ಕೆಳದರ್ಜೆ ನೌಕರರ ಮಾಸಿಕ ಅನುಕಂಪ ಭತ್ಯೆ ಹೆಚ್ಚಳ: ಸಚಿವ ದೇಶಪಾಂಡೆ
![ಕೆಳದರ್ಜೆ ನೌಕರರ ಮಾಸಿಕ ಅನುಕಂಪ ಭತ್ಯೆ ಹೆಚ್ಚಳ: ಸಚಿವ ದೇಶಪಾಂಡೆ ಕೆಳದರ್ಜೆ ನೌಕರರ ಮಾಸಿಕ ಅನುಕಂಪ ಭತ್ಯೆ ಹೆಚ್ಚಳ: ಸಚಿವ ದೇಶಪಾಂಡೆ](https://www.varthabharati.in/sites/default/files/images/articles/2019/01/10/172122.jpg)
ಬೆಂಗಳೂರು, ಜ.10: ರಾಜ್ಯದ ಕೆಳದರ್ಜೆ ನೌಕರರಾದ ತೋಟಿ, ತಳವಾರ, ನೀರಗಂಟಿ, ವಾಲೀಕಾರ ಸನದಿ ಮತ್ತಿತರರಿಗೆ ಹಾಲಿ ಕೊಡುತ್ತಿರುವ ಮಾಸಿಕ 800 ರೂ.ಗಳ ಅನುಕಂಪ ಭತ್ಯೆಯನ್ನು 1,600 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, 'ರಾಜ್ಯದ ಒಟ್ಟು ನಾಲ್ಕು ಕಂದಾಯ ವಿಭಾಗಗಳಲ್ಲಿ ಒಟ್ಟು 2,869 ಕೆಳದರ್ಜೆ ನೌಕರರಿದ್ದಾರೆ. ಈ ಪೈಕಿ ಬೆಂಗಳೂರು ಕಂದಾಯ ವಿಭಾಗದಲ್ಲಿ 1,925, ಮೈಸೂರು ವಿಭಾಗದಲ್ಲಿ 56, ಬೆಳಗಾವಿ ವಿಭಾಗದಲ್ಲಿ 281 ಮತ್ತು ಕಲಬುರಗಿ ವಿಭಾಗದಲ್ಲಿ 607 ಮಂದಿ ಇದ್ದಾರೆ. ಇವರೆಲ್ಲರಿಗೂ ಈ ಹೆಚ್ಚಳದ ಲಾಭ ಸಿಗಲಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
Next Story