ವಿಧಾನಸೌಧದ ಆವರಣದಲ್ಲಿ ನಗದು ಜಪ್ತಿ ಪ್ರಕರಣ: ಮೊಕದ್ದಮೆ ದಾಖಲಿಸಿದ ಎಸಿಬಿ
![ವಿಧಾನಸೌಧದ ಆವರಣದಲ್ಲಿ ನಗದು ಜಪ್ತಿ ಪ್ರಕರಣ: ಮೊಕದ್ದಮೆ ದಾಖಲಿಸಿದ ಎಸಿಬಿ ವಿಧಾನಸೌಧದ ಆವರಣದಲ್ಲಿ ನಗದು ಜಪ್ತಿ ಪ್ರಕರಣ: ಮೊಕದ್ದಮೆ ದಾಖಲಿಸಿದ ಎಸಿಬಿ](https://www.varthabharati.in/sites/default/files/images/articles/2019/01/8/171835.jpg)
ಬೆಂಗಳೂರು, ಜ.8: ವಿಧಾನಸೌಧದ ಆವರಣದಲ್ಲಿ ಎಸ್.ಜೆ.ಮೋಹನ್ ಕುಮಾರ್ ಎಂಬಾತನ ಬ್ಯಾಗಿನಲ್ಲಿ ದೊರೆತ 25.76 ಲಕ್ಷ ರೂ. ನಗದು ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ ಮೊಕದ್ದಮೆ ದಾಖಲು ಮಾಡಿದೆ.
ಜ.4ರ ಸಂಜೆ ಮೋಹನ್ ಕುಮಾರ್ ಎಂಬವರ ಬ್ಯಾಗಿನಲ್ಲಿ ದೊರೆತ ನಗದು ಅನ್ನು ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಜಪ್ತಿ ಮಾಡಿದ್ದರು. ಈ ಸಂಬಂಧ ಠಾಣಾ ಎಸ್ಸೈ ಮಂಗಳವಾರ ಎಸಿಬಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಎಸ್.ಜೆ.ಮೋಹನ್ ಕುಮಾರ್ ಮತ್ತು ಇತರರ ವಿರುದ್ದ ಕಲಂ.7 ಮತ್ತು 8 ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 ರಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.
Next Story