ತ್ರಿವಳಿ ತಲಾಕ್ ಲಿಂಗ ಸಮಾನತೆಯ ವಿಚಾರ, ಶಬರಿಮಲೆ ಪ್ರವೇಶ ಸಂಪ್ರದಾಯದ ವಿಚಾರ
ಸಂದರ್ಶನದಲ್ಲಿ ಪ್ರಧಾನಿ ಮೋದಿ
![ತ್ರಿವಳಿ ತಲಾಕ್ ಲಿಂಗ ಸಮಾನತೆಯ ವಿಚಾರ, ಶಬರಿಮಲೆ ಪ್ರವೇಶ ಸಂಪ್ರದಾಯದ ವಿಚಾರ ತ್ರಿವಳಿ ತಲಾಕ್ ಲಿಂಗ ಸಮಾನತೆಯ ವಿಚಾರ, ಶಬರಿಮಲೆ ಪ್ರವೇಶ ಸಂಪ್ರದಾಯದ ವಿಚಾರ](https://www.varthabharati.in/sites/default/files/images/articles/2019/01/1/170760.jpeg)
ಹೊಸದಿಲ್ಲಿ, ಜ.1: ತ್ರಿವಳಿ ತಲಾಕ್ ವಿಚಾರ ಲಿಂಗ ಸಮಾನತೆಗೆ ಸಂಬಂಧಿಸಿದ್ದಾದರೆ, ಶಬರಿಮಲೆ ವಿಚಾರ ಸಂಪ್ರದಾಯಕ್ಕೆ ಸಂಬಂಧಿಸಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸುದ್ದಿಸಂಸ್ಥೆ ಎಎನ್ ಐ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, “ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟು ತ್ರಿವಳಿ ತಲಾಕ್ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಇದನ್ನು ಧರ್ಮದಲ್ಲಿ ಹಸ್ತಕ್ಷೇಪದಂತೆ ನೋಡಬಾರದು” ಎಂದು ಪ್ರಧಾನಿ ಮೋದಿ ಹೇಳಿದರು. “ತ್ರಿವಳಿ ತಲಾಕ್ ಸುಗ್ರೀವಾಜ್ಞೆ ಕೋರ್ಟ್ ಆದೇಶದ ನಂತರ ಹೊರಡಿಸಲಾಗಿದೆ. ಹೆಚ್ಚಿನ ಇಸ್ಲಾಮಿಕ್ ದೇಶಗಳು ತ್ರಿವಳಿ ತಲಾಕನ್ನು ನಿಷೇಧಿಸಿದೆ. ಇದು ಧರ್ಮ ಅಥವಾ ನಂಬಿಕೆಯ ವಿಷಯವಲ್ಲ. ಪಾಕಿಸ್ತಾನದಲ್ಲೂ ತ್ರಿವಳಿ ತಲಾಕ್ ನಿಷೇಧಗೊಂಡಿದೆ” ಎಂದವರು ಹೇಳಿದರು.
Next Story