ಅತ್ಯಾಚಾರ ಪ್ರಕರಣ ಹಿಂದೆಗೆಯಲು ನಿರಾಕರಣೆ: ಸಂತ್ರಸ್ತೆಯ ಗುಂಡಿಕ್ಕಿ ಕೊಂದ ದುಷ್ಕರ್ಮಿ
ಜ. 19: ದಿಲ್ಲಿಯಲ್ಲಿ ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದ ಹರ್ಯಾಣದ ಕರ್ನಾಲ್ನ 23 ವರ್ಷದ ಯುವತಿಯ ಮೃತದೇಹ ಗುರುಗ್ರಾಮ್ನ ಖುಷ್ಬೂ ಚೌಕದ ಸಮೀಪ ಪತ್ತೆಯಾಗಿದೆ. ಯುವತಿಯ ಅತ್ಯಾಚಾರಗೈದಿದ್ದ ಆರೋಪಿ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಯುವತಿಯ ಸಹೋದ್ಯೋಗಿಗಳು ದಾಖಲಿಸಿದ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ನ್ಯಾಯಾಲಯ ಯುವತಿಯ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದೆ. ಯುವತಿಯ ತಲೆ ಹಾಗೂ ಎದೆಗೆ ಗುಂಡು ಹಾರಿಸಿರಬೇಕು ಎಂದು ಗುರುಗಾಂವ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಭಾಶ್ ಬೋಕೆನ್ ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣ ಹಿಂದೆ ತೆಗೆಯಲು ನಿರಾಕರಿಸಿರುವುದಕ್ಕೆ ಯುವತಿ ಮೇಲೆ ಸಂದೀಪ್ ಎಂಬಾತ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಯುವತಿಯ ಗೆಳತಿ ಹಾಗೂ ಹತ್ಯೆಯ ಪ್ರತ್ಯಕ್ಷದರ್ಶಿ ಯುವತಿ ತಿಳಿಸಿದ್ದಾರೆ.
Next Story