ಯುವ ಪೀಳಿಗೆ ಸಮಾಜದ ಶಕ್ತಿಯಾಗಬೇಕು: ಎಚ್.ಎಂ.ರೇವಣ್ಣ
![ಯುವ ಪೀಳಿಗೆ ಸಮಾಜದ ಶಕ್ತಿಯಾಗಬೇಕು: ಎಚ್.ಎಂ.ರೇವಣ್ಣ ಯುವ ಪೀಳಿಗೆ ಸಮಾಜದ ಶಕ್ತಿಯಾಗಬೇಕು: ಎಚ್.ಎಂ.ರೇವಣ್ಣ](/images/placeholder.jpg)
ಬೆಂಗಳೂರು, ಜ.6: ಯುವ ಪೀಳಿಗೆಗಳು ಸಮಾಜದ ಶಕ್ತಿಯಾಗಿ ನಿಲ್ಲಬೇಕು. ಸಮಾಜದ ಒಳಿತಿಗಾಗಿ ದುಡಿಯಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಯುಕರಿಗೆ ಕರೆ ನೀಡಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟದ ವಾರ್ಷಿಕೋತ್ಸವ ಹಾಗೂ 531ನೇ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕನಕ ರತ್ನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕನಕದಾಸರ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಲೂ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಕಾರಣೀಭೂತರೆಂದು ಶಾಘ್ಲಿಸಿದರು. ಪ್ರತಿ ಜಿಲ್ಲೆಗಳಲ್ಲಿ ಇಂತಹ ಕಾರ್ಯಗಾರ ಹಮ್ಮಿಕೊಳ್ಳುವ ಮೂಲಕ ರಾಜ್ಯಾದ್ಯಂತ ವಿಸ್ತರಿಸಬೇಕು. ಯುವ ಪೀಳಿಗೆ ಸಮಾಜದ ಜವಬ್ದಾರಿ ಹೊತ್ತು, ದೇಶ ಕಟ್ಟಲೂ ಸಜ್ಜಾಗಬೇಕು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಂಪಿ ಕನ್ನಡ ವಿ.ವಿ ಕುಲಪತಿ ಡಾ.ಮಲ್ಲಿಕಾ ಘಂಟಿ, ಕೈಯಲ್ಲಿ ಕತ್ತಿ ಹಿಡಿಯುವುದು ಸುಲಭವಲ್ಲ, ಅದನ್ನು ಯಾವುದಕ್ಕೆ ಬಳಸಬೇಕು ಎಂಬುವುದು ಇಂದು ನನಗೆ ತಿಳಿಯಿತು. ಕನಕದಾಸರ ಸಂದೇಶಗಳು ಹಾಗೂ ಪರಿಕಲ್ಪನೆಯನ್ನು ಇಂದಿನ ಯುವ ಪೀಳಿಗೆಗಳು ಅನುಸರಿಸಿ ಸರಿಯಾದ ಮಾರ್ಗದಲ್ಲಿ ನಡೆಯಬೇಕು ಎಂದರು.
ಜಾತಿ ಧರ್ಮ ಎಂಬ ಭಾವನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಆದರಿಂದ ಜಾತ್ಯಾತೀತತೆಯನ್ನು ಅನುಸರಿಸಿ ಎಲ್ಲರೂ ಸಮಾನರೂ ಎಂಬ ಕನಕ, ಬುದ್ದ, ಬಸವ, ಅಂಬೇಡ್ಕರ್ರವರ ಕನಸನ್ನು ಈಡೇರಿಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ. ಅನಕ್ಷರತೆ, ಮೂಡನಂಬಿಕೆಗಳನ್ನು ಒಡೆದೊಡಿಸಬೇಕು ಎಂದು ತಿಳಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಧಾರವಾಡ ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶಾಂತಕುಮಾರಿ, ಸಾರಿಗೆ ಇಲಾಖೆ ಆಯುಕ್ತ ಸಿ.ಪಿ.ನಾರಾಯಣ ಸ್ವಾಮಿ, ಬೆಂಗಳೂರು ಜಿಲ್ಲಾ ಪಂಚಾಯತಿ ಸದಸ್ಯೆ ಕುಸುಮ ಶಿವಮಾದಯ್ಯ, ಯೋಜನೆ ಇಲಾಖೆಯ ಜಂಟಿ ನಿರ್ದೇಶಕ ವಿ. ರವಿ, ಜೆಡಿಎಸ್ ಮುಖಂಡ ಡಿ. ಉಮಾಶಂಕರ್, ಹಂಪಿ ಕನ್ನಡ ವಿಶ್ವವಿದ್ಯಾಲಯ ಸಹಾಯಕ ಕುಲಸಚಿವ ಎಚ್.ಶ್ರೀನಿವಾಸ್ ಮತ್ತಿತರರು ಇದ್ದರು.