Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ21 Jan 2019 12:04 AM IST
share
ಓ ಮೆಣಸೇ…

ಬಸವಣ್ಣ ಒಬ್ಬ ಅತಿದೊಡ್ಡ ಹಾಗೂ ಒಳ್ಳೆಯ ಹಿಂದೂ ಆಗಿದ್ದರು - ವಿಶ್ವೇಶ ತೀರ್ಥ ಸ್ವಾಮೀಜಿ,

ಪೇಜಾವರ ಮಠ ನಿಮ್ಮ ಮಠಗಳಲ್ಲಿ ಬಸವಣ್ಣನರ ವಚನಗಳನ್ನೇಕೆ ಪಠಿಸುವುದಿಲ್ಲ?

---------------------

ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಎಂಬ ಕಪ್ಪುಚುಕ್ಕೆಯನ್ನು ಅಳಿಸುತ್ತೇನೆ - ದೇವೇಗೌಡ, ಮಾಜಿ ಪ್ರಧಾನಿ

ಅದು ಕುಮಾರಸ್ವಾಮಿಯ ಹಣೆಯ ಮೇಲಿರುವ ಚುಕ್ಕೆಯಲ್ಲ, ಮಚ್ಚೆಯಂತೆ.

---------------------

ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೆಸ್ ಪಾಕಿಸ್ತಾನದ ನೆರವು ಬೇಡಿದೆ

- ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

ನವಾಝ್ ಶರೀಫ್‌ನ್ನು ಗುಟ್ಟು ಗುಟ್ಟಾಗಿ ಮೋದಿಯವರು ಭೇಟಿಯಾಗಿದ್ದು ಯಾಕೆ?
---------------------

ಈ ಬಾರಿಯ ಲೋಕಸಭಾ ಚುನಾವಣೆ ಕುರುಕ್ಷೇತ್ರ ಇದ್ದಂತೆ - ಎ.ಕೆ.ಆ್ಯಂಟನಿ, ಮಾಜಿ ಕೇಂದ್ರ ಸಚಿವ

ದೇಶದ ಕಂಕುಳಲ್ಲಿ ಎದ್ದ ಕುರು ಇದು.

---------------------
ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಬಿಜೆಪಿ ಆಶಾಕಿರಣ - ನರೇಂದ್ರ ಮೋದಿ, ಪ್ರಧಾನಿ

ಹಳಬರಿಗೆ ಸತ್ಯ ಗೊತ್ತಾಗಿ ಬಿಟ್ಟಿದೆ.

---------------------

ಗೋಮಾಂಸ ಸೇವನೆ ಆರೋಗ್ಯಕ್ಕೆ ಹಾನಿಕರ - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ಬಿಜೆಪಿ ನಾಯಕರೆಲ್ಲ ಅನಾರೋಗ್ಯಕ್ಕೀಡಾಗುತ್ತಿರುವುದು ಗೋಮಾಂಸ ಸೇವನೆಯಿಂದ ಎಂದು ಹೇಳುತ್ತೀರಾ?

---------------------

(ಐಟಿ ದಾಳಿಯಲ್ಲಿ ) ನನ್ನಿಂದ ಚಿಕ್ಕ ಅಳಿಲಿನಷ್ಟು ತಪ್ಪಾಗಿದೆ - ಸುದೀಪ್, ನಟ

ತಮ್ಮದು ಅಳಿಲು ಸೇವೆ ಎಂದು ಗುರುತಿಸೋಣವೇ?

---------------------

ನಮ್ಮದು ‘ತಾಯಿ ಹೃದಯದ’ ಸರಕಾರ -ಕುಮಾರಸ್ವಾಮಿ, ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರು ಮಲತಾಯಿ ಇರಬೇಕು.

---------------------

ನಾರ್ಮಲ್ ಡೆಲಿವರಿ ಮಾಡಿ ಎಂದರೆ ಯಡಿಯೂರಪ್ಪ ಆಪರೇಶನ್ ಮಾಡಲು ಹೊರಟರು, ಆದರೆ ಈಗ ಗರ್ಭಪಾತವಾಗಿದೆ - ಸಿಎಂ.ಇಬ್ರಾಹೀಂ, ಕಾಂಗ್ರೆಸ್ ನಾಯಕ

ಮೊದಲು ತಮ್ಮ ಪಕ್ಷದೋರು ಪದೇ ಪದೇ ಗರ್ಭಿಣಿಯರಾಗುವುದನ್ನು ತಪ್ಪಿಸಿ.

---------------------

ಚುನಾವಣೆ ಎನ್ನುವುದು ಫಿಸಿಕ್ಸ್ ಅಲ್ಲ ಕೆಮೆಸ್ಟ್ರಿ - ಜೆ.ಪಿ.ನಡ್ಡಾ, ಬಿಜೆಪಿ ನಾಯಕ

ಆರೆಸ್ಸೆಸ್ ಪಾಲಿಗೆ ಚುನಾವಣೆ ಎನ್ನುವುದು ಹಿಸ್ಟರಿ ಅಂತೆ.

---------------------

ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡ್ತಾರೆ. ನಾವು ಒನ್‌ಡೇ ಮ್ಯಾಚ್ ಆಡಿ ಗೆಲ್ತೇವೆ - ಯು.ಟಿ.ಖಾದರ್, ಸಚಿವ

ಮ್ಯಾಚ್ ಆಡ್ತಾ ಕೂತರೆ, ಆಡಳಿತ ನಡೆಸುವವರು ಯಾರು?

---------------------

ಭಾರತವನ್ನು ಜಗದ್ಗುರುವಾಗಿಸುವುದು ಬಿಜೆಪಿ ಪರಿಕಲ್ಪನೆ - ನಳಿನ್‌ಕುಮಾರ್ ಕಟೀಲು, ಸಂಸದ

ಪಂಪ್‌ವೆಲ್ ಓವರ್ ಬ್ರಿಡ್ಜ್‌ನ್ನು ನೋಡಲು ಜಗದೆಡೆಗಳಿಂದ ಜನರು ಆಗಮಿಸುತ್ತಿದ್ದಾರೆ.

---------------------

ವಾಮ ಮಾರ್ಗದಿಂದ ಅಧಿಕಾರಕ್ಕೆ ಬರುವ ಆಸೆ ನಮಗಿಲ್ಲ - ಸದಾನಂದಗೌಡ, ಕೇಂದ್ರ ಸಚಿವ

ರಾಮ ಮಾರ್ಗವಂತೂ ಬಿಜೆಪಿ ಪಾಲಿಗೆ ಮುಚ್ಚಿಕೊಂಡಿದೆ.

---------------------

ಬಿಎಸ್ಪಿ-ಎಸ್ಪಿ ಮೈತ್ರಿ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬುದನ್ನು ನಿರ್ಧರಿಸಲಿದೆ - ಮಾಯಾವತಿ, ಬಿಎಸ್ಪಿ ನಾಯಕಿ

ಸಾಮಾನ್ಯ ವರ್ಗಕ್ಕೆ 10 ಪರ್ಸೆಂಟ್ ಮೀಸಲಾತಿಯೇ ಎಲ್ಲವನ್ನು ನಿರ್ಧರಿಸುತ್ತದೆ ಎಂದು ಮೋದಿ ಹೇಳುತ್ತಿದ್ದಾರೆ.

---------------------

ಸಂಕ್ರಾತಿಯಾದರೂ ಸರಿ ಮುಂದಿನ ಯುಗಾದಿಯಾದರೂ ಸರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ನಿಶ್ಚಿತ - ಪ್ರತಾಪಸಿಂಹ, ಸಂಸದ

ಶಿವರಾತ್ರಿಯನ್ನು ಯಾಕೆ ಬಿಟ್ಟಿರಿ?

---------------------

ಕಾಂಗ್ರೆಸ್ ನಾಯಕರು ತೊಟ್ಟಿಲನ್ನು ತೂಗುತ್ತಾ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದ್ದಾರೆ - ಸಿ.ಟಿ.ರವಿ, ಶಾಸಕ

ಯಡಿಯೂರಪ್ಪರನ್ನು ನೀವು ಚಿವುಟುತ್ತಿರುವ ಹಾಗೆ.

---------------------

ನಮ್ಮದು ರಕ್ತಗತವಾಗಿ ಕಾಂಗ್ರೆಸ್ ವಂಶ - ಡಾ.ಅಜಯ್‌ಸಿಂಗ್, ಶಾಸಕ

ಜನರು ರಕ್ತಪಾತ ಎಂದು ಕೇಳಿಸಿಕೊಂಡಿದ್ದಾರೆ.

---------------------

ಮುಸ್ಲಿಮರು ಜೆಡಿಎಸ್‌ನಿಂದ ದೂರವಾಗಲು ಕಾಂಗ್ರೆಸ್ ಪಕ್ಷವೇ ಕಾರಣ - ದೇವೇಗೌಡ, ಮಾಜಿ ಪ್ರಧಾನಿ

ಕಾಂಗ್ರೆಸ್‌ಗೆ ಜೆಡಿಎಸ್ ಹತ್ತಿರವಾಗಲು?

---------------------

ಸಮಯ ಬಂದಾಗ ನನ್ನ ಮನಸ್ಸಿನಲ್ಲಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ - ಶತ್ರುಘ್ನ ಸಿನ್ಹಾ, ಬಿಜೆಪಿ ನಾಯಕ

ಬಿಜೆಪಿಯವರಿಗೆ ಅದು ಗೊತ್ತಾಗಿ ಬಿಟ್ಟಿದೆ.

---------------------

ಜ.19ರ ವಿರೋಧ ಪಕ್ಷಗಳ ರ್ಯಾಲಿ ಬಿಜೆಪಿ ಪಾಲಿಗೆ ಸಾವಿನ ಗಂಟೆಯಾಗಲಿದೆ - ಮಮತಾ ಬ್ಯಾನರ್ಜಿ, ಪ.ಬ.ಮುಖ್ಯಮಂತ್ರಿ

ಬಿಜೆಪಿ ದೇವಸ್ಥಾನದ ಗಂಟೆಯನ್ನು ನಂಬಿಕೊಂಡಿದೆ.

---------------------

ಪ್ರಧಾನಿ ಮೋದಿಯಂತಹ ಡೈನಾಮಿಕ್ ಲೀಡರ್ ಇದುವರೆಗೆ ಯಾರೂ ಬಂದಿಲ್ಲ - ಎಸ್.ಎಲ್.ಭೈರಪ್ಪ, ಸಾಹಿತಿ

ಶೇ.10 ಮೀಸಲಾತಿಯಿಂದ ರೋಮಾಂಚಿತರಾದಂತಿದೆ.

---------------------

ಆಪರೇಶನ್ ಕಮಲ ಫೇಲಾಗಿದ್ದರಿಂದ ಅಮಿತ್ ಶಾಗೆ ಹಂದಿಜ್ವರ - ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕ

ಹಂದಿಗಳೆಲ್ಲ ಸಿಟ್ಟಾಗಿವೆ.

---------------------

ಮನುಷ್ಯ 75 ವರ್ಷ ಆದ ಮೇಲೆ ನಿವೃತ್ತಿಯಾಗಬೇಕು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

75 ವರ್ಷ ತುಂಬಾ ದೀರ್ಘ ಆಯಿತು.

---------------------

ದನಕರುಗಳಿಗೆ ಇರುವಷ್ಟು ಮುಕ್ತ ಸ್ವಾತಂತ್ರ ರಾಜ್ಯದ ಶಾಸಕರಿಗಿಲ್ಲ - ವಾಟಾಳ್ ನಾಗರಾಜ್, ವಾಟಾಳ್ ಪಕ್ಷದ ಅಧ್ಯಕ್ಷ

ದನಕರುಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿ 

share
ಪಿ.ಎ.ರೈ
ಪಿ.ಎ.ರೈ
Next Story
X