16 ತಿಂಗಳಲ್ಲಿ 3,000 ಎನ್ಕೌಂಟರ್: ಆದಿತ್ಯನಾಥ್ ಸರಕಾರದ ಸಾಧನೆ !
![16 ತಿಂಗಳಲ್ಲಿ 3,000 ಎನ್ಕೌಂಟರ್: ಆದಿತ್ಯನಾಥ್ ಸರಕಾರದ ಸಾಧನೆ ! 16 ತಿಂಗಳಲ್ಲಿ 3,000 ಎನ್ಕೌಂಟರ್: ಆದಿತ್ಯನಾಥ್ ಸರಕಾರದ ಸಾಧನೆ !](https://www.varthabharati.in/sites/default/files/images/articles/2019/01/25/174540.jpg)
ಲಕ್ನೋ, ಜ.25: ಉತ್ತರ ಪ್ರದೇಶ ಸರಕಾರ ಗಣರಾಜ್ಯೋತ್ಸವಕ್ಕೆ ಮೊದಲು ಸರಕಾರದ 16 ತಿಂಗಳ ಸಾಧನೆಗಳ ಪಟ್ಟಿಯಲ್ಲಿ ರಾಜ್ಯದಲ್ಲಿ ನಡೆದ ಎನ್ಕೌಂಟರ್ಗಳು, ಅದರಲ್ಲಿ ಸತ್ತ ಕ್ರಿಮಿನಲ್ಗಳು ಹಾಗೂ ಬಂಧಿಸಲ್ಪಟ್ಟವರ ಅಂಕಿ-ಅಂಶವನ್ನು ಪ್ರಕಟಿಸಿದೆ.
ಆದಿತ್ಯನಾಥ್ 2017ರ ಮಾರ್ಚ್ 19 ರಂದು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಅವಧಿಯಲ್ಲಿ ಉತ್ತರಪ್ರದೇಶ ರಾಜ್ಯ ಪೊಲೀಸರು 3,000ಕ್ಕೂ ಅಧಿಕ ಎನ್ಕೌಂಟರ್ ನಡೆಸಿದ್ದು, ಇದರಲ್ಲಿ ಕನಿಷ್ಠ 78 ಮಂದಿಯನ್ನು ಸಾಯಿಸಲಾಗಿದೆ.
ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ಅನೂಪ್ ಚಂದ್ರ ಪಾಂಡೆ ಗಣರಾಜ್ಯೋತ್ಸವಕ್ಕೆ ಮೊದಲು ಎಲ್ಲ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳಿಗೆ ಸರಕಾರದ ಸಾಧನೆಯ ಪಟ್ಟಿಯಿರುವ ಪತ್ರವನ್ನು ಕಳುಹಿಸಿದ್ದು, ಇದರಲ್ಲಿ ಎನ್ಕೌಂಟರ್ ಕೂಡ ಸೇರಿಸಲಾಗಿದೆ.
ರಾಜ್ಯದಲ್ಲಿ ಅಪರಾಧವನ್ನು ನಿಯಂತ್ರಿಸಲು ರಾಜ್ಯವ್ಯಾಪಿ ಕ್ರಿಮಿನಲ್ಗಳನ್ನು ಬಂಧಿಸಲಾಗಿದೆ. ಜು.2018ರ ತನಕ 3,026 ಎನ್ಕೌಂಟರ್ ನಡೆಸಲಾಗಿದೆ. ಎನ್ಕೌಂಟರ್ನಲ್ಲಿ 69 ಕ್ರಿಮಿನಲ್ಗಳು ನೆಲಕ್ಕುರುಳಿಸಲಾಗಿದೆ. 7,046 ಕ್ರಿಮಿನಲ್ಗಳನ್ನು ಬಂಧಿಸಲಾಗಿದೆ ಹಾಗೂ 838 ಕ್ರಿಮಿನಲ್ಗಳು ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ 11,981 ಕ್ರಿಮಿನಲ್ಗಳ ಜಾಮೀನು ರದ್ದಾಗಿದ್ದು, ಅವರೆಲ್ಲರೂ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯ ಪತ್ರದಲ್ಲಿ ತಿಳಿಸಲಾಗಿದೆ.