ಉಡುಪಿ, ಡಿ.30: ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಯಾತ್ರಿ ನಿವಾಸದ ಎದುರು ಇಂದು ಬೆಳಗ್ಗೆ ಅಕ್ರಮ ಗಾಂಜಾ ಸೇವಿಸುತ್ತಿದ್ದ ಚಿಕ್ಕಮಗಳೂರು ಮೂಲದ ನೇಜಾರು ನಿವಾಸಿ ನಿಕ್ಷೇಪ್ ಕುಮಾರ್ ಗೌಡ (21) ಎಂಬಾತನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.