Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿಟಮಿನ್ ಕೊರತೆಯನ್ನು ಸೂಚಿಸುವ ಈ...

ವಿಟಮಿನ್ ಕೊರತೆಯನ್ನು ಸೂಚಿಸುವ ಈ ಲಕ್ಷಣಗಳು ನಿಮ್ಮ ಗಮನದಲ್ಲಿರಲಿ…

ವಾರ್ತಾಭಾರತಿವಾರ್ತಾಭಾರತಿ17 Jan 2019 7:30 PM IST
share
ವಿಟಮಿನ್ ಕೊರತೆಯನ್ನು ಸೂಚಿಸುವ ಈ ಲಕ್ಷಣಗಳು ನಿಮ್ಮ ಗಮನದಲ್ಲಿರಲಿ…

ವಿಟಮಿನ್ಗಳು ನಮ್ಮ ಶರೀರಕ್ಕೆ ಅಗತ್ಯವಾಗಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿವೆ. ಬೆಳವಣಿಗೆಗೆ ಮತ್ತು ಕಾಯಿಲೆಗಳ ವಿರುದ್ಧ ನಮಗೆ ರಕ್ಷಣೆ ನೀಡಲು ವಿಟಮಿನ್ಗಳು ಅಗತ್ಯವಾಗಿವೆ. ವಿಟಮಿನ್ಗಳನ್ನು ಹೀರಿಕೊಳ್ಳಲು ನಮ್ಮ ಶರೀರವು ವಿಫಲಗೊಂಡಾಗ ಅಥವಾ ಆಹಾರಗಳಿಂದ ಅಗತ್ಯ ವಿಟಮಿನ್ಗಳು ಲಭಿಸದಿದ್ದಾಗ ವಿಟಮಿನ್ ಕೊರತೆಯು ಕಾಣಿಸಿಕೊಳ್ಳುತ್ತದೆ. ಇದನ್ನು ನೀಗಿಸದಿದ್ದರೆ ಅಜೀರ್ಣ,ಚರ್ಮರೋಗ,ಕುಪೋಷಣೆ ಮತ್ತು ದೈಹಿಕ ವಿರೂಪ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲರೂ ತಿಳಿದಿರಲೇಬೇಕಾದ, ವಿಟಮಿನ್ ಕೊರತೆಯನ್ನು ಸೂಚಿಸುವ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ.....

► ಪೆಡಸುಗೊಂಡ ಕೂದಲು ಮತ್ತು ಉಗುರುಗಳು

ತಲೆಗೂದಲು ಮತ್ತು ಉಗುರುಗಳು ಪೆಡಸಾಗುವುದಕ್ಕೆ ಹಲವಾರು ಕಾರಣಗಳಿದ್ದು,ಸಾಮಾನ್ಯವಾಗಿ ಬಯಾಟಿನ್ ಎಂದು ಕರೆಯಲಾಗುವ ವಿಟಮಿನ್ ಬಿ7 ಕೊರತೆಯು ಅವುಗಳಲ್ಲೊಂದಾಗಿದೆ. ಕಾರ್ಬೊ ಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೋಟಿನ್ ‌ಗಳ ಚಯಾಪಚಯಕ್ಕೆ ಅಗತ್ಯವಾಗಿರುವ ಈ ವಿಟಮಿನ್ ಆಹಾರವನ್ನು ಸಕ್ಕರೆ,ಲಿಪಿಡ್‌ಗಳು ಮತ್ತು ಅಮಿನೊ ಆ್ಯಸಿಡ್‌ಗಳನ್ನಾಗಿ ವಿಭಜಿಸುತ್ತದೆ. ಚರ್ಮ ಮತ್ತು ತಲೆಗೂದಲ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿಯೂ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಬಯಾಟಿನ್ ಕೊರತೆಯುಂಟಾಗುವುದು ಅತಿ ಅಪರೂಪ,ಆದರೆ ಕೊರತೆಯುಂಟಾದರೆ ಅದು ತಲೆಗೂದಲು ತೆಳುವಾಗಲು ಅಥವಾ ಒಡೆಯಲು ಮತ್ತು ಉಗುರುಗಳು ಪೆಡಸಾಗಲು ಕಾರಣವಾಗುತ್ತದೆ. ಧೂಮ್ರಪಾನಿಗಳು,ಅತಿಯಾದ ಮದ್ಯಪಾನಿಗಳು,ಗರ್ಭಿಣಿಯರು ಅಥವಾ ಜೀರ್ಣಾಂಗ ರೋಗಗಳಿಂದ ಬಳಲುತ್ತಿರುವವರು ಈ ವಿಟಮಿನ್ ಕೊರತೆಯುಂಟಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಸುದೀರ್ಘ ಕಾಲ ಆ್ಯಂಟಿಬಯಾಟಿಕ್‌ ಗಳ ಬಳಕೆಯೂ ಬಯಾಟಿನ್ ಕೊರತೆಯನ್ನುಂಟು ಮಾಡುತ್ತದೆ. ಹಸಿಮೊಟ್ಟೆಯನ್ನು ಸೇವಿಸುವವರನ್ನೂ ಈ ಕೊರತೆಯು ಕಾಡುತ್ತದೆ.

► ಬಾಯಿ ಹುಣ್ಣುಗಳು

ಬಾಯಿಯಲ್ಲಿ ಮತ್ತು ಅದರ ಸುತ್ತಮುತ್ತ ಹುಣ್ಣುಗಳು ವಿಟಮಿನ್ ಗಳು ಮತ್ತು ಖನಿಜಗಳ ಕೊರತೆಯನ್ನು ಸೂಚಿಸುತ್ತವೆ. ಬಾಯಿಯಲ್ಲಿ ಆಗಾಗ್ಗೆ ಹುಣ್ಣುಗಳು ಕಾಣಿಸಿಕೊಳ್ಳುತ್ತಿದ್ದರೆ ಅದು ಆಹಾರದಲ್ಲಿ ವಿಟಮಿನ್ ಬಿ ಅಥವಾ ಕಬ್ಬಿಣದ ಕೊರತೆಯನ್ನು ಸೂಚಿಸುತ್ತದೆ.

► ವಸಡುಗಳಲ್ಲಿ ರಕ್ತಸ್ರಾವ

ವಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ ಅದು ಆಹಾರದಲ್ಲಿ ವಿಟಮಿನ್ ಸಿ ಕೊರತೆಯನ್ನು ಸೂಚಿಸುತ್ತದೆ. ವಿಟಮಿನ್ ಸಿ ಸಮರ್ಥ ಉತ್ಕರ್ಷಣ ನಿರೋಧಕದಂತೆ ಕಾರ್ಯಾಚರಿಸುತ್ತದೆ ಮತ್ತು ಗಾಯಗಳ ಮಾಗುವಿಕೆಯಲ್ಲಿ,ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಜೀವಕೋಶಗಳಿಗೆ ಹಾನಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ಶರೀರವು ವಿಟಾಮಿನ್ ಸಿ ಅನ್ನು ಉತ್ಪಾದಿಸುವುದಿಲ್ಲವಾದ್ದರಿಂದ ಆಹಾರದ ಮೂಲಕವೇ ಅದರ ಕೊರತೆಯನ್ನು ನೀಗಿಸಿಕೊಳ್ಳಬೇಕಾಗುತ್ತದೆ.

► ಕೂದಲು ಉದುರುವಿಕೆ

ತಲೆಗೂದಲು ಉದುರುವುದು ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ. ಥೈರಾಯ್ಡ್ ಹಾರ್ಮೋನ್‌ಗಳ ಕಡಿಮೆ ಮಟ್ಟ ಹಾಗೂ ಕಬ್ಬಿಣ ಮತ್ತು ಸತುವು ಕೊರತೆ ತಲೆಗೂದಲು ನಷ್ಟವಾಗಲು ಕಾರಣಗಳಾಗಿದ್ದರೂ ನಿಯಾಸಿನ್ ಅಥವಾ ವಿಟಮಿನ್ ಬಿ3 ಕೊರತೆಯೂ ತಲೆಗೂದಲು ಉದುರಲು ಕಾರಣವಾಗುತ್ತದೆ.

► ಚರ್ಮದಲ್ಲಿ ದದ್ದುಗಳು

ವಿಟಮಿನ್ ಬಿ6 ಕೊರತೆಯು ಚರ್ಮದಲ್ಲಿ ಉಂಟಾಗುವ ತುರಿಕೆಯನ್ನುಂಟು ಮಾಡುವ ದದ್ದುಗಳಿಗೆ ಕಾರಣಗಳಲ್ಲೊಂದಾಗಿದೆ. ಪೈರಿಡಾಕ್ಸಿನ್ ಎಂದು ಕರೆಯಲಾಗುವ ಈ ವಿಟಮಿನ್ ರೋಗ ನಿರೋಧಕ ಶಕ್ತಿಯ ಕಾರ್ಯ ನಿರ್ವಹಣೆ ಮತ್ತು ಚಯಾಪಚಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಲು ಅಗತ್ಯವಾಗಿರುವ ಕೊಲಾಜೆನ್ ಎಂಬ ಚರ್ಮದ ಪ್ರೋಟಿನ್‌ನ ಸಂಶ್ಲೇಷಣೆಗೆ ಈ ವಿಟಮಿನ್ ನೆರವಾಗುತ್ತದೆ. ಶರೀರದಲ್ಲಿ ಈ ವಿಟಮಿನ್ ಬಿ6 ಕೊರತೆಯುಂಟಾದರೆ ನೆತ್ತಿ, ಮುಖ,ಕುತ್ತಿಗೆ ಮತ್ತು ಎದೆಯ ಚರ್ಮದಲ್ಲಿ ದದ್ದುಗಳಿಗೆ ಕಾರಣವಾಗುತ್ತದೆ. ನಮ್ಮ ಶರೀರವು ವಿಟಮಿನ್ ಬಿ6 ಅನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ, ಹೀಗಾಗಿ ಈ ವಿಟಮಿನ್ ಕೊರತೆಯನ್ನು ತಪ್ಪಿಸಲು ಇದನ್ನು ಒಳಗೊಂಡಿರುವ ಆಹಾರಗಳನ್ನು ನಿಯಮಿತವಾಗಿ ಸೇವಿಸಬೇಕಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X