Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ24 Dec 2018 12:12 AM IST
share
ಓ ಮೆಣಸೇ..

  ಸೋ ಕಾಲ್ಡ್ ಬುದ್ಧಿ ಜೀವಿಗಳಿಂದ ದೇಶಕ್ಕೆ ಗಂಡಾಂತರವಿದೆ
- ರಾಮ್ ಮಾಧವ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
 ಬುದ್ಧಿಯಿಲ್ಲದವರ ಕೈಗೆ ದೇಶ ಕೊಡಿ ಎನ್ನುತ್ತಿದ್ದಾರೆ.

---------------------
  ಮೊಬೈಲ್ ಎಂಬ ಮಾಯೆ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮನ್ನು ಆವರಿಸುವಂತೆ ಮಾಡುತ್ತದೆ
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಆ ಮಾಯೆ ಕೆಲವೊಮ್ಮೆ ಕೋರ್ಟಿನ ಕಟಕಟೆಯವರೆಗೂ ಒಯ್ಯಬಹುದು.

---------------------
  ನಮ್ಮದೇ ರಕ್ತ ಜಗತ್ತು ಆಳಿದರೆ ತಪ್ಪೇನು?
-ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
ನಿಮ್ಮದು ಜಗತ್ತನ್ನು ಅಳಿಸುವುದಕ್ಕಷ್ಟೇ ಲಾಯಕ್ಕು.

---------------------
  ಸಂತ ವಾಲ್ಮೀಕಿ ಬರೆದ ರಾಮಾಯಣದ ಮುಂದೆ ಗೂಗಲ್ ಸೋಲನುಭವಿಸಿದೆ
- ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
 ಮಾರಾಯ, ನೀವು ಮುಖ್ಯಮಂತ್ರಿಯಾದ ದಿನವೇ ವಾಲ್ಮೀಕಿ ಸೋತ.

---------------------
  ಮೋದಿ ಸರಕಾರ ಬಂದ ನಂತರ ದೇಶದ ಆಂತರಿಕ ಭದ್ರತೆಯಲ್ಲಿ ಅಭಿವೃದ್ಧಿಯಾಗಿದೆ
- ರಾಜನಾಥ್‌ಸಿಂಗ್,ಕೇಂದ್ರ ಸಚಿವ
  ಆರ್ಥಿಕ ಅಭಿವೃದ್ಧಿಯ ಕತೆ ಏನು?
---------------------
  ಶಾಸಕ, ಸಚಿವನಾಗಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ದೇವರೇ ಅವಕಾಶ ಕೊಡಲಿಲ್ಲ
- ಪ್ರಮೋದ್ ಮಧ್ವರಾಜ್, ಮಾಜಿ ಸಚಿವ
ಅದಕ್ಕೇ, ನೀವು ಶಾಸಕರಾಗಲು ಜನರು ಅವಕಾಶ ಕೊಡಲಿಲ್ಲ.

---------------------
  ಕಳ್ಳರೆಲ್ಲಾ ಒಟ್ಟಾಗಿ ಚೌಕಿದಾರನನ್ನೇ ಕಳ್ಳನೆಂದು ಕರೆದರೆ ಜನ ಎಂದೂ ಒಪ್ಪಿಕೊಳ್ಳುವುದಿಲ್ಲ
- ವಿಜಯ್ ರೂಪಾನಿ, ಗುಜರಾತ್ ಮುಖ್ಯಮಂತ್ರಿ
ಕಳ್ಳನನ್ನೇ ಚೌಕಿದಾರನನ್ನಾಗಿ ಮಾಡಿರುವುದು ಜನರಿಗೆ ತಡವಾಗಿ ಹೊಳೆದಿದೆ.

---------------------
 
ಇನ್ನೊಮ್ಮೆ ಮುಖ್ಯಮಂತ್ರಿ ಆಗೇ ಆಗುತ್ತೇನೆ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಇನ್ಶಿಯಲ್‌ನ್ನು ಮುಖ್ಯಮಂತ್ರಿ ಎಂದು ಬದಲಾಯಿಸಿ. ಶಾಶ್ವತವಾಗಿ ಮುಖ್ಯಮಂತ್ರಿಯಾಗಬಹುದು.

---------------------
  ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುವವರೆಗೆ ಪ್ರಧಾನಿ ಮೋದಿಯನ್ನು ನಿದ್ದೆ ಮಾಡಲು ಬಿಡುವುದಿಲ್ಲ
- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಮೋದಿಗೇನು? ನಿದ್ದೆ ಕಳೆದುಕೊಂಡಿರುವುದು ಅವರನ್ನು ಪ್ರಧಾನಿಯಾಗಿ ಮಾಡಿದ ಮತದಾರರು.

---------------------
  ಇನ್ನು 10 ವರ್ಷ ಪ್ರಧಾನಿ ಹುದ್ದೆ ಖಾಲಿ ಇಲ್ಲ
- ರಾಮ್‌ಮಾಧವ್, ಬಿಜೆಪಿ ಪ್ರ. ಕಾರ್ಯದರ್ಶಿ.
ಅದು ಹುದ್ದೆಯಲ್ಲ, ಜವಾಬ್ದಾರಿ. ಪ್ರತಿ ಐದು ವರ್ಷದ ಬಳಿಕ ಅದನ್ನು ಜನರೇ ತೀರ್ಮಾನಿಸುತ್ತಾರೆ.

---------------------
  ಸಿಖ್ ವಿರೋಧಿ ಪ್ರಕರಣದಲ್ಲಿ ಸಜ್ಜನ್ ಕುಮಾರ್‌ಗೆ ಶಿಕ್ಷೆಯಾಗುತ್ತದೆ, ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂದು ಯಾರು ಕನಸಿನಲ್ಲೂ ಯೋಚಿಸಿರಲಿಲ್ಲ
- ನರೇಂದ್ರ ಮೋದಿ, ಪ್ರಧಾನಿ.
ಗುಜರಾತ್ ಹತ್ಯಾಕಾಂಡದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆಯೋ ಎನ್ನುವುದನ್ನೊಮ್ಮೆ ಕನಸಿನಲ್ಲಿ ಯೋಚಿಸಿ.

---------------------
  ನಾನು ಸಾಲ ತೀರಿಸಲು ದೇಶ ಬಿಟ್ಟೆ
- ವಿಜಯ ಮಲ್ಯ, ಉದ್ಯಮಿ.
  ದೇಶ ಮಾರಿ ಸಾಲ ತೀರಿಸುವ ಯೋಜನೆಯಿತ್ತೇನೋ?
---------------------
  ಪ್ರಧಾನಿ ಮೋದಿ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಅದ್ಭುತ ಆಟಗಾರರು
- ಅರುಣ್ ಜೇಟ್ಲಿ, ಕೇಂದ್ರ ಸಚಿವ
ಒಟ್ಟಲ್ಲಿ ದೇಶ ಆಳುವುದನ್ನು ಕ್ರಿಕೆಟ್ ಆಟದ ಮಟ್ಟಕ್ಕೆ ಇಳಿಸಿ ಬಿಟ್ಟಿರಿ.

---------------------
  ವ್ಯಂಗ್ಯ ಚಿತ್ರಕ್ಕೆ ನೋವನ್ನು ಗುಣಪಡಿಸುವ ಶಕ್ತಿ ಇದೆ
-ನರೇಂದ್ರ ಮೋದಿ, ಪ್ರಧಾನಿ.
ಆದರೆ ನಿಮ್ಮ ಭಕ್ತರನ್ನು ಗುಣಪಡಿಸುವುದು ಕಷ್ಟ.

---------------------
  ನಾನು ಆಕಸ್ಮಿಕ ಪ್ರಧಾನಮಂತ್ರಿ ಮಾತ್ರ ಅಲ್ಲ, ಆಕಸ್ಮಿಕ ವಿತ್ತ ಮಂತ್ರಿ ಕೂಡ
- ಮನಮೋಹನ್‌ಸಿಂಗ್, ಮಾಜಿ ಪ್ರಧಾನಿ
ಒಟ್ಟಿನಲ್ಲಿ ಸೋನಿಯಾ ಗಾಂಧಿಯವರ ಮಿಕ.

---------------------
  ಮೋದಿ ವಿರುದ್ಧ ಬಿಜೆಪಿಯ ಅಸಮಾಧಾನ ಕೆಲವೇ ದಿನಗಳಲ್ಲಿ ಭಯಾನಕ ಬೆಂಕಿಯಾಗಿ ಸ್ಫೋಟಿಸಿ ಪಕ್ಷವನ್ನೇ ನಾಶ ಮಾಡಲಿದೆ
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಸದ್ಯಕ್ಕೆ ರಾಜ್ಯ ಸರಕಾರದೊಳಗಿರುವ ಬೆಂಕಿಯ ಬಗ್ಗೆ ತಲೆಕೆಡಿಸಿಕೊಳ್ಳಿ.

---------------------
  ಕೇಂದ್ರ ಸರಕಾರ ಭರವಸೆ ನೀಡಿದಂತೆ ಪ್ರತಿಯೊಬ್ಬರ ಖಾತೆಗೂ 15ಲಕ್ಷ ರೂ. ನಿಧಾನವಾಗಿ ಬರಲಿದೆ
- ರಾಮದಾಸ್ ಅಠಾವಳೆ, ಕೇಂದ್ರ ಸಚಿವ
 ಬಹುಶಃ ಸ್ವಿಸ್‌ಬ್ಯಾಂಕಿನಿಂದ ಕಾಲ್ನಡಿಗೆಯಲ್ಲಿ ಬರುತ್ತಾ ಇರಬೇಕು.

---------------------
  ಬಲಿಷ್ಠ ಸರಕಾರ ರಚನೆ ಕೇವಲ ಬಿಜೆಪಿಗೆ ಮಾತ್ರವಲ್ಲ, ದೇಶಕ್ಕೂ ಅಗತ್ಯವಿದೆ
- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  ಹೌದು. ಅದಕ್ಕಾಗಿಯೇ ತಮ್ಮ ಸರಕಾರವನ್ನು ಬದಲಿಸುವುದಕ್ಕೆ ಜನ ಸಜ್ಜಾಗಿದ್ದಾರೆ.
---------------------
  ರಾಜಕೀಯದಲ್ಲಿ 2+2 ಎಂದಿಗೂ 4 ಆಗಲ್ಲ
- ನಿತಿನ್ ಗಡ್ಕರಿ, ಕೇಂದ್ರ ಸಚಿವ
ರಫೇಲ್ ಹಗರಣದಲ್ಲಿ ತಪ್ಪು ಮಾಹಿತಿ ನೀಡಿರುವುದು ಈ ಲೆಕ್ಕಾಚಾರದ ಮೂಲಕವೇ ಇರಬೇಕು.

---------------------
  ಸೊಹ್ರಾಬುದ್ದೀನ್ ಇದ್ದಿದ್ದರೆ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡುತ್ತಿದ್ದ
- ಡಿ.ಜಿ. ವಂಝಾರಾ, ಗುಜರಾತ್‌ನ ನಿವೃತ್ತ ಐಜಿಪಿ
ಹರೇನ್ ಪಾಂಡ್ಯ ಹತ್ಯೆಗೆ ಸುಪಾರಿಕೊಟ್ಟವರು ಇದನ್ನು ತಮಗೆ ಹೇಳಿಕೊಟ್ಟಿರಬೇಕು.

---------------------
  ಇಮ್ಮಡಿ ಮಹದೇವ ಸ್ವಾಮಿ ಮೇಲೆ ಆರೋಪ ಆದಾಕ್ಷಣ ಇತರ ಮಠಾಧೀಶರ ಬಗ್ಗೆ ಕೆಟ್ಟ ಭಾವನೆ ಸಲ್ಲದು
- ಡಾ.ಎಸ್.ಎಲ್ ಭೈರಪ್ಪ, ಸಾಹಿತಿ
ಸಾಹಿತ್ಯದ ವಿಷ ಉಣಿಸಿದವರಿಂದ ಸಲಹೆ.

---------------------

share
ಪಿ.ಎ.ರೈ
ಪಿ.ಎ.ರೈ
Next Story
X