ಭಾರತ್ ಬಂದ್: ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಲು ಪ.ಬಂಗಾಳ ಸರಕಾರ ಸೂಚನೆ
ಬಿಕೋ ಎನ್ನುತ್ತಿದೆ ಮೆಜೆಸ್ಟಿಕ್;ಎಟಿಎಂನಲ್ಲಿ ಹಣ ಖಾಲಿ ಖಾಲಿ
![ಭಾರತ್ ಬಂದ್: ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಲು ಪ.ಬಂಗಾಳ ಸರಕಾರ ಸೂಚನೆ ಭಾರತ್ ಬಂದ್: ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಲು ಪ.ಬಂಗಾಳ ಸರಕಾರ ಸೂಚನೆ](https://www.varthabharati.in/sites/default/files/images/articles/2019/01/9/171941.jpg)
ಫೋಟೊ ಕೃಪೆ: ANI
ಕೋಲ್ಕತಾ, ಜ.7: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕೇಂದ್ರ ವ್ಯಾಪಾರ ಒಕ್ಕೂಟ ಕರೆ ನೀಡಿದ್ದ ಎರಡು ದಿನದ ಭಾರತ ಬಂದ್ನ ಮೊದಲ ದಿನವಾದ ಬುಧವಾರ ದೇಶದ ಹಲವು ಭಾಗಗಳ ಜನಜೀವನ ಸ್ಥಬ್ತವಾಗಿತ್ತು. ಮುಷ್ಕರ ಎರಡನೇ ಹಾಗೂ ಅಂತಿಮ ದಿನವಾದ ಗುರುವಾರವೂ ಮಂದುವರಿದಿದೆ. ಸದಾ ಜನರಿಂದ ತುಂಬಿರುತ್ತಿದ್ದ ಬೆಂಗಳೂರಿನ ಹೃದಯ ಭಾಗ ವೆುಜೆಸ್ಟಿಕ್ ಬಿಕೋ ಎನ್ನುತ್ತಿದೆ.
ಬ್ಯಾಂಕಿಂಗ್ ಹಾಗೂ ಸಾರಿಗೆ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಷ್ಕರದ ಹಿನ್ನೆಲೆಯಲ್ಲಿ ಕೆಲವು ನಗರಗಳ ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಿದೆ.
ಕೋಲ್ಕತಾದ ಹೌರಾದಲ್ಲಿ ಶಾಲಾ ಬಸ್ ಮೇಲೆ ದಾಳಿ ನಡೆಸಿದ ಪರಿಣಾಮ ಶಾಲಾ ಮಕ್ಕಳಿಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರಕಾರ ಹೆಲ್ಮೆಟ್ ಧರಿಸಿಕೊಂಡು ಬಸ್ ಚಲಾಯಿಸುವಂತೆ ಬಸ್ ಚಾಲಕರಿಗೆ ಸೂಚನೆ ನೀಡಿದೆ.
ಇದೇ ವೇಳೆ ಕರ್ನಾಟಕ ರಾಜ್ಯ ಸರಕಾರಿ ಬಸ್ಗಳ ಮೇಲೆ ಅಲ್ಲಲ್ಲಿ ಕಲ್ಲು ತೂರಾಟ ಘಟನೆ ನಡೆದ ಕಾರಣ ಕೆಲವೆಡೆ ಸಂಚಾರ ಸ್ಥಗಿತಗೊಂಡಿದೆ.
ಬೆಂಗಳೂರಿನಲ್ಲಿ 12 ಸ್ಥಳಗಳಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟವಾದ ಘಟನೆ ವರದಿಯಾಗಿದೆ. ಚಿಕ್ಕಜಾಲದಲ್ಲಿ ಕೆಎಸ್ಆರ್ಟಿಸಿಯ ವಾಯುವಜ್ರ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ.
ಮುಂಬೈನಲ್ಲಿ ಬೆಸ್ಟ್ ನೌಕರರು ಎರಡನೇ ದಿನವೂ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.