಿಗಳ ಸಹಕಾರ ಪಡೆದು, ಅವರು ನೀಡುವ ಹಣದಲ್ಲಿ ಆಸ್ಪತ್ರೆ, ಶಾಲೆ ನಿರ್ಮಾಣ ಸೇರಿದಂತೆ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಸಿಬ್ಬಂದಿ ನೇಮಕ: ನೂತನ ಕಟ್ಟಡದಿಂದಾಗಿ ರೋಗಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಪೂರಕವಾಗಿ ಸೇವೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿ ಪಟ್ಟಿ ನೀಡಿದರೆ ಒಂದು ವಾರ ಇಲ್ಲವೆ ಹತ್ತು ದಿನಗಳಲ್ಲಿ ನೇಮಕ ಮಾಡಿಕೊಡಲಾಗುವುದು. ಜತೆಗೆ ರೋಗಿಗಳಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ದಾನಿಗಳಾದ ಆರ್.ಕೆ. ಸಿಪಾನಿ, ಧನರಾಜ್ ಡಾಗಾ, ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ, ಡಾ. ಕೆ.ಬಿ.ಲಿಂಗೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.