Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪ್ರತ್ಯೇಕ ಘಟನೆ: ಇಬ್ಬರು ವೃದ್ಧರಿಂದ...

ಪ್ರತ್ಯೇಕ ಘಟನೆ: ಇಬ್ಬರು ವೃದ್ಧರಿಂದ ಸೊತ್ತು ಅಪಹರಣ

ಉಡುಪಿ ನಗರದಲ್ಲಿ ಹಾಡುಹಗಲೇ ನಡೆದ ಪ್ರಕರಣ

ವಾರ್ತಾಭಾರತಿವಾರ್ತಾಭಾರತಿ25 Dec 2018 10:13 PM IST
share
ಪ್ರತ್ಯೇಕ ಘಟನೆ: ಇಬ್ಬರು ವೃದ್ಧರಿಂದ ಸೊತ್ತು ಅಪಹರಣ

ಉಡುಪಿ, ಡಿ.25: ಇಂದು ಉಡುಪಿ ನಗರದೊಳಗೆ ಮುಕ್ಕಾಲು ಗಂಟೆಯ ಅಂತರದಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ವೃದ್ಧರ ಬೆಳೆಬಾಳುವ ಸೊತ್ತುಗಳನ್ನು ದೋಚಿದ ಪ್ರಕರಣಗಳು ವರದಿಯಾಗಿವೆ.

ಮೊದಲ ಪ್ರಕರಣ ನಡೆದಿರುವುದು ಬೆಳಗ್ಗೆ 8:45ರ ಸುಮಾರಿಗೆ ಅಂಬಾಗಿಲು ಜಂಕ್ಷನ್‌ನ ಫಿಶ್ ಮಾರ್ಕೆಟ್ ಬಳಿ. ಬೆಳಗ್ಗೆ ಹೂವು ತರಲೆಂದು ಅಂಬಾಗಿಲು ಜಂಕ್ಷನ್ ಕಡೆ ನಡೆದುಕೊಂಡು ಹೋಗುತಿದ್ದ ಮಾಂಡವಿ ಫ್ರಿನ್ಸ್ ಪ್ಯಾಲೇಸ್‌ನ ನಿವಾಸಿ ವೆಂಕಟರಮಣ ಆಚಾರ್ಯ (68)ರನ್ನು ತಡೆದು ನಿಲ್ಲಿಸಿದ ಒಬ್ಬ ವ್ಯಕ್ತಿ, ಪಕ್ಕದಲ್ಲಿ ಬೈಕ್‌ನೊಂದಿಗೆ ನಿಂತಿದ್ದ ಮತ್ತೊಬ್ಬ ವ್ಯಕ್ತಿಯನ್ನು ತೋರಿಸಿ, ಸಾಬ್ ಬುಲಾರಹೆ ಹೇ ಎಂದು ಆತನ ಬಳಿ ಕರೆದೊಯ್ದ.

ಬೈಕ್ ಬಳಿ ನಿಂತಿದ್ದ ವ್ಯಕ್ತಿ, ಇಲ್ಲಿ ಗಲಾಟೆಯಾಗುತ್ತಿರುವುದು ಗೊತ್ತಿಲ್ಲವೇ ಎಂದು ಹೇಳಿ, ಆಚಾರ್ಯರ ಕಿಸೆಯಲ್ಲಿದ್ದ ಕರ್ಚಿಫ್‌ನ್ನು ಹೊರತೆಗೆದು, ಅವರ ಬಳಿ ಇದ್ದ ವಾಚ್, ಅಂಗಿ ಕಿಸೆಯಲ್ಲಿದ್ದ 1000ರೂ. ನಗದು, ಕುತ್ತಿಗೆಯಲ್ಲಿದ್ದ ಚೈನ್‌ನ್ನು ಕರ್ಚಿಫ್‌ನಲ್ಲಿ ಕಟ್ಟಿ, ಅದನ್ನು ವೆಂಕಟರಮಣ ಆಚಾರ್ಯರಿಗೆ ನೀಡಿದರು.

ಆಚಾರ್ಯರು ಸ್ವಲ್ಪ ದೂರ ಹೋಗಿ ಗಂಟು ಬಿಚ್ಚಿ ನೋಡಿದಾಗ ಅದರಲ್ಲಿ ವಾಚ್ ಮತ್ತು ಒಂದು ಸಾವಿರ ರೂ.ನಗದು ಮಾತ್ರ ಇದ್ದು, ಚಿನ್ನದ ಚೈನ್ ಇರಲಿಲ್ಲ. 24 ಗ್ರಾಂ ತೂಕದ ಈ ಚಿನ್ನದ ಚೈನ್‌ನ ಅಂದಾಜು ಬೆಲೆ 50 ಸಾವಿರ ರೂ.ಎಂದು ಹೇಳಲಾಗಿದೆ.

ಕೂಡಲೇ ಅವರು ಬೈಕ್ ಇದ್ದ ಜಾಗಕ್ಕೆ ಬಂದು ನೋಡಿದಾಗ ಅಲ್ಲಿ ಇಬ್ಬರು ವ್ಯಕ್ತಿಗಳೂ ನಾಪತ್ತೆಯಾಗಿದ್ದರು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣ ನಡೆದಿರುವುದು ಉಡುಪಿ ಸಿಟಿಬಸ್ ನಿಲ್ದಾಣದ ಗುರುಕೃಪಾ ಸ್ಟುಡಿಯೋದ ಬಸ್‌ಸ್ಟಾಫ್ ಬಳಿ. ಬೆಳಗ್ಗೆ 9:25ರ ಸುಮಾರಿಗೆ ಮಠದಬೆಟ್ಟು ಕೊಪ್ಪರ ತೋಟದ ಭಾಸ್ಕರ ಪೂಜಾರಿ (61) ಎಂಬವರು ಅಲ್ಲಿ ಬಸ್‌ಗಾಗಿ ಕಾಯುತಿದ್ದಾಗ, ಅಪರಿಚತ ವ್ಯಕ್ತಿ ಬಂದು, ಹಿಂದಿಯಲ್ಲಿ ನಾನು ಸೆಕ್ಯುರೀಟಿ ವಿಭಾಗದವನು. ಅಧಿಕಾರಿ ಅಲ್ಲಿದ್ದಾರೆಂದು ಹೇಳಿ ಪಕ್ಕದಲ್ಲಿರುವ ಎಸ್‌ವಿಸಿ ಬ್ಯಾಂಕ್ ಎದುರು ಕರೆದೊಯ್ದಾಗ ಅಲ್ಲಿ ಇಬ್ಬರು ಇವರನ್ನು ತಪಾಸಣೆಯ ನೆಪದಲ್ಲಿ ಅವರಲ್ಲಿದ್ದ ಚಿನ್ನದ ಸರ, ಮೊಬೈಲ್, ವಾರ್ಚ್‌ನ್ನು ಕರ್ಚಿಫ್‌ನಲ್ಲಿ ಸುತ್ತಿ ನೀಡುವಂತೆ ನಟಿಸಿದ್ದರು.

ಭಾಸ್ಕರ ಪೂಜಾರಿ ಅವರು ಸ್ವಲ್ಪ ದೂರ ಹೋಗಿ ಕರ್ಚಿಫ್ ಬಿಚ್ಚಿದಾಗ ಅದರಲ್ಲಿ ವಾಚ್ ಮತ್ತು ಮೊಬೈಲ್ ಮಾತ್ರ ಇದ್ದು ಚಿನ್ನದ ಸರ ಇರಲಿಲ್ಲ. ಸ್ಥಳಕ್ಕೆ ಹೋದಾಗ ಮೂವರೂ ಪರಾರಿಯಾಗಿದ್ದರು. 12 ಗ್ರಾಂ ತೂಕದ ಇವರ ಚಿನ್ನದ ಸರದ ಮೌಲ್ಯ 24,000 ರೂ.ಗಳೆಂದು ಅಂದಾಜಿಸಲಾಗಿದೆ.

ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X