ಕೆಪಿಟಿ ಗ್ರೀನ್ಪಾರ್ಕ್ ಎದುರು ನಿಲ್ಲಿಸಿದ್ದ ಸ್ಕೂಟರ್ ಕಳವು
ಮಂಗಳೂರು, ಜ.15: ನಗರದ ಕೆಪಿಟಿಯ ಗ್ರೀನ್ಪಾರ್ಕ್ ಎದುರು ನಿಲ್ಲಿಸಿದ್ದ ಸ್ಕೂಟರ್ ಕಳವಾದ ಬಗ್ಗೆ ಮಂಗಳೂರು ನಗರ ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳೀಯ ನಿವಾಸಿ ಪ್ರಶಾಂತ್ ಪವನ್ ಎಂಬವರಿಗೆ ಸೇರಿದ ಸುಝುಕಿ ಆ್ಯಕ್ಸಸ್ ಸ್ಕೂಟರ್ ಕಳವಾಗಿರುವುದು. ಪ್ರಶಾಂತ್ ಪವನ್ 2018ರ ಡಿ.28ರಂದು ರಾತ್ರಿ 8:30ಕ್ಕೆ ಕೆಪಿಟಿ ಬಳಿ ಇರುವ ಗ್ರೀನ್ ಪಾರ್ಕ್ ಎದುರು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಸುರತ್ಕಲ್ಗೆ ತೆರಳಿದ್ದರು. ಅದೇ ದಿನ ರಾತ್ರಿ 11:30ಕ್ಕೆ ವಾಹನವನ್ನು ಪಾರ್ಕ್ ಮಾಡಿದ ಜಾಗಕ್ಕೆ ವಾಪಸ್ ಬಂದು ನೋಡಿದಾಗ ಅಲ್ಲಿ ನಿಲ್ಲಿಸಿದ್ದ ಸ್ಕೂಟರ್ ನಾಪತ್ತೆಯಾಗಿದೆ. ಈ ಬಗ್ಗೆ ಎಲ್ಲ ಕಡೆ ಹುಡುಕಾಡಿದ್ದು, ಪತ್ತೆಯಾಗಿಲ್ಲ. ಇದು ಕಪ್ಪು ಬಣ್ಣದ ಸುಜುಕಿ ಆಕ್ಸಸ್ ಸ್ಕೂಟರ್ ಆಗಿದ್ದು, 2010ನೇ ಮಾಡೆಲ್ ಆಗಿದೆ. ಇದರ ಅಂದಾಜು ಮೌಲ್ಯ 15 ಸಾವಿರ ರೂ. ಎಂದು ಅಂದಾಜಿಸಲಗಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story