ವರುಣ್ ಗಾಂಧಿ ‘ಕೈ’ ಹಿಡಿಯಲಿದ್ದಾರೆಯೇ? ಈ ಬಗ್ಗೆ ರಾಹುಲ್ ಗಾಂಧಿ ಹೇಳುವುದೇನು?
ಭುವನೇಶ್ವರ,ಜ.2: ಬಿಜೆಪಿ ನಾಯಕ ವರುಣ್ ಗಾಂಧಿ ಅವರು ಕಾಂಗ್ರೆಸ್ ಸೇರಲಿದ್ದಾರೆಯೇ? ಹಾಗೊಂದು ವದಂತಿ ಹರಿದಾಡುತ್ತಿದೆ. ಆದರೆ ವರುಣ್ ತನ್ನ ಪಕ್ಷವನ್ನು ಸೇರಲಿದ್ದಾರೆಂಬ ಯಾವುದೇ ವದಂತಿಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಅವರ ಸೋದರ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಸ್ಪಷ್ಟಪಡಿಸಿದರು.
ಸೋದರಿ ಪ್ರಿಯಾಂಕಾ ಗಾಂಧಿಯವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದ ಎರಡು ದಿನಗಳ ನಂತರ ರಾಹುಲ್ ಅವರ ಈ ಸ್ಪಷ್ಟನೆ ಹೊರಬಿದ್ದಿದೆ.
ಗಾಂಧಿ-ನೆಹರು ಕುಟುಂಬವನ್ನು ಪುನಃ ಒಂದುಗೂಡಿಸುವ ಹೆಜ್ಜೆಯಾಗಿ ಕಾಂಗ್ರೆಸ್ಗೆ ವರುಣ ಸೇರ್ಪಡೆ ಕುರಿತು ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ರಾಹುಲ್,ಈ ವದಂತಿಯನ್ನು ತಾನು ಇನ್ನೂ ಕೇಳಿಲ್ಲ ಎಂದು ಉತ್ತರಿಸಿದರು.
ರಾಹುಲ್ ಚಿಕ್ಕಪ್ಪ ದಿ.ಸಂಜಯ ಗಾಂಧಿ ಮತ್ತು ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರ ಪುತ್ರರಾಗಿರುವ ವರುಣ ಉತ್ತರ ಪ್ರದೇಶದ ಸುಲ್ತಾನಪುರ ಸಂಸದರಾಗಿದ್ದಾರೆ.
Next Story