ಬಜಾಲ್ : ಸ್ನೇಹ ಪಬ್ಲಿಕ್ ಸ್ಕೂಲ್ ವತಿಯಿಂದ ಗಣರಾಜಯೋತ್ಸವ

ಬಜಾಲ್, ಜ. 26: ಸ್ನೇಹ ಪಬ್ಲಿಕ್ ಸ್ಕೂಲ್ ಬಜಾಲ್ ಪಕ್ಕಲಡ್ಕ ಇದರ ವತಿಯಿಂದ 70ನೇ ಗಣರಾಜೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಅನುಪಮಾ ಮಹಿಳಾ ಮಾಸಿಕ ಮಂಗಳೂರು ಇದರ ಸಂಪಾದಕಿಯೂ ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಶಹನಾಝ್ ಎಂ ಹಾಗು ಉದ್ಯಮಿ ತಾಜ್ ಸೈಕಲ್ , ಬಿಳಿ ಚುಕ್ಕೆ ಪ್ರಕಾಶನದ ಅಧ್ಯಕ್ಷರು ಆಗಿರುವ ಮುತ್ತಲೀಬ್ ಭಾಗವಹಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ನಾಗರತ್ನ ಅಥಿತಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ನಂತರ ಮಕ್ಕಳಿಂದ ಸ್ವಾಗತ ಗೀತೆ ಹಾಡಲಾಯಿತು. ಶಹನಾಝ್ ಎಂ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.
ಶಾಲಾ ವತಿಯಿಂದ ಮಕ್ಕಳಿಗಾಗಿ ಆಯೋಜಿಸಿದ " ನನ್ನ ದೇಶ ನನ್ನ ಕನಸು" ಎಂಬ ವಿಷಯದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು.
ಮಕ್ಕಳಿಂದ ಹಲವಾರು ಕಾರ್ಯಕ್ರಮ ನಡೆಯಿತು.
ಅಧ್ಯಾಪಕಿ ನುಷ್ರತ್ ಖುರೇಶ್ ಕಾರ್ಯಕ್ರಮ ನಿರೂಪಿಸಿದರು. ಫೌಝಿಯಾ ವಂದಿಸಿದರು. ಶಾಲಾ ಸಂಚಾಲಕರಾದ ಯೂಸಫ್ ಪಕ್ಕಲಡ್ಕ , ಹೆತ್ತವರ ಸಂಘದ ಅಧ್ಯಕ್ಷ ಪಿ. ಬಿ ಮುಹಮ್ಮದ್ ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ಕೋಶಾಧಿಕಾರಿ ನೂರುಲ್ ಅಮೀನ್ ಕೆ.ಪಿ ಉಪಸ್ಥಿತರಿದ್ದರು













