Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಕೆಟ್ಟ ವ್ಯವಸ್ಥೆಯಲ್ಲೂ ಜೀವನದ...

ಕೆಟ್ಟ ವ್ಯವಸ್ಥೆಯಲ್ಲೂ ಜೀವನದ ಸಾರ್ಥಕತೆಗೆ ಅವಕಾಶಗಳಿರುತ್ತವೆ: ಲಕ್ಷ್ಮೀಶ ತೋಳ್ಪಾಡಿ

ವಾರ್ತಾಭಾರತಿವಾರ್ತಾಭಾರತಿ19 Jan 2019 10:55 PM IST
share
ಕೆಟ್ಟ ವ್ಯವಸ್ಥೆಯಲ್ಲೂ ಜೀವನದ ಸಾರ್ಥಕತೆಗೆ ಅವಕಾಶಗಳಿರುತ್ತವೆ: ಲಕ್ಷ್ಮೀಶ ತೋಳ್ಪಾಡಿ

ಬೆಂಗಳೂರು, ಜ.19: ವ್ಯವಸ್ಥೆ ಕೆಟ್ಟದಾಗಿದ್ದರೂ ಮನುಷ್ಯನ ಜೀವನದ ಸಾರ್ಥಕತೆಗೆ ಅವಕಾಶಗಳು ಇದ್ದೇ ಇರುತ್ತವೆ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಿಸಿದರು.

ಶನಿವಾರ ಪ್ರಕೃತಿ ಪ್ರಕಾಶನ ಪ್ರಕಟಿಸಿರುವ ‘ನೆನಪೇ ಸಂಗೀತ: ವಿದ್ಯಾಭೂಷಣರ ಜೀವನ ಕಥನ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಳಗಿನವರು ಸೇರಿದಂತೆ ಮೇಲಿನವರು ಸಹ ಬಿಡುಗಡೆಯಾದರೆ ಮಾತ್ರ ಸಮಾಜವು ಎಲ್ಲ ತಾರತಮ್ಯಗಳಿಂದ ಬಿಡುಗಡೆಗೊಳ್ಳುತ್ತದೆ ಎಂದರು.

ಸಂಗೀತ ಮತ್ತು ವಿರಹಕ್ಕೆ ಹತ್ತಿರದ ಸಂಬಂಧವಿದೆ. ಹಾಡುಗಾರ ವಿರಹಿಯಾದಷ್ಟು, ಆತ ಶೋತೃಗಳಿಗೆ ವಿಲಕ್ಷಣವಾಗಿ ಕಾಣುತ್ತಾನೆ. ಸುಬ್ರಹ್ಮಣ್ಯ ಮಠದಲ್ಲಿ ವಿದ್ಯಾಭೂಷಣ ಇದ್ದಾಗ, ಉಪ್ಪರಿಗೆಯ ಕೋಣೆಯ ಕಿಟಕಿ ಹತ್ತಿರ ಕುಳಿತು ಹಾಡುತ್ತಿದ್ದ. ಆತನ ಹಾಡು ಎಂದೆಂದಿಗೂ ಸಿಗಲಾರದ ಪ್ರಿಯೆಯನ್ನು ಕರೆಯುತ್ತಿದ್ದಾನೆ ಎನಿಸುತ್ತಿತ್ತು. ಆತನ ಸ್ವರ, ಸುತ್ತಲಿನ ಕಾಡುಪರಿಸರ ಮತ್ತು ಸನ್ಯಾಸ ಆತನಲ್ಲಿ ಬೇಕಾದಷ್ಟು ವಿರಹವನ್ನು ತುಂಬಿತ್ತು ಎಂದು ಅವರು ಹೇಳಿದರು.

 ಲೇಖಕ ಜಯಂತ ಕಾಯ್ಕಿಣಿ ಮಾತನಾಡಿ, ‘ನೆನಪೇ ಸಂಗೀತ: ವಿದ್ಯಾಭೂಷಣರ ಜೀವನ ಕಥನ’ ಪುಸ್ತಕದಲ್ಲಿ ಮೊದಲ ಮತ್ತು ಕೊನೆಯ ಅಧ್ಯಾಯಗಳು ಸೊಗಸಾಗಿವೆ. ಪೂರ್ವಾಶ್ರಮ ಸಂಬಂಧಗಳು ಇದ್ದರೂ ಇಲ್ಲದಂತಹ ಯಾತನೆಗಳನ್ನು ಸಹಿಸುವ ಪ್ರಸಂಗವಿದೆ. ಪತಿಯಾಗುವ ಮುನ್ನ ವಿದ್ಯಾಭೂಷಣರು ಪತ್ನಿ ರಮಾರೊಂದಿಗೆ ಟ್ರಂಕ್ ಕಾಲ್‌ನಲ್ಲಿ ತಾಸುಗಟ್ಟಲೆ ಮಾತನಾಡುತ್ತಿದ್ದರಂತೆ. ಎದುರಿಗೆ ಸಿಕ್ಕಾಗ ಮಂದಸ್ಮಿತವೆ ಅವರ ಸಂಭಾಷಣೆಯಾಗುತ್ತಿತ್ತಂತೆ ಎಂಬ ವಿವರಗಳು ಪುಸ್ತಕದಲ್ಲಿದೆ ಎಂದು ಕೃತಿಯ ಕುರಿತು ಮಾತನಾಡಿದರು.

ಸಂಗೀತಗಾರ ವಿದ್ಯಾಭೂಷಣ ಮಾತನಾಡಿ, ನನಗೆ ಅಪ್ಪನೆಂದರೆ ಭಯ ಇತ್ತು. ಸನ್ಯಾಸ ಕೊಡಿಸಿದರು ಎಂದು ಅವರ ಮೇಲೆ ಸಿಟ್ಟಿತ್ತು. ಅವರ ಜೀವನದ ಪಾಡನ್ನು ಕಂಡಾಗ ವಿಷಾದವಾಗುತ್ತಿತ್ತು. ಅವರು ತೀರಿಕೊಂಡಾಗ ಪಶ್ಚಾತ್ತಾಪವಾಗಿತ್ತು ಎಂದು ಹೇಳಿದರು.

ಚಾತುರ್ಮಾಸದಲ್ಲಿ ಪೇಜಾವರ ಶ್ರೀಗಳೊಂದಿಗೆ ವಾಚನ ಪ್ರವಚನಗಳನ್ನು ಮಾಡುತ್ತಿದ್ದೆ. ಮಾಸಾಂತ್ಯದಲ್ಲಿ ಪ್ರತಿ ಸಂಜೆ ಸಂಗೀತ ಕಚೇರಿ ನಡೆಸಿಕೊಡುತ್ತಿದ್ದೆ. ಹಾಗೆ ಒಂದೂವರೆ ತಿಂಗಳು ಹಾಡುತ್ತ ಭಾಗವತ ಮುಗಿಸಿದ್ದೆ. ಒಮ್ಮೆ ಹೈದರಾಬಾದ್ ಆಕಾಶವಾಣಿಯಲ್ಲಿ ಹಾಡಿದಾಗ 25ಸಾವಿರ ರೂ.ಸಂಭಾವನೆ ಕೊಟ್ಟರು. ಪೀಠಾಧಿಪತಿಯ ಸ್ಥಾನಕ್ಕಿಂತ ಆ ದುಡಿಮೆಯ ಹಣ ನನಗೆ ಹೆಚ್ಚು ಸಂತಸ ತಂದುಕೊಟ್ಟಿತು. ಆಗ ನಾನು ಸನ್ಯಾಸಿಯಾಗಿದ್ದೆ. ನಂತರ, ಸಂಗೀತಗಾರನಾದೆ. ಈಗ ಆತ್ಮಕಥನ ಬರೆದು ಸಾಹಿತಿಯಾಗಿಬಿಟ್ಟೆ ಎಂದು ಸಂತಸ ವ್ಯಕ್ತಪಡಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X