ರಾಜ್ ನಾಥ್ ಸಿಂಗ್ –ಮಮತಾ ನಡುವೆ ಮಾತಿನ ಚಕಮಕಿ
![ರಾಜ್ ನಾಥ್ ಸಿಂಗ್ –ಮಮತಾ ನಡುವೆ ಮಾತಿನ ಚಕಮಕಿ ರಾಜ್ ನಾಥ್ ಸಿಂಗ್ –ಮಮತಾ ನಡುವೆ ಮಾತಿನ ಚಕಮಕಿ](https://www.varthabharati.in/sites/default/files/images/articles/2019/01/30/175363.jpg)
ಹೊಸದಿಲ್ಲಿ, ನ.30: ಕೋಲ್ಕತಾದ ಸಮೀಪ ಮಂಗಳವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ನಡುವೆ ದೂರವಾಣಿಯಲ್ಲಿ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.
ಈಸ್ಟ್ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರ್ಯಾಲಿಯ ಬಳಿಕ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ ಮಮತಾ ಬ್ಯಾನರ್ಜಿಯವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದರು ಎನ್ನಲಾಗಿದೆ. ಆಗ ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈಸ್ಟ್ ಮಿಡ್ನಾಪುರದ ಕಾಂತಿ ಪ್ರದೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರ್ಯಾಲಿ ನಡೆದ ಬೆನ್ನೆಲ್ಲೆ ಹಿಂಸಾಚಾರ ಕಂಡು ಬಂದಿತ್ತು. ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ , ಕಲ್ಲು ತೂರಾಟ ಪ್ರಕರಣ ನಡೆದಿತ್ತು. ರಾಜನಾಥ್ ಸಿಂಗ್ ಈ ಬಗ್ಗೆ ಮಮತಾ ಅವರಲ್ಲಿ ಸ್ಪಷ್ಟನೆ ಬಯಿಸಿದರು ಎನ್ನಲಾಗಿದೆ.
Next Story