Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕಾಡು ಜೇಡ ಹೆಣೆದ ಹಾಡು

ಕಾಡು ಜೇಡ ಹೆಣೆದ ಹಾಡು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ21 Jan 2019 12:05 AM IST
share
ಕಾಡು ಜೇಡ ಹೆಣೆದ ಹಾಡು

‘‘ಕವಿತೆ ಕನ್ನಡಿಯಾಗಿರುವಂತೆ ದೀಪವೂ ಆಗಿರುವುದು ಉತ್ತಮ ಕವಿತೆಯ ಲಕ್ಷಣ...’’ ಡಾ. ಕೆ. ವೈ. ನಾರಾಯಣ ಸ್ವಾಮಿಯವರ ಮಾತುಗಳನ್ನು ಎತ್ತಿ ಹಿಡಿಯುವಂತಿದೆ ಎಚ್. ಆರ್. ಸುಜಾತಾ ಅವರ ‘ಕಾಡು ಜೇಡ ಹಾಗೂ ಬಾತುಕೋಳಿ ಹೂ’ ಕವನ ಸಂಕಲನ. ಒಟ್ಟು 83 ಕವನಗಳಿರುವ ಈ ಕೃತಿ, ವತ್ತರಿಸಿ ದುಗುಡವನು ಒತ್ತುವೆದೆ ಬಡಿತಕ್ಕೆ ಕಿವಿಯಾನಿಸುವ ಪ್ರಯತ್ನವನ್ನು ಮಾಡುತ್ತದೆ. ‘ಗಾಳಿ ಮಾತು’ ಕವಿತೆಯಲ್ಲಿ ಕವಯಿತ್ರಿ ಕೇಳುತ್ತಾರೆ ‘‘ರಾಮನಾಗುವಿರಾ?/ಕೃಷ್ಣನಾಟವ ಎಲ್ಲಿ ಬಚ್ಚಿಡುವಿರಿ?/ಧರೆಯಾ ಮೇಲೆ ಕೃಷ್ಣನಾಗುವಿರಾ? ರಾಮನ ಒಂಟಿತನವನ್ನೆಲ್ಲಿ ಮುಚ್ಚಿಡುವಿರಿ?’ ಎಂದು ಕೇಳುತ್ತಾರೆ. ರಾಮನ ಒಂಟಿತನ, ಕೊರಗು, ಅತೃಪ್ತಿ, ಕೃಷ್ಣನ ಲೋಕಪ್ರಿಯತೆಯ ಸಮನ್ವಯವನ್ನು ಈ ಕವಿತೆಗಳಲ್ಲಿ ನಾವು ಗುರುತಿಸಬಹುದಾಗಿದೆ.
  ‘ಬಾತುಕೋಳಿಯಂಥ ಹೂ/ಅರಳುವುದು/ ಬಳ್ಳಿಯ ಕಣ್ಣ ಕೊಳದಲ್ಲಿ/ಕೀಟ ಹಿಡಿಯುವ ಕಲೆಯಿದೆಯಂತೆ/ಚಿತ್ತಾಕರ್ಷಕ ಹೂಮೈಯಿಗೆ ಬಿಟ್ಟುಕೊಂಡಿದೆಯೆ?/ ಜೇಡ ಅದಕಾಗಿ ಬಳ್ಳಿಯನು ಬಲೆಗೆ!’ ಇಲ್ಲಿ ಕವಿ ಕಟ್ಟಿಕೊಡುವ ದೃಶ್ಯ ಗಾಢವಾದುದು. ಹಾಗೆಯೇ ಕವಿಯ ನಿರೀಕ್ಷೆಯೂ ಕವಿತೆಯ ಸಾಧ್ಯತೆಗಳನ್ನು ಇಲ್ಲಿ ಹಿಗ್ಗಿಸುತ್ತದೆ. ನ್ಯೂಯಾರ್ಕ್‌ನಲ್ಲಿ ಬದುಕು ಕಟ್ಟಿಕೊಳ್ಳುವ ಅನಿವಾಸಿಯ ಆತಂಕಗಳನ್ನು, ‘ನ್ಯೂಯಾರ್ಕ್’ ಕವಿತೆ ಹಿಡಿದಿಡುತ್ತದೆ. ಅಸ್ಮಿತೆಯ ತಳಮಳಗಳನ್ನು ಈ ಕವಿತೆ ಹೇಳುತ್ತದೆ. ‘ಡಾಲರು ಟಿಪ್ಸು ಅಂಗೈಯಲಿಡಿದು/ ತನ್ನೂರ ಪಯಣಿಗನ ನೋಡುವ/ ಆ ಕಣ್ಣಲ್ಲಿ ಉಳಿದೇ ಹೋಯಿತು ದೈನೇಸಿ ನಗು...’ ಯಾರೋ ಕಟ್ಟಿದ ಬೃಹತ್ ನಗರಗಳ ಮೋಹದ ಹಿಂದೆ ಹೋದವರ ದುರಂತಗಳನ್ನು ಈ ಕವಿತೆ ಹೇಳುತ್ತದೆ. ‘ಹಂಗಿಲ್ಲದವರು’ ಕವಿತೆ ಹೊಸ ಶಾಕುಂತಲೆಯರ ಕತೆಗಳನ್ನು ಹೇಳುತ್ತದೆ. ‘ಕಂಡಷ್ಟೂ/ ರೆಪ್ಪೆ ಬಡಿದಷ್ಟೂ/ಗರಿಗೆದರುವುದು ಜಗತ್ತು/ಮುಚ್ಚಿದ ರೆಪ್ಪೆಯಡಿಯಲ್ಲಿ/ ಉಳಿಯುವುದು ಒಂದು ಕನಸು’ ದಾಹ ತೀರಿಸಲು ಅಸಾಧ್ಯವಾಗುವ ಕಡಲ ಕಡೆಗೆ ಸೆಲೆಯುವ ಮೋಹವನ್ನು ‘ಕಂಡಷ್ಟೂ’ ಕವಿತೆಯಲ್ಲಿ ಕವಿ ಕಟ್ಟಿಕೊಡುತ್ತಾರೆ. ಕೇವಲ ಒಂದೂವರೆ ವರ್ಷದಲ್ಲಿ, ಕನವರಿಕೆ, ನವಮಿ ಸೇರಿದಂತೆ ವರ್ತಮಾನದ ಹೆಣ್ಣಿನ ಒಳದನಿಯನ್ನು ಹೇಳುವ ಹಲವು ಮಹತ್ವದ ಕವಿತೆಗಳು ಇಲ್ಲಿವೆ. ಲೇಖಕಿ ಹೆಣ್ಣಿನ ವಿಮೋಚನೆಯ ಕುರಿತಂತೆ ಹೊಸ ವ್ಯಾಖ್ಯಾನವನ್ನು ತನ್ನ ಕವಿತೆಗಳಲ್ಲಿ ನೀಡುತ್ತಾರೆ ‘‘ಹೆಣ್ಣಿನ ವಿಮೋಚನೆಯೆ?/ ಅಲ್ಲಲ್ಲ, ಇದು ಗಂಡು ಕಟ್ಟಿಕೊಂಡ/ಹಮ್ಮು ಬಿಮ್ಮಿನ ಕೋಟೆಯ/ ಭಂಜನೆ/ಕಣ್ಣ ಪೊರೆ ಹರಿದರೆ /ದಾರಿ ನಿಚ್ಚಳ’ ಸಂಕಲನದ ಒಟ್ಟು ದನಿಯನ್ನು ಈ ನಾಲ್ಕು ಸಾಲುಗಳು ಹೇಳುತ್ತವೆ. ಪಲ್ಲವ ಪ್ರಕಾಶನ, ಬಳ್ಳಾರಿ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 212. ಮುಖಬೆಲೆ 200 ರೂ. ಆಸಕ್ತರು 94803 53507 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X