ಜಾತ್ಯತೀತ ಸರಕಾರ ನಮ್ಮ ಗುರಿ: ಅಭಿಶೇಕ್ ಮನು ಸಿಂಘ್ವಿ
ಕೊಲ್ಕತಾ,ಜ.19: ಶನಿವಾರ ಇಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ನೇತೃತ್ವದ ಮೆಗಾ ರ್ಯಾಲಿಯನ್ನು, ಕಪ್ಪು ಮೋಡಗಳನ್ನು ಮರೆಮಾಚುವ ಕಾಮನಬಿಲ್ಲು ಎಂದು ವ್ಯಾಖ್ಯಾನಿಸಿರುವ ಕಾಂಗ್ರೆಸ್ನ ಹಿರಿಯ ನಾಯಕ ಅಭಿಶೇಕ್ ಮನು ಸಿಂಘ್ವಿ, ನಮ್ಮ ಪ್ರಯತ್ನ ಜಾತ್ಯತೀತ ಸರಕಾರ ರಚಿಸುವುದೇ ಆಗಿದೆ ಎಂದು ತಿಳಿಸಿದ್ದಾರೆ.
ಕೊಲ್ಕತಾದ ಬ್ರಿಗೇಡ್ ಮೈದಾನದಲ್ಲಿ ಆಯೋಜಿಸಿದ್ದ ವೆುಗಾ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ ಸಿಂಘ್ವಿ, ಈ ಹಿಂದೆ ಈ ರೀತಿಯ ದ್ವೇಷ ರಾಜಕಾರಣವನ್ನು ನಾವೆಂದೂ ಕಂಡಿಲ್ಲ. ಉತ್ತರ ಪ್ರದೇಶದಲ್ಲಿ ಅಮಿತ್ ಶಾ ನೂರು ರ್ಯಾಲಿಗಳನ್ನು ನಡೆಸಿದ್ದರು. ಆದರೆ ಆರ್ಜೆಡಿ ಒಂದು ರ್ಯಾಲಿ ನಡೆಸಿದಾಗ ಆದಾಯ ತೆರಿಗೆ ನೋಟಿಸ್ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
Next Story