ಪುದು, ಸುಜೀರ್ ಪ್ರೌಡ ಶಾಲೆ ನೂತನ ಸಭಾಂಗಣ ಉದ್ಘಾಟನೆ, ವಾರ್ಷಿಕ ಕ್ರೀಡಾಕೂಟ

ಫರಂಗಿಪೇಟೆ, ಡಿ. 29, ಪುದು ಗ್ರಾಮದ ಮಾರಿಪ್ಪಳ್ಳ ಸುಜೀರ್ ನಲ್ಲಿರುವ ಸರಕಾರಿ ಪ್ರೌಢ ಶಾಲೆಯಲ್ಲಿ ನೂತನ ಸಭಾಂಗಣದ ಉದ್ಘಾಟನೆ ಮತ್ತು ಶಾಲಾ ವಾರ್ಷಿಕ ಕ್ರೀಡಾಕೂಟ ಶನಿವಾರ ನಡೆಯಿತು.
ಶಾಲಾ ಸಭಾಂಗಣವನ್ನು ಉದ್ಘಾಟನೆ ಮಾಡಿ ಮಾತನಾಡಿದ ಉಸ್ತುವಾರಿ ಸಚಿವ ಯುಟಿ ಖಾದರ್ ಶಿಕ್ಷಣ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಬಹಳ ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ಬೇರೆ ಬೇರೆ ಕ್ಷೇತ್ರದಲ್ಲಿ ಉತ್ತಮ ಸಾದನೆಗೈದವರಿದ್ದಾರೆ. ಶಿಕ್ಷಣ ಉತ್ತಮ ವ್ಯಕ್ತಿತ್ವ ಮತ್ತು ಸಂಪನ್ನಗೊಳಿಸುತ್ತದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಕಾಳಜಿ ವಹಿಸಿ ಅದು ನಿಮ್ಮ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುತ್ತದೆ ಎಂದು ಹೇಳಿದರು.
ಸಭಾ ಅದ್ಯಕ್ಷತೆಯನ್ನು ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ವಹಿಸಿದರು, ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಕಾರ್ಯಾಧ್ಯಕ್ಷ ಎಫ್ ಉಮರ್ ಫಾರೂಕು ಪ್ರಸ್ತಾವಿಕವಾಗಿ ಮಾತನಾಡಿದರು.
ಪುದು ಗ್ರಾಪಂ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮೊಹಮ್ಮದ್ ಬಾವ, ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಂಕಾರ್, ಮಾರಿಪ್ಪಳ್ಳ ಮಸೀದಿ ಅಧ್ಯಕ್ಷ ಬಾವ, ಮುಡಿಪು ಅಲ್ಫ ಸಂಖ್ಯಾತ ಘಟಕ ಅಧ್ಯಕ್ಷ ಇಮ್ತಿಯಾಝ್ ಅಲ್ಫಾ, ಗ್ರಾಮ ಪಂ. ಸದಸ್ಯರಾದ ಹಾಶಿರ್ ಪೇರಿಮಾರ್, ರಿಯಾಝ್ ಕುಂಪನಮಜಲ್, ಇಕ್ಬಾಲ್ ಸುಜೀರ್, ಮೊಹಮ್ಮದ್ ಮೋನು, ಕಿಶೋರ್, ಝಾಹಿರ್, ಹುಸೈನ್, ಸುಜಾತ, ಮುಂಮ್ತಾಝ್, ಹೇಮಲತಾ, ರೆಹನಾ, ಲವೀಣ, ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಯುನೈಟೆಡ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಗಫೂರು, ವಲಯಾಧ್ಯಕ್ಷ ರಫೀಕ್ ಪೇರಿಮಾರ್, ಸೆಲೀಮ್ ಮಳ್ಳಿ, ಲತೀಫ್ ಮಲಾರ್,ಅಶ್ರಫ್ ಮಳ್ಳಿ, ಮಜೀದ್ ಪೇರಿಮಾರ್, ಹನೀಫ್ ಅಮೆಮಾರ್ ಹಾಗೂ ಬೋಧಕ ವೃಂದ, ಮತ್ತಿತರರು ಉಪಸ್ಥಿತರಿದ್ದರು.
2017-18 ನೇ ಸಾಲಿನ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳನ್ನು, 2018 ವರ್ಷದ ಜಿಲ್ಲೆಯ ಬ್ಯಾರಿ ಉತ್ಯಮ ಶಿಕ್ಷಕ ಪುರಸ್ತಕೃತ ಸಮಾಜ ವಿಜ್ಞಾನ ಶಿಕ್ಷಕ ಮೊಹಮ್ಮದ್ ಬಿ ಅವರನ್ನು , ಶಿಕ್ಷಣ ಪ್ರೇಮಿ ಕೊಡುಗೈ ದಾನಿ ಅಹಮದ್ ತ್ವಾಹಾ ತನ್ವೀರ್ ಅವರನ್ನು, ತ್ರೋ ಬಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶಾಲೆಯ ಹಳೆ ವಿದ್ಯಾರ್ಥಿ ಮೊಹಮ್ಮದ್ ಇಹ್ತಿಶಾಮ್ ರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಶಿಕ್ಷಕ ಮುಹಮ್ಮದ್ ಬಿ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಮಂಗಳ ವೈ ವಂದಿಸಿದರು. ಶಿಕ್ಷಕ ಜಯಪ್ರಕಾಶ್ ಕೆ.ಎಸ್ ನಿರೂಪಿಸಿದರು.







