ಬಿ.ಸಿ. ರೋಡ್: ಡಿ.28ರಂದು ಯುನಿವೆಫ್ ನಿಂದ ಸೀರತ್ ಸಮಾವೇಶ
ಬಂಟ್ವಾಳ, ಡಿ. 27: ಯುನಿವೆಫ್ ಕರ್ನಾಟಕ ನ.30 ರಿಂದ ಫೆಬ್ರವರಿ 1ರವರೆಗೆ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ಡಿ. 28 ರಂದು ಸಂಜೆ 7 ಗಂಟೆಗೆ ಬಿ.ಸಿ.ರೋಡ್ ಕೈಕಂಬ ದ್ವಾರದ ಬಳಿ ಸೀರತ್ ಸಮಾವೇಶ ನಡೆಯಲಿದೆ.
ವರ್ತಮಾನದ ಮುಸ್ಲಿಂ ಸಮುದಾಯ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ವಿಷಯದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story