Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘ಕೌರವರು ಪ್ರಣಾಳ ಶಿಶುಗಳಾಗಿದ್ದರು’ ಎಂಬ...

‘ಕೌರವರು ಪ್ರಣಾಳ ಶಿಶುಗಳಾಗಿದ್ದರು’ ಎಂಬ ಹೇಳಿಕೆಗೆ ವಿಜ್ಞಾನಿಗಳ ಖಂಡನೆ

ವಾರ್ತಾಭಾರತಿವಾರ್ತಾಭಾರತಿ6 Jan 2019 8:42 PM IST
share
‘ಕೌರವರು ಪ್ರಣಾಳ ಶಿಶುಗಳಾಗಿದ್ದರು’ ಎಂಬ ಹೇಳಿಕೆಗೆ ವಿಜ್ಞಾನಿಗಳ ಖಂಡನೆ

ಜಲಂಧರ್(ಪಂಜಾಬ್),ಜ.6: ಶುಕ್ರವಾರ ಇಲ್ಲಿ ಭಾರತೀಯ ವಿಜ್ಞಾನ ಸಮ್ಮೇಳನ(ಐಎಸ್‌ಸಿ)ದಲ್ಲಿ ‘ಕೌರವರು ಪ್ರಣಾಳ ಶಿಶುಗಳಾಗಿದ್ದರು’ ಎಂಬ ಆಂಧ್ರ ವಿವಿಯ ಕುಲಪತಿ ಜಿ.ನಾಗೇಶ್ವರ ರಾವ್ ಅವರ ಪ್ರತಿಪಾದನೆಯನ್ನು ಖಂಡಿಸಿರುವ ವಿಜ್ಞಾನಿಗಳ ಸಂಘಟನೆ ಬ್ರೇಕ್‌ ಥ್ರೂ ಸೈನ್ಸ್ ಸೊಸೈಟಿ(ಬಿಎಸ್‌ಎಸ್)ಯು,ಪುರಾಣವನ್ನು ವಿಜ್ಞಾನದೊಂದಿಗೆ ಬೆರೆಸುವುದು ತಪ್ಪಾಗುತ್ತದೆ ಎಂದು ಹೇಳಿದೆ.

ಸುಲಭವಾಗಿ ಪ್ರಭಾವಕ್ಕೊಳಗಾಗುವ ಯುವಮನಸ್ಸುಗಳ ಎದುರಿನಲ್ಲಿ ಪ್ರಾಚೀನ ಭಾರತದ ಕುರಿತು ಇಂತಹ ಅಂಧ ರಾಷ್ಟ್ರವಾದಿ ಹೇಳಿಕೆಗಳು ಹತಾಶೆಯನ್ನು ಮೂಡಿಸಿವೆ. ಇವು ವಿಜ್ಞಾನ ಕ್ಷೇತ್ರಕ್ಕೆ ಗಣ್ಯವ್ಯಕ್ತಿಗಳ ಪ್ರಾಮಾಣಿಕ ಕೊಡುಗೆಗಳನ್ನು ಕಳಂಕಿತಗೊಳಿಸುತ್ತವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಬಿಎಸ್‌ಎಸ್,ಪುರಾಣ ಗ್ರಂಥಗಳು ಮತ್ತು ಮಹಾಕಾವ್ಯಗಳು ಕಾವ್ಯಮಯವಾಗಿದ್ದು,ಓದಿ ಆನಂದಿಸಬಹುದಾದ ಅವು ನೀತಿಗಳನ್ನು ಬೋಧಿಸುತ್ತವೆ ಮತ್ತು ಸಮೃದ್ಧ ಕಲ್ಪನೆಗಳನ್ನು ಒಳಗೊಂಡಿವೆ. ಆದರೆ ಈ ಕಲ್ಪನೆಗಳು ವೈಜ್ಞಾನಿಕವಾಗಿ ರೂಪುಗೊಂಡಿದ್ದಲ್ಲ ಮತ್ತು ಸಿಂಧುತ್ವ ಹೊಂದಿರುವ ಸಿದ್ಧಾಂತಗಳಲ್ಲ. ಇವು ಪ್ರಾಚೀನ ಭಾರತದ ಕುರಿತು ಅಂಧ ರಾಷ್ಟ್ರವಾದಿ ಹೇಳಿಕೆಗಳಾಗಿವೆ ಎಂದು ಹೇಳಿದೆ.

ಐಸಿಎಸ್‌ನ ಹಿಂದಿನ ಅಧ್ಯಕ್ಷರಾದ ಆಚಾರ್ಯ ಪ್ರಫುಲ್‌ಚಂದ್ರ ರೇ,ಸರ್ ರಾಮನಾಥ ಚೋಪ್ರಾ ಮತ್ತು ಪಿ.ಪಾರಿಜ ಅವರನ್ನು ನೆನಪಿಸಿರುವ ಹೇಳಿಕೆಯು, ಅವರು ಪ್ರಾಚೀನ ಭಾರತದಲ್ಲಿನ ವೈಜ್ಞಾನಿಕ ಸಾಧನೆಗಳಿಗೆ ಗೌರವ ನೀಡುವಾಗ ವಸ್ತುನಿಷ್ಠ ಮತ್ತು ಶಿಕ್ಷಣಾತ್ಮಕ ರೀತಿಯನ್ನು ಅನುಸರಿಸಿದ್ದರು ಎಂದು ತಿಳಿಸಿದೆ.

ಕಾಂಡಕೋಶಗಳ ಸಂಶೋಧನೆ,ಪ್ರಣಾಳ ಶಿಶು ಸೃಷ್ಟಿ, ಉತ್ಪೇಕ್ಷಕ ಮತ್ತು ನಿರ್ದೇಶಿತ ಕ್ಷಿಪಣಿಗಳು,ಸಾಪೇಕ್ಷತಾ ಸಿದ್ಧಾಂತ,ಕ್ವಾಂಟಮ್ ಯಂತ್ರಶಾಸ್ತ್ರ ಇತ್ಯಾದಿಗಳೆಲ್ಲ ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕವೇ ರೂಪುಗೊಂಡಿವೆ. ಸುಸಂಗತ ವೈಜ್ಞಾನಿಕ ತಳಹದಿಯಿಲ್ಲದೆ ಯಾವುದೇ ತಂತ್ರಜ್ಞಾನವನ್ನು ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಮುಖ್ಯವಾಗಿದೆ ಎಂದಿರುವ ಬಿಎಸ್‌ಎಸ್, ನಿರ್ದೇಶಿತ ಕ್ಷಿಪಣಿಗಳ ನಿರ್ಮಾಣಕ್ಕೆ ವಿದ್ಯುಚ್ಛಕ್ತಿ, ಲೋಹಶಾಸ್ತ್ರ ಮತ್ತು ಯಂತ್ರಶಾಸ್ತ್ರದ ನೆರವು, ಉತ್ಪೇಕ್ಷಕ ಚಲನೆ ,ರಾಡಾರ್‌ಗಳು, ದೃಗ್ವಿಜ್ಞಾನ, ಚಲನೆಯ ಸಂವೇದಕಗಳು, ನಿಸ್ತಂತು ಸಂವಹನ ಇವುಗಳು ಅಗತ್ಯವಾಗಿವೆ ಮತ್ತು ಪ್ರಾಚೀನ ಭಾರತದಲ್ಲಿ ವೈಜ್ಞಾನಿಕ ಜ್ಞಾನದ ಈ ಮೂಲಭೂತ ಸ್ತಂಭಗಳು ಅಸ್ತಿತ್ವದಲ್ಲಿದ್ದವು ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದಿದೆ.

ಭಾರತವು ಸಾವಿರಾರು ವರ್ಷಗಳ ಹಿಂದೆಯೇ ನಿರ್ದೇಶಿತ ಕ್ಷಿಪಣಿಗಳ ತಂತ್ರಜ್ಞಾನವನ್ನು ಹೊಂದಿತ್ತು ಎಂದೂ ರಾವ್ ಪ್ರತಿಪಾದಿಸಿದ್ದರು.

ಐಎಸ್‌ಸಿಯಲ್ಲಿ ಇಂತಹ ತಪ್ಪುಗಳು ನಡೆಯುತ್ತಿರುವುದು ಇದೇ ಮೊದಲಲ್ಲ. 2015ರ ಸಮ್ಮೇಳನದಲ್ಲಿ ಪ್ರಾಚೀನ ಭಾರತದಲ್ಲಿ ವಿಮಾನಗಳಿದ್ದವು ಎಂದು ಪ್ರತಿಪಾದಿಸಲಾಗಿತ್ತು,ಆದರೆ ವೈಜ್ಞಾನಿಕ ಸಮುದಾಯವು ಅದನ್ನು ತಿರಸ್ಕರಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X