Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 6 ಮಿಸ್ ಕಾಲ್ ಗಳಿಗೆ 1.86 ಕೋಟಿ ರೂ....

6 ಮಿಸ್ ಕಾಲ್ ಗಳಿಗೆ 1.86 ಕೋಟಿ ರೂ. ಕಳಕೊಂಡ ಉದ್ಯಮಿ !

ಮೊಬೈಲ್ ಬಳಕೆದಾರರರನ್ನು ವಂಚಿಸಲು ಹೊಸ ಬಲೆ

ವಾರ್ತಾಭಾರತಿವಾರ್ತಾಭಾರತಿ2 Jan 2019 10:33 PM IST
share
6 ಮಿಸ್ ಕಾಲ್ ಗಳಿಗೆ 1.86 ಕೋಟಿ ರೂ. ಕಳಕೊಂಡ ಉದ್ಯಮಿ !

ಮುಂಬೈ, ಜ.2: ನೀವು ತಮಿಳು ಚಿತ್ರ ‘ಇರುಂಬುತಿರೈ’ಯನ್ನು ನೋಡಿದರೆ ಸೈಬರ್ ವಂಚನೆಯ ಬಗ್ಗೆ ಒಂದು ಕ್ಷಣ ಬೆಚ್ಚಿಬಿದ್ದಿರಬಹುದು. ಮಾಹಿತಿಗಳೇ ಸಂಪತ್ತು ಎನ್ನುವ ವಿಲನ್ ಪಾತ್ರಧಾರಿ ಜನಸಾಮಾನ್ಯರ ಹಣವನ್ನು ಹೇಗೆ ಲೂಟಿ ಮಾಡುತ್ತಾನೆ ಎನ್ನುವ ಬಗ್ಗೆ ತೋರಿಸಿರುವ ಈ ಚಿತ್ರದಲ್ಲಿ ಡಿಜಿಟಲ್ ವಂಚನೆಯ ಬಗ್ಗೆ ವಿವರಿಸಲಾಗಿದೆ. ಆದರೆ ಮುಂಬೈಯಲ್ಲಿ ನಡೆದಿರುವ ಈ ವಂಚನೆ ‘ಇರುಂಬುತ್ತಿರೈ’ಗಿಂತಲೂ ಭಯಾನಕವಾಗಿದೆ. ಅತೀ ಸುಲಭವಾಗಿ ವಂಚಕರು ನಮ್ಮ ಖಾತೆಯಲ್ಲಿರುವ ಹಣವನ್ನು ಹೇಗೆ ದೋಚುತ್ತಾರೆ ಎನ್ನುವುದಕ್ಕೆ ಈ ಸುದ್ದಿ ಅತ್ಯುತ್ತಮ ಉದಾಹರಣೆ.

ಇಲ್ಲಿನ ಮಹೀಮ್ ನ ಉದ್ಯಮಿಯಾಗಿರುವ ವಿ. ಶಾ ಅವರ ಮೊಬೈಲ್ ಗೆ ಡಿ.27-28ರ ನಡುವೆ ಅಂದರೆ ರಾತ್ರಿ 2 ಗಂಟೆ ಸುಮಾರಿಗೆ 6 ಮಿಸ್ ಕಾಲ್ ಗಳು ಬಂದಿತ್ತು. ಅದರಲ್ಲಿ ಒಂದು ಕರೆಯ ಡಯಲಿಂಗ್ ಕೋಡ್ ಬ್ರಿಟನ್ ನದ್ದಾಗಿತ್ತು (+44). ಬೆಳಗ್ಗೆ ಈ ಕರೆಗಳನ್ನು ನೋಡಿದ ಶಾ ಆ ಸಂಖ್ಯೆಗಳಿಗೆ ಕರೆ ಮಾಡಿದ್ದಾರೆ. ಆದರೆ ಅವರ ಸಿಮ್ ಡಿ ಆ್ಯಕ್ಟಿವೇಟ್ ಆದ ಬಗ್ಗೆ ತಿಳಿದು ಅವರು ಆಘಾತಕ್ಕೊಳಗಾಗಿದ್ದರು. ಕೂಡಲೇ ಸಿಮ್ ಸರ್ವಿಸ್ ಪ್ರೊವೈಡರ್ ಗೆ ಕರೆ ಮಾಡಿದಾಗ ಶಾ ಅವರ ಮನವಿಯ ಮೇರೆಗೆ ಸಿಮ್ ಡಿ ಆ್ಯಕ್ಟಿವೇಟ್ ಮಾಡಲಾಗಿದೆ ಎನ್ನುವ ಮಾಹಿತಿ ಲಭಿಸಿತು. ಇದರಿಂದ ಸಂಶಯಗೊಂಡ ಶಾ ಬ್ಯಾಂಕ್ ಗೆ ಭೇಟಿ ನೀಡಿ ತನ್ನ ಖಾತೆಯಲ್ಲಿರುವ ಮೊತ್ತದ ಬಗ್ಗೆ ವಿಚಾರಿಸಿದರು.

ಬ್ಯಾಂಕ್ ಸಿಬ್ಬಂದಿ ಹೇಳಿದ ಮಾಹಿತಿ ಕೇಳಿದ ಶಾ ಅವರಿಗೆ ಒಂದು ಕ್ಷಣ ಸಿಡಿಲು ಬಡಿದಂತಾಗಿತ್ತು. ಅವರ ಕಂಪೆನಿಯ ಖಾತೆಯಲ್ಲಿದ್ದ 1.86 ಕೋಟಿ ರೂ.ಗಳನ್ನು ವಂಚಕರು ದೋಚಿದ್ದರು. 28 ಟ್ರಾನ್ಸಾಕ್ಷನ್ ಗಳ ಮೂಲಕ 14 ಖಾತೆಗಳಿಗೆ ಅವರ ಹಣವನ್ನು ವರ್ಗಾಯಿಸಲಾಗಿತ್ತು. ಬ್ಯಾಂಕ್ ತನ್ನಿಂದಾದ ಪ್ರಯತ್ನ ನಡೆಸಿ 20 ಲಕ್ಷ ರೂ,ಗಳನ್ನು ವಾಪಸ್ ಪಡೆಯುವಂತಾಯಿತು. ಆದರೆ ಉಳಿದ ಹಣ ವಂಚಕರ ಪಾಲಾಗಿದೆ.

ಡಿಸೆಂಬರ್ 27ರಂದು 11:15ಕ್ಕೆ ಸಿಮ್ ಕಾರ್ಡ್ ರಿಪ್ಲೇಸ್ ಮೆಂಟ್ ಗೆ ಮನವಿ ಮಾಡಲಾಗಿದ್ದು, ಅಂದು ರಾತ್ರಿ 2 ಗಂಟೆಗೆ ಮಿಸ್ ಕಾಲ್ ಗಳು ಬಂದಿದ್ದವು.

“ನನ್ನ ಕಂಪೆನಿಯ ಬ್ಯಾಂಕ್ ಖಾತೆ ನನ್ನ ಮೊಬೈಲ್ ಫೋನ್ ನೊಂದಿಗೆ ಲಿಂಕ್ ಆಗಿದೆ. ಆದರೆ ನನ್ನ ಖಾತೆಯನ್ನು ಇಷ್ಟು ಸುಲಭವಾಗಿ ಬರಿದು ಮಾಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ” ಎಂದು ಶಾ ಹೇಳುತ್ತಾರೆ.

ಈ ಬಗ್ಗೆ ಬಿಕೆಸಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. “ಶಾ ಅವರ ಯುನಿಕ್ ಸಿಮ್ ನಂಬರ್ ಪಡೆದ ವಂಚಕರು ನಂತರ ‘ಸ್ವಿಮ್ ಸ್ವಾಪ್’ ನಡೆಸಿದ್ದಾರೆ. ಶಾ ಅವರಿಗೆ ಯಾವುದೇ ಸಂಶಯ ಬಂದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ತಡರಾತ್ರಿ ಕರೆ ಮಾಡಿದ್ದಾರೆ ಎಂದು ನಾವು ಸಂಶಯಿಸುತ್ತೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹ್ಯಾಕಿಂಗ್ ಮೂಲಕ ದುಷ್ಕರ್ಮಿಗಳು ಯುನಿಕ್ ಸಿಮ್ ನಂಬರನ್ನು ಪಡೆಯುತ್ತಾರೆ. ಆದರೆ ತಾನು ಯಾರಿಗೂ ಯುನಿಕ್ ಸಿಮ್ ನಂಬರ್ ತಿಳಿಸಿಲ್ಲ ಹಾಗು ಯಾರೊಬ್ಬರೂ ಇದನ್ನು ವಿಚಾರಿಸಿ ತನಗೆ ಕರೆ ಮಾಡಿಲ್ಲ ಎನ್ನುವುದನ್ನು ಶಾ ಸ್ಪಷ್ಟಪಡಿಸುತ್ತಾರೆ.

“ಯಾವುದಾದರೂ ನಕಲಿ ಆ್ಯಪ್ ಅಥವಾ ಇಮೇಲ್ ಮೂಲಕ ವಂಚಕರು ಶಾ ಅವರ ಮಾಹಿತಿ ಪಡೆದಿರಬಹುದು. ಅಸುರಕ್ಷಿತ ವೆಬ್ ಕನೆಕ್ಷನ್ ಗಳನ್ನು ನೀವು ಬ್ರೌಸ್ ಮಾಡಿದ ಪ್ರತಿಯೊಂದು ಬಾರಿಯೂ ವಂಚಕರು ನಿಮ್ಮೆಲ್ಲಾ ಡಾಟಾಗಳನ್ನು ಪಡೆಯುತ್ತಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X