ಎಸ್ಪಿ-ಬಿಎಸ್ಪಿಯ ಹಿಂದಿನ ಭಿನ್ನಾಭಿಪ್ರಾಯ ಮರೆಯಿರಿ: ಮಾಯಾವತಿ
![ಎಸ್ಪಿ-ಬಿಎಸ್ಪಿಯ ಹಿಂದಿನ ಭಿನ್ನಾಭಿಪ್ರಾಯ ಮರೆಯಿರಿ: ಮಾಯಾವತಿ ಎಸ್ಪಿ-ಬಿಎಸ್ಪಿಯ ಹಿಂದಿನ ಭಿನ್ನಾಭಿಪ್ರಾಯ ಮರೆಯಿರಿ: ಮಾಯಾವತಿ](https://www.varthabharati.in/sites/default/files/images/articles/2019/01/15/172995.jpg)
ಲಕ್ನೋ, ಜ. 15: ಹಿಂದಿನ ಭಿನ್ನಾಭಿಪ್ರಾಯ ಮರೆತುಬಿಡಿ ಎಂದು ತನ್ನ ಪಕ್ಷ ಹಾಗೂ ಸಮಾಜವಾದಿ ಪಕ್ಷದ ಸದಸ್ಯರಲ್ಲಿ ಬಿಎಸ್ಪಿಯ ವರಿಷ್ಠೆ ಮಾಯಾವತಿ ಮಂಗಳವಾರ ಮನವಿ ಮಾಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಸಂಘಟಿತವಾಗಿ ಸ್ಪರ್ಧಿಸಲಾಗುವುದು ಎಂದು ಬಿಎಸ್ಪಿ ಹಾಗೂ ಎಸ್ಪಿ ಶನಿವಾರ ಘೋಷಿಸಿತ್ತು.
ಎಸ್ಪಿ ಹಾಗೂ ಬಿಎಸ್ಪಿಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯ ಗಳಿಸಲು ಹಿಂದಿನ ಭಿನ್ನಾಭಿಪ್ರಾಯಗಳನ್ನು ಮರೆಯೋಣ. ಇದು ನನ್ನ ಜನ್ಮ ದಿನಾಚರಣೆಯ ಕೊಡುಗೆ ಎಂದು 63ನೇ ಜನ್ಮದಿನಾಚರಣೆಯ ದಿನವಾದ ಮಂಗಳವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಶೇ. 50-50 ಸ್ಥಾನ ಹಂಚಿಕೆಗೆ ನಿರ್ಧರಿಸಿವೆ. ಇದರೊಂದಿಗೆ ಪ್ರತಿ ಪಕ್ಷ ಕೂಡ 38 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದರು.
ಉತ್ತರಪ್ರದೇಶದಲ್ಲಿ 80 ಲೋಕಸಭಾ ಸ್ಥಾನಗಳಿವೆ.
Next Story