ಕೆಮ್ತೂರು ತುಳು ನಾಟಕ ಸ್ಪರ್ಧೆ: ಮಣಿಪಾಲ ಸಂಗಮ ಕಲಾವಿದೆರ್ ‘ರಕ್ಕಸ-ತಂಗಡಿ’ಗೆ ಅಗ್ರಪ್ರಶಸ್ತಿ

ಉಡುಪಿ, ಡಿ.31: ತುಳುಕೂಟ ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ರಂಗ ಮಂಟಪದಲ್ಲಿ ನಡೆದ ಹದಿನೇಳನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯಲ್ಲಿ ಮಣಿಪಾಲದ ಸಂಗಮ ಕಲಾವಿದೆರ್ ಪ್ರದರ್ಶಿಸಿದ ‘ರಕ್ಕಸ-ತಂಗಡಿ’ ನಾಟಕ ಪ್ರಥಮ ಅತ್ಯುತ್ತಮ ನಾಟಕವಾಗಿ 20,000ರೂ. ನಗದು ಬಹುಮಾನಕ್ಕೆ ಆಯ್ಕೆಯಾಯಿತು.
ಕೊಡವೂರು ನವಸುಮ ರಂಗಮಂಚ ಅಭಿನಯಿಸಿದ ‘ಒಂಜಿ ಸಿರೆ ಅಸರ್’ ದ್ವಿತೀಯ ಪ್ರಶಸ್ತಿಯೊಂದಿಗೆ 15,000 ರೂ. ಹಾಗೂ ಪಟ್ಲದ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪ್ರದರ್ಶಿಸಿದ ‘ಟ್ರೈನ್ ಟು ಪಾಕಿಸ್ತಾನ್’ ತೃತೀಯ ಅತ್ಯುತ್ತಮ ನಾಟಕದೊಂದಿಗೆ 10,000ರೂ. ಗೆದ್ದುಕೊಂಡವು.
ಉಳಿದ ಪ್ರಶಸ್ತಿಗಳ ವಿವರ ಹೀಗಿದೆ
ಶ್ರೇಷ್ಠ ನಿರ್ದೇಶನ: ಪ್ರಥಮ:ಪ್ರಶಾಂತ್ ಉದ್ಯಾವರ (ರಕ್ಕಸ-ತಂಗಡಿ) ದ್ವಿತೀಯ:ಬಾಲಕೃಷ್ಣ ಕೊಡವೂರು(ಒಂಜಿ ಸಿರೆ ಅಸರ್), ತೃತೀಯ: ಸಂತೋಷ್ ನಾಯಕ್ ಪಟ್ಲ (ಟ್ರೈನ್ ಟು ಪಾಕಿಸ್ತಾನ್)
ಶ್ರೇಷ್ಠ ರಂಗಪರಿಕರ/ಪ್ರಸಾಧನ: ಪ್ರಥಮ: ಸಂಗಮ ಕಲಾವಿದೆರ್ ಮಣಿಪಾಲ, ದ್ವಿತೀಯ: ನವಸುಮ ರಂಗಮಂಚ ಕೊಡವೂರು, ತೃತೀಯ: ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ.
ಶ್ರೇಷ್ಠ ಬೆಳಕು: ಪ್ರಥಮ:ರಾಜು ಮಣಿಪಾಲ (ಸಂಗಮ ಕಲಾವಿದೆರ್), ದ್ವಿತೀಯ:ಜಯಶೇಖರ್ ಮಟಪಾಡಿ (ನವಸುಮ ರಂಗಮಂಚ), ತೃತೀಯ: ನಿತೇಶ್ ಬಂಟ್ವಾಳ (ಭೂಮಿಗೀತ ಸಾಂಸ್ಕೃತಿಕ ವೇದಿಕೆ).
ಶ್ರೇಷ್ಠ ಸಂಗೀತ: ಪ್ರಥಮ:ಗಣೇಶ್ ರಾವ್ ಎಲ್ಲೂರು ( ಭೂಮಿಗೀತ), ದ್ವಿತೀಯ:ಪ್ರವೀಣ್ ಬುಕ್ಕಿಗುಡ್ಡೆ ( ಕರಾವಳಿ ಕಲಾವಿದರು ಮಲ್ಪೆ), ತೃತೀಯ: ರೋಹಿತ್ ಮಲ್ಪೆ(ನವಸುಮ ರಂಗಮಂಚ).
ಶ್ರೇಷ್ಠ ನಟ:ಪ್ರಥಮ: ಬಾಲಕೃಷ್ಣ ಕೊಡವೂರು (ನವಸುಮ), ದ್ವಿತೀಯ: ಸಂತೋಷ್ ಶೆಟ್ಟಿ ಹಿರಿಯಡ್ಕ (ಸಂಗಮ ಕಲಾವಿದೆರ್), ತೃತೀಯ: ಸಂತೋಷ್ ನಾಯಕ್ ಪಟ್ಲ (ಭೂಮಿಗೀತ ಪಟ್ಲ).
ಶ್ರೇಷ್ಠ ನಟಿ : ಪ್ರಥಮ:ವಾಣಿ ಸುಕುಮಾರ್ (ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ), ದ್ವಿತೀಯ: ಅನ್ವಿತಾ ಭಟ್ (ರಂಗೂಮಿ ಉಡುಪಿ), ತೃತೀಯ: ಸುಗಂಧಿ ಉಮೇಶ್ ಕಲ್ಮಾಡಿ (ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ).
ತೀರ್ಪುಗಾರರ ಮೆಚ್ಚುಗೆ ಪಡೆದ ನಟ, ನಟಿಯರು: ಕೆ.ಸುರೇಂದ್ರ ಶೆಟ್ಟಿ ಕಪ್ಪೆಟ್ಟು (ರಂಗಚಾವಡಿ ಅಂಬಲಪಾಡಿ), ಜಯಕರ್ ಮಣಿಪಾಲ್( ರಂಗೂಮಿ ಉಡುಪಿ), ವಿಜಯ ಆರ್. ನಾಯಕ್ ಮಾರ್ಪಳ್ಳಿ (ಕರಾವಳಿ ಕಲಾವಿದರು ಮಲ್ಪೆ), ಸಂದೀಪ್ (ಸಂಗಮ ಕಲಾವಿದೆರ್ ಮಣಿಪಾಲ). ರಾಘವೇಂದ್ರ ರಾವ್ ಕಟಪಾಡಿ (ರಂಗೂಮಿ ಉಡುಪಿ), ನಿಕಿತ ಸಾಂತೂರು (ರಂಗಚಾವಡಿ ಅಂಬಲಪಾಡಿ), ರಕ್ಷಿತ (ರಂಗಸುದರ್ಶನ ಸಸಿಹಿತ್ಲು), ಕುಸುಮ ಕಾಮತ್ (ಕರಾವಳಿ ಕಲಾವಿದರು ಮಲ್ಪೆ), ಸ್ನೇಹ ಅಲೆವೂರು (ಕರಾವಳಿ ಕಲಾವಿದರು ಮಲ್ಪೆ).
ಕೆಮ್ತೂರು ತುಳು ನಾಟಕ ಸ್ಫರ್ಧೆಯ ತೀರ್ಪುಗಾರರಾಗಿ ರಂಗ ಕರ್ಮಿಗಳಾದ ಎಂ.ಎಸ್.ಭಟ್, ಬಿ.ಎಸ್. ರಾಮಶೆಟ್ಟಿ, ಪ್ರಬಾಕರ ಜಿ. ಪಿ. ಸಹಕರಿಸಿದ್ದರು. ನಾಟಕ ಸ್ಫರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಜ.20ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದೆ. ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ವಿ.ಜಿ.ಶೆಟ್ಟಿ ಹಾಗೂ ನಾಟಕ ಸ್ಫರ್ಧೆಯ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







