ಜ.3, 4ರಂದು ಸುರಿಬೈಲ್ ಉಸ್ತಾದ್ ಆಂಡ್ ನೇರ್ಚೆ

ಮಂಜೇಶ್ವರ, ಜ.2: ಮರ್ಹೂಂ ಶೈಖುನಾ ಸುರಿಬೈಲು ಉಸ್ತಾದ್ ಅವರ 17ನೇ ಆಂಡ್ ನೇರ್ಚೆ ಜ.3, 4ರಂದು ನಡೆಯಲಿದೆ ಎಂದು ಸಂಘಟಕರು ಮಂಜೇಶ್ವರ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ.3ರಂದು ಸಂಜೆ ನಡೆಯುವ ಮಖ್ಬರ ಝಿಯಾರತ್ ಗೆ ಅಬೂಬಕರ್ ಮುಸ್ಲಿಯಾರ್ ಬೊಳ್ಮಾರ್ ನೇತೃತ್ವ ವಹಿಸುವರು. ಬಳಿಕ ಧ್ವಜಾರೋಹಣ ಹಾಗೂ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ನಡೆಯಲಿದೆ.
ಸೈಯದ್ ಮುಶ್ತಾಕುರ್ರಹ್ಮಾನ್ ತಂಙಳ್ ದುಆಗೆ ನೇತೃತ್ವ ನೀಡುವರು. ಬಳಿಕ ಬುರ್ದಾ ಮಜ್ಲಿಸ್ ನಡೆಯಲಿದೆ. ರಾತ್ರಿ 9ಕ್ಕೆ ಮೌಲಾನಾ ಲತೀಫ್ ಸಅದಿ ಪಯಶ್ವಿ ಮುಖ್ಯ ಭಾಷಣ ಮಾಡುವರು.
ಜ.4ರಂದು ಜುಮಾ ನಮಾಝಿನ ಬಳಿಕ ನಡೆಯುವ ಖತ್ಮುಲ್ ಖುರ್ಆನ್ ಗೆ ಸೈಯದ್ ಇಬ್ರಾಹೀಂ ಪೂಕುಂಞಿ ತಂಙಳ್ ನೇತೃತ್ವ ನೀಡುವರು. ಬಳಿಕ ಸಂದಲ್ ಮೆರವಣಿಗೆ ಸೌಹಾರ್ದ ಸಂಗಮ ನಡೆಯಲಿದೆ. 6:30ಕ್ಕೆ ಆಂಡ್ ನೇರ್ಚೆ ಹಾಗೂ ಸಮಾರೋಪ ಮಹಾ ಸಮ್ಮೇಳನ ನಡೆಯಲಿದೆ.
ಸೈಯದ್ ಜಲಾಲುದ್ದೀನ್ ತಂಙಳ್ ಮಳ್ಹರ್ , ಅಶ್ರಫ್ ತಂಙಳ್ ಆದೂರು, ಶಿಹಾಬುದ್ದೀನ್ ತಂಙಳ್ ತಲಕ್ಕಿ , ಖಾಸಿಂ ತಂಙಳ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.
ಮೌಲಾನ್ ಪೇರೋಡ್ ಉಸ್ತಾದ್ ಮುಖ್ಯ ಭಾಷಣ ಮಾಡುವರು. ಸೈಯದ್ ಬಾಯಾರ್ ತಂಙಳ್ ಸಮಾರೋಪ ಪ್ರಾರ್ಥನೆ ನಡೆಸುವರು.
ಸುದ್ದಿಗೋಷ್ಠಿಯಲ್ಲಿ ಫಾರೂಕ್ ಅಶ್ಹರಿಯ್ಯಿ, ಬೊಳ್ಮಾರ್ ಉಸ್ತಾದ್, ಮುಹಮ್ಮದ್ ಅಲಿ ಸಖಾಫಿ, ಹಾರಿಸ್ ಹನೀಫಿ ಬಾಳಿಯೂರು, ಮುಹ್ಮಮದ್ ಸಖಾಫಿ ತೋಕೆ ಉಪಸ್ಥಿತರಿದ್ದರು.