ಐಟಿ ದಾಳಿಯಿಂದ ಸರಿಯಾಗಿ ತೆರಿಗೆ ಪಾವತಿಸಬೇಕೆಂಬ ಸಂದೇಶ ರವಾನೆ: ಚಿತ್ರನಟ ರಮೇಶ್ ಅರವಿಂದ್
![ಐಟಿ ದಾಳಿಯಿಂದ ಸರಿಯಾಗಿ ತೆರಿಗೆ ಪಾವತಿಸಬೇಕೆಂಬ ಸಂದೇಶ ರವಾನೆ: ಚಿತ್ರನಟ ರಮೇಶ್ ಅರವಿಂದ್ ಐಟಿ ದಾಳಿಯಿಂದ ಸರಿಯಾಗಿ ತೆರಿಗೆ ಪಾವತಿಸಬೇಕೆಂಬ ಸಂದೇಶ ರವಾನೆ: ಚಿತ್ರನಟ ರಮೇಶ್ ಅರವಿಂದ್](https://www.varthabharati.in/sites/default/files/images/articles/2019/01/5/171412.jpg)
ಬೆಂಗಳೂರು, ಜ.5: ಎಲ್ಲ ತೆರಿಗೆದಾರರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು ಎಂಬ ಸಂದೇಶ ಚಿತ್ರರಂಗದ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ನಡೆದಿರುವ ದಾಳಿಯಿಂದ ರವಾನೆಯಾಗಿದೆ ಎಂದು ಚಿತ್ರನಟ ರಮೇಶ್ ಅರವಿಂದ್ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ದಾಳಿ ಸಾಮಾನ್ಯ ಪ್ರಕ್ರಿಯೆ. ಈ ಬಾರಿ ನಟರ ಮನೆಗಳ ಮೇಲೆ ನಡೆದಿರುವ ದಾಳಿಯಿಂದಾಗಿ ಹೆಚ್ಚು ಗಮನ ಸೆಳೆದಿದೆ. ಇಂತಹ ದಾಳಿಯಿಂದ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ಸಂದೇಶ ಬಂದಿದೆ ಎಂದರು.
ನಟರು ಹಾಗೂ ನಿರ್ಮಾಪಕರು ತಮ್ಮ ಎಲ್ಲ ಲೆಕ್ಕ ಪತ್ರಗಳನ್ನು ವ್ಯವಸ್ಥಿತವಾಗಿ ಇಟ್ಟಿದ್ದಾರೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಿದ್ದಾರೆ ಎಂಬ ನಂಬಿಕೆ ನನಗಿದೆ. ಇದರಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದ ಅವರು, ಈ ದಾಳಿ ಹಿಂದೆ ರಾಜಕೀಯವಿದೆ ಎಂಬುವುದು ಗೊತ್ತಿಲ್ಲ ಎಂದು ಹೇಳಿದರು.
Next Story