Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಈಗಿನ ಸಿನೆಮಾ ಸಂಸ್ಕೃತಿ ವಿಕೃತವನ್ನು...

ಈಗಿನ ಸಿನೆಮಾ ಸಂಸ್ಕೃತಿ ವಿಕೃತವನ್ನು ಸೃಷ್ಟಿಸುತ್ತಿದೆ: ರಂಗಕರ್ಮಿ ಎನ್.ಕೆ.ವರದರಾಜು

ವಾರ್ತಾಭಾರತಿವಾರ್ತಾಭಾರತಿ20 Jan 2019 11:57 PM IST
share

ಬೆಂಗಳೂರು, ಜ.20: ಸಿನೆಮಾ ಜನ ಸಾಮಾನ್ಯರನ್ನು ತಲುಪುವ ಶಕ್ತಿಶಾಲಿ ಮಾಧ್ಯಮವಾಗಿದ್ದು, ನೋಡುಗರ ಮನಸ್ಸನ್ನು ಅರಳಿಸಬೇಕೇ ಹೊರತು ಕೆಡಿಸಬಾರದು. ಆದರೆ, ಈಗಿನ ಸಿನೆಮಾ ಸಂಸ್ಕೃತಿ ವಿಕೃತವನ್ನು ಸೃಷ್ಟಿ ಮಾಡುತ್ತಿದೆ ಎಂದು ರಂಗಕರ್ಮಿ ಎನ್.ಕೆ.ವರದರಾಜು ಅಭಿಪ್ರಾಯಪಟ್ಟರು.

ರವಿವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತ ಶಶಿಧರ ಚಿತ್ರದುರ್ಗ ನಿರೂಪಣೆಯ ಚಿತ್ರ- ಕತೆ, ಶೂಟಿಂಗ್ ಸೋಜಿಗ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಿಂದಿನ ಕಾಲದ ಸಿನೆಮಾಗಳು ಸಾಮಾಜಿಕ ಮೌಲ್ಯವನ್ನು ಬಿಂಬಿಸುವಂತೆ ತೆರೆಯ ಮೇಲೆ ಮೂಡಿಬರುತ್ತಿದ್ದವು. ಇತ್ತೀಚಿಗೆ ಇಂತಹ ಸಿನೆಮಾಗಳ ಸಂಖ್ಯೆ ಕಡಿಮೆಯಾಗಿದ್ದು, ವಿಕೃತಗಳೇ ಸಿನೆಮಾ ಬಂಡವಾಳವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ಚಲನಚಿತ್ರಕ್ಕೆ ಮಹಾನ್ ಕಲಾವಿದನನ್ನೂ ಕೊಟ್ಟ ಚಿತ್ರ ಬೇಡರ ಕಣ್ಣಪ್ಪವಾಗಿದ್ದು, ಅಂದಿನಿಂದ ಹಿಂದಿನವರೆಗೂ ಕನ್ನಡ ಚಲನಚಿತ್ರ ರಂಗ ಅನೇಕ ಏಳು- ಬೀಳುಗಳನ್ನು ಕಂಡಿದೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ತಿಥಿ ಸಿನೆಮಾ ವಾಸ್ತವಾಂಶಗಳನ್ನೇ ಪ್ರದಾನವಾಗಿಸಿಕೊಂಡು ನಿರ್ಮಾಣವಾದರಿಂದ, ಇದು ಪಾಥೇರ್ ಪಂಚಾಲಿಯನ್ನು ನೆನಪಿಸಿತು ಎಂದು ಹೇಳಿದರು.

ಲೇಖಕ ಚಂದ್ರಶೇಖರ್ ಆಲೂರು ಮಾತನಾಡಿ, ಹಿರಿಯ ಸ್ಥಿರಚಿತ್ರ ಛಾಯಾ ಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಹಾಗೂ ಪ್ರಗತಿ ಅಶ್ವತ್ಥ ನಾರಾಯಣರವರು ತೆಗೆದಿರುವ ಒಂದೊಂದು ಚಿತ್ರವೂ ಒಂದೊಂದು ಕತೆಯನ್ನು ಹೇಳುತ್ತವೆ. ಹಿಂದೆ ಸಿನೆಮಾ ನಿರ್ಮಿಸಿದ ಮೇಲೆ ದೃಶ್ಯವನ್ನು ನೋಡಬೇಕೆಂದರೇ, ಹತ್ತು ದಿನಗಳವರೆಗೂ ಕಾಯಬೇಕಿತ್ತು. ಆಗ ಸ್ಥಿರಚಿತ್ರಗಳೇ ಎಲ್ಲ ಸಿನೆಮಾ ದೃಶ್ಯಗಳನ್ನು ತಿಳಿಸುತ್ತಿದ್ದವು ಎಂದು ತಿಳಿಸಿದರು.

ಸ್ಥಿರಚಲನಚಿತ್ರಕ್ಕೆ ಅದರದೇ ಆದ ಚಾರಿತ್ರಿಕ ಮೌಲ್ಯವಿದೆ. ಅದನ್ನು ಗಮನಿಸಿದ ಶಶಿಧರ್ ಚಿತ್ರದುರ್ಗ ಫೇಸ್‌ಬುಕ್‌ನ್ನು ವರದಾನವಾಗಿ ಮಾಡಿಕೊಂಡು ಭವಾನಿ ಲಕ್ಷ್ಮೀನಾರಾಯಣ ಹಾಗೂ ಪ್ರಗತಿ ಅಶ್ವತ್ಥ ನಾರಾಯಣರವರ ಸ್ಥಿರಚಿತ್ರಗಳಿಗೆ ಟಿಪ್ಪಣಿಯನ್ನು ಬರೆಯುತ್ತಾ, ಸಂಪೂರ್ಣ ಮಾಹಿತಿ ನೀಡುತ್ತಿದ್ದು, ಅಮೂಲ್ಯವಾದ ಸಂಗ್ರಹ ಮಾಡುವ ಮೂಲಕ ಸ್ಥಿರಚಿತ್ರಗಳನ್ನು ಇಂದಿನ ಪೀಳಿಗೆಯವರಿಗೆ ತಲುಪಿಸಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಬಿ.ಸರೋಜಾ ದೇವಿಯಿಂದ ಮಾಸ್ಟರ್ ಆನಂದ್‌ವರೆಗೂ ಸುಮಾರು 150ರಿಂದ 200 ಸ್ಥಿರಚಿತ್ರಗಳನ್ನು ಶೂಟಿಂಗ್ ಸೋಜಿಗದಲ್ಲಿ ಬಳಸಿಕೊಳ್ಳಲಾಗಿದೆ. ಒಂದು ಚಲನಚಿತ್ರ ಎಂದರೆ ಕೇವಲ ನಟಿ- ನಟಿಯರು ಮಾತ್ರ ಇರುವುದಿಲ್ಲ. ತೆರೆಯ ಮುಂದೆಯೂ, ತೆರೆಯ ಹಿಂದೆಯೂ ಅನೇಕ ಮಂದಿ ಕೆಲಸ ಮಾಡಿರುತ್ತಾರೆ. ಆ ಎಲ್ಲ ಅಂಶಗಳನ್ನು ತುಂಬಾ ಸರಳವಾಗಿ ಚಿತ್ರ- ಕತೆ (ಸಿನಿ ಹಾದಿಯಲ್ಲೊಂದು ಪಯಣ), ಶೂಟಿಂಗ್ ಸೋಜಿಗ ಪುಸ್ತಕದಲ್ಲಿ ಶಶಿಧರ್ ದಾಖಲಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಹಿರಿಯ ಕಲಾವಿದೆ ಎನ್.ಎಂ.ಲಕ್ಷ್ಮೀದೇವಿ, ಬಿ.ಜಯಾ, ರಂಗಕರ್ಮಿ ಎನ್.ಕೆ.ವರದರಾಜ್, ಭವಾನಿ ಲಕ್ಷ್ಮೀನಾರಾಯಣ ಹಾಗೂ ಪ್ರಗತಿ ಅಶ್ವತ್ಥ ನಾರಾಯಣರವರನ್ನು ಸನ್ಮಾನಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X