ಗೋಕಳ್ಳತನ ಶಂಕೆಯಲ್ಲಿ 55 ವರ್ಷದ ವ್ಯಕ್ತಿಯ ಥಳಿಸಿ ಹತ್ಯೆ
![ಗೋಕಳ್ಳತನ ಶಂಕೆಯಲ್ಲಿ 55 ವರ್ಷದ ವ್ಯಕ್ತಿಯ ಥಳಿಸಿ ಹತ್ಯೆ ಗೋಕಳ್ಳತನ ಶಂಕೆಯಲ್ಲಿ 55 ವರ್ಷದ ವ್ಯಕ್ತಿಯ ಥಳಿಸಿ ಹತ್ಯೆ](https://www.varthabharati.in/sites/default/files/images/articles/2019/01/3/171009.jpg)
ಅರಾರಿಯಾ, ಜ.3: ಜಾನುವಾರು ಕಳ್ಳತನದ ಶಂಕೆಯಲ್ಲಿ 55 ವರ್ಷದ ವ್ಯಕ್ತಿಯೊಬ್ಬರನ್ನು ಸುಮಾರು 300 ಮಂದಿಯಿದ್ದ ಗುಂಪೊಂದು ಥಳಿಸಿ ಕೊಂದ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಕಾಬುಲ್ ಮಿಯಾನ್ ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಗಳು ಅವರ ಮುಖಕ್ಕೆ ಒದ್ದು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲ್ಲೆ ನಡೆಸಬೇಡಿ ಎಂದು ಕಾಬುಲ್ ಮಿಯಾನ್ ಗೋಗರೆದರೂ ದುಷ್ಕರ್ಮಿಗಳು ಕರುಣೆ ತೋರಿಲ್ಲ. ಅವರು ಮೃತಪಟ್ಟು ನೆಲಕ್ಕೆ ಕುಸಿಯುವವರೆಗೂ ಹಲ್ಲೆ ನಡೆಸಿದ್ದಾರೆ. ಇಲ್ಲಿನ ಸಿಮರ್ಬಾನಿ ಗ್ರಾಮದಲ್ಲಿ ಡಿಸೆಂಬರ್ 29ರಂದು ಈ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಇನ್ನಷ್ಟೇ ಬಂಧಿಸಬೇಕಿದೆ.
Next Story