ಮಂಗಳೂರು, ಡಿ.31: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ. ಬಿ.ಆರ್. ರವಿಕಾಂತೇಗೌಡ ಅವರು ಬೆಂಗಳೂರು ಪೊಲೀಸ್ ಫೈರ್ ಸರ್ವಿಸಸ್ ವಿಭಾಗದ ಐಜಿಪಿಯಾಗಿ ಭಡ್ತಿ ಹೊಂದಿದ್ದು, ಜ.1ರಿಂದ ನೇಮಕಾತಿ ಮಾಡಿಕೊಳ್ಳುವಂತೆ ಸಿಬ್ಬಂದಿ ಹಾಗೂ ಆಡಳಿತಾತ್ಮಕ ಸುಧಾರಣೆ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.