ಅಲೋಕ್ ವರ್ಮಾ ಭವಿಷ್ಯ ನಿರ್ಧರಿಸಲಿದ್ದ ಆಯ್ಕೆ ಸಮಿತಿ ಸಭೆ ರದ್ದು
![ಅಲೋಕ್ ವರ್ಮಾ ಭವಿಷ್ಯ ನಿರ್ಧರಿಸಲಿದ್ದ ಆಯ್ಕೆ ಸಮಿತಿ ಸಭೆ ರದ್ದು ಅಲೋಕ್ ವರ್ಮಾ ಭವಿಷ್ಯ ನಿರ್ಧರಿಸಲಿದ್ದ ಆಯ್ಕೆ ಸಮಿತಿ ಸಭೆ ರದ್ದು](https://www.varthabharati.in/sites/default/files/images/articles/2019/01/9/172000.jpg)
ಹೊಸದಿಲ್ಲಿ, ಜ. 9: ಸಿಬಿಐ ವರಿಷ್ಠ ಅಲೋಕ್ ವರ್ಮಾ ಅವರ ಭವಿಷ್ಯವನ್ನು ಒಂದು ವಾರದ ಒಳಗೆ ನಿರ್ಧರಿಸಲು ರೂಪಿಸಲಾದ ಅತ್ಯುನ್ನತ ಅಧಿಕಾರ ಹೊಂದಿದ ಆಯ್ಕೆ ಸಮಿತಿ ಸಭೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ರದ್ದುಗೊಳಿಸಿದ್ದಾರೆ.
ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಅವರನ್ನು ಮರು ನೇಮಕಗೊಳಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಈ ಸಮಿತಿಯ ಸಭೆಗೆ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನಿಯೋಜಿಸಿದ್ದರು.
Next Story