ಮೋದಿಯೊಂದಿಗಿನ ಭೇಟಿ ವ್ಯರ್ಥವಾಗಲಿಲ್ಲ: ಪದ್ಮಭೂಷಣ ಪ್ರಶಸ್ತಿ ಪಡೆದ ಮೋಹನ್ಲಾಲ್ ಕಾಲೆಳೆದ ಟ್ವಿಟಿಗರು
![ಮೋದಿಯೊಂದಿಗಿನ ಭೇಟಿ ವ್ಯರ್ಥವಾಗಲಿಲ್ಲ: ಪದ್ಮಭೂಷಣ ಪ್ರಶಸ್ತಿ ಪಡೆದ ಮೋಹನ್ಲಾಲ್ ಕಾಲೆಳೆದ ಟ್ವಿಟಿಗರು ಮೋದಿಯೊಂದಿಗಿನ ಭೇಟಿ ವ್ಯರ್ಥವಾಗಲಿಲ್ಲ: ಪದ್ಮಭೂಷಣ ಪ್ರಶಸ್ತಿ ಪಡೆದ ಮೋಹನ್ಲಾಲ್ ಕಾಲೆಳೆದ ಟ್ವಿಟಿಗರು](https://www.varthabharati.in/sites/default/files/images/articles/2019/01/27/174991.jpg)
ತಿರುವನಂತಪುರ, ಜ.27: ಖ್ಯಾತ ಮಲಯಾಳಂ ನಟ ಮೋಹನ್ಲಾಲ್ಗೆ 2019ರ ಸಾಲಿನ ಪದ್ಮಭೂಷಣ ಪ್ರಶಸ್ತಿಯ ಗೌರವ ಸಂದಿರುವ ಬಗ್ಗೆ ಹಲವರು ಅಭಿನಂದನೆ ಸಲ್ಲಿಸಿದ್ದರೆ, ಇನ್ನು ಕೆಲವರು ಈ ಪ್ರಶಸ್ತಿ ಬಂದಿರುವುದು ನಿಮ್ಮ ಸಾಧನೆ ನೋಡಿಯಲ್ಲ, ಇತ್ತೀಚೆಗೆ ಪ್ರಧಾನಿಯನ್ನು ಭೇಟಿ ಮಾಡಿದ್ದರ ಫಲವಿದು ಎಂದು ಟ್ರೋಲ್ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ಮೋಹನ್ಲಾಲ್ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ವಿಶ್ವಶಾಂತಿ ಪ್ರತಿಷ್ಠಾನದ ಬಗ್ಗೆ ಮಾಹಿತಿ ನೀಡಿದ್ದರು. ಮೋಹನ್ಲಾಲ್ ಅವರ ಹೆತ್ತವರ ಹೆಸರನ್ನು ಹೊಂದಿರುವ ಈ ಪ್ರತಿಷ್ಠಾನ ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರದ ಮುಖಂಡರಿಗೆ ನಿಕಟವಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಹಿನ್ನೆಲೆಯಲ್ಲಿ ಟೀಕೆ ಮಾಡಿರುವ ಕೆಲವರು, ಪ್ರಧಾನಿ ಮೋದಿಯ ಸಾಮೀಪ್ಯ ನಿಮಗೆ ಪದ್ಮಭೂಷಣ ಪ್ರಶಸ್ತಿ ತಂದುಕೊಟ್ಟಿದೆ ಎಂದು ಟ್ರೋಲ್ ಮಾಡಿದ್ದಾರೆ.
ಆದರೆ ಈ ಬಗ್ಗೆ ಮೋಹನ್ಲಾಲ್ ಪ್ರತಿಕ್ರಿಯೆ ನೀಡಲು ಹೋಗಿಲ್ಲ. “ನನ್ನ 40 ವರ್ಷದ ಸಿನೆಮ ಬದುಕಿನಲ್ಲಿ ಹಲವಾರು ಶುಭಾಕಾಂಕ್ಷಿಗಳ ಹಾರೈಕೆ, ನನ್ನನ್ನು ತೆರೆಯ ಮೇಲೆ ಕಂಡು ಆನಂದಿಸುವ ಜನಸಾಮಾನ್ಯರ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ಅವರು ನನ್ನ ಮೇಲಿಟ್ಟಿರುವ ನಿರೀಕ್ಷೆಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಇವರಿಗೆ ಈ ಗೌರವವನ್ನು ಸಮರ್ಪಿಸುತ್ತಿದ್ದೇನೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.