ಹನೂರು ತಾಲೂಕು ಮಟ್ಟದ ಗಣರಾಜ್ಯೋತ್ಸವ

ಹನೂರು, ಜ. 26: ನಮ್ಮ ದೇಶದ ಪ್ರತಿಯೊಬ್ಬರೂ ಸಹ ತಮ್ಮ ಹಕ್ಕು ಕರ್ತವ್ಯಗಳ ಬಗ್ಗೆ ಅರಿತು ಸರಿಯಾಗಿ ಪಾಲಿಸಿ ನಂತರ ರಾಷ್ಟ್ರಕ್ಕೆ ತನ್ನದೇ ಆದ ಕೂಡುಗೆಯನ್ನು ನೀಡಿದರೆ ನಮ್ಮ ಭವ್ಯ ಭಾರತ ಪ್ರಪಂಚದಲ್ಲಿಯೇ ಉತ್ತುಂಗದ ಶಿಖರದಲ್ಲಿ ಏರುತ್ತದೆ ಎಂದು ಕರ್ನಾಟಕ ರಾಜ್ಯ ಆಹಾರ ನಿಗಮ ನಿಯಮಿತದ ಅದ್ಯಕ್ಷರು ಹಾಗೂ ಹನೂರು ಶಾಸಕರಾದ ಆರ್ ನರೇಂದ್ರ ರಾಜು ಗೌಡ ತಿಳಿಸಿದರು.
ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಹನೂರು ತಾಲ್ಲೂಕು ಆಡಳಿತ ಮಂಡಳಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಏರ್ಪಡಿಸಿದ್ದ 70 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅದ್ಯಕ್ಷತೆ ಮತ್ತು ಧ್ವಜವಂದನೆ ಸ್ವೀಕರಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರು ರಚನೆ ಮಾಡಿಕೊಟ್ಟಿರುವಂತಹ ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳಿಂದ ಭಾರತ ದೇಶ ವಿಶ್ವಮಟ್ಟದಲ್ಲಿ ತಲೆ ಎತ್ತುವಂತಾಗಿದೆ. ಇಂದು ಭಾರತ ವಿಶ್ವ ಮಟ್ಟದಲ್ಲಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಇಡೀ ವಿಶ್ವವೇ ಭಾರತದ ಸಂವಿಧಾನವನ್ನು ಗೌರವಿಸುತ್ತಿದೆ. ಈ ಸಂವಿದಾನವನ್ನು ಜಾರಿ ಮಾಡಿರುವಂತಹ ದಿನವೇ ಗಣರಾಜ್ಯೋತ್ಸವವಾಗಿದೆ ಹಾಗೂ ನಮ್ಮ ರಾಷ್ಟ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದು . ದೇಶದ ಪ್ರತಿಯೊಬ್ಬ ಪ್ರಜೆಯೂ ಇತಿಹಾಸವನ್ನು ನೆನೆಪಿಸಿಕೂಳ್ಳಬೇಕು. ನಮ್ಮ ಹಿರಿಯರು ಹೇಳುವ ಪ್ರಕಾರ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲು ಸಾಧ್ಯವಿಲ್ಲ ನಮ್ಮ ಭಾರತವು ಸುದೀರ್ಘವಾದಂತಹ ಇತಿಹಾಸವನ್ನು ಹೂಂದಿರುವಂತಹ ರಾಷ್ಟವಾಗಿದ್ದು ನಮ್ಮ ಭಾರತಾಂಬೆಯ ನೆಲಕ್ಕಾಗಿ ಹಲವಾರು ಮಹಾತ್ಮರು ತಮ್ಮದೇ ಆದ ರೀತಿಯಲ್ಲಿ ಹೋರಾಟ ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ ಇದರ ನಂತರದ ದಿನಗಳಲ್ಲಷ್ಠೆ ನಮ್ಮ ರಾಷ್ಟ್ರ ಪ್ರಪಂಚದಲ್ಲಿಯೇ ಮುಂದುವರೆದ ರಾಷ್ಟ್ರದಲ್ಲಿ ಹೂಂದಾಗಿದ್ದೇವೆ ಇದ್ದಕ್ಕಾಗಿ ನಮ್ಮ ಹಿರಿಯರು ಮಾಡಿದಂತಹ ತ್ಯಾಗ ಸೇವೆಯ ಜೋತೆಗೆ ಹೋರಾಟ ಅಪಾರವಾದದ್ದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ವಿಶೇಷ ತಹಶೀಲ್ದಾರ್ ಶಿವರಾಮ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪಟ್ಟಣದ ಕ್ರಿಸ್ತರಾಜಶಾಲೆ, ವಿವೇಕಾನಂದ ಶಾಲೆ, ಏಕಲವ್ಯ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗೌತಮ್ಶಾಲೆ, ಜಿ.ವಿ,ಗೌಡ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿಗಳು ಮತ್ತು ವಿವಿಧ ಶಾಲೆಗಳ ವಾದ್ಯವೃಂದಗಳು ಆಕರ್ಷಕ ಪಥ ಸಂಚಲನ ನಡೆಸುವ ಮೂಲಕ ಧ್ವಜವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪಥಸಂಚಲನ ಪ್ರದರ್ಶನ ನೀಡಿದ ಶಾಲೆಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಇದೇ ವೇಳೆ ಡಿಸೆಂಬರ್ 14 ರಂದು ಸುಳ್ವಾಡಿ ವಿಷ ಪ್ರಸಾದ ಘೋರ ದುರಂತದಲ್ಲಿ ಹಗಲು ಇರಲು ಎನ್ನದೇ ಸತತವಾಗಿ ಹಲವು ದಿನಗಳಿಂದ ಮಾರ್ಟಳ್ಳಿಯ ಭಾಗದಲ್ಲಿ ನೀಡುತ್ತಿರುವ ಸೇವೆಯನ್ನು ಸ್ಲಾಘಿಸಿ ಗ್ರಾಮ ಲೆಕ್ಕಾಧಿಕಾರಿಗಳಾದ ವಿನೋದ್ ಕುಮಾರ್ ಮತ್ತು ಮಹದೇವಸ್ವಾಮಿರವನ್ನು ಕಂದಾಯ ಇಲಾಖೆವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಳಿಕ ಗೌತಮ್ ಶಾಲೆ ಆಡಳಿತ ಮಂಡಳಿಯ ವತಿಯಿಂದ ಪಟ್ಟಣದ ಪೌರಕಾರ್ಮಿಕರಿಗೆ ಹಾಗೂ ರಾಜ್ಯಮಟ್ಟದ ಕ್ರೀಡಾ ಸ್ಪರ್ದೇಗಳಲ್ಲಿ ಭಾಗವಹಿಸಿ ಅತ್ತುತ್ಯಮ ಪ್ರದರ್ಶನ ನೀಡಿದ ಏಕಲವ್ಯ ಶಾಲಾ ವಿದ್ಯಾರ್ಥಿಗಳಿಗೆ ಶಾಸಕರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ರಾಜೇಂದ್ರ, ಜಿ.ಪಂ ಸದಸ್ಯರಾದ ಬಸವರಾಜು, ತಾ.ಪಂ ಸ್ಥಾಯಿ ಸಮಿತಿ ಅದ್ಯಕ್ಷರಾದ , ಅರುಣ್ಕುಮಾರ್, ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು, ಸದಸ್ಯ ಬಸವರಾಜು, , ರೋಟರಿ ಅದ್ಯಕ್ಷ ಸಿ.ಗಿರೀಶ್ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಬಿಆರ್ಸಿ ಕಾರ್ತಿಕ್ ಬಿಆರ್ಪಿ ಸತೀಶ್ ವೆಂಕಟರಾಜ್, ಬಿಐಇಆರ್ಟಿ ಕೃಷ್ಣ, ಪ.ಪಂ ಮುಖ್ಯಾಧಿಕಾರಿ ಮೋಹನ್ ಕೃಷ್ಣ,ರಾಜಸ್ವ ನಿರೀಕ್ಷಕ ಮಾದೇಶ್, ಗ್ರಾಮಲೆಕ್ಕಾಧಿಕಾರಿ ಶೇಷಣ್ಣ ಇನ್ನಿತರರು ಹಾಜರಿದ್ದರು.











