Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ‘ನೋ-ಡೀಲ್ ಬ್ರೆಕ್ಸಿಟ್’ ತಿರಸ್ಕರಿಸಿದ...

‘ನೋ-ಡೀಲ್ ಬ್ರೆಕ್ಸಿಟ್’ ತಿರಸ್ಕರಿಸಿದ ಬ್ರಿಟಿಶ್ ಸಂಸದರು

ವಾರ್ತಾಭಾರತಿವಾರ್ತಾಭಾರತಿ30 Jan 2019 10:22 PM IST
share
‘ನೋ-ಡೀಲ್ ಬ್ರೆಕ್ಸಿಟ್’ ತಿರಸ್ಕರಿಸಿದ ಬ್ರಿಟಿಶ್ ಸಂಸದರು

ಲಂಡನ್, ಜ. 30: ಯಾವುದೇ ಒಪ್ಪಂದವಿಲ್ಲದೆ ಐರೋಪ್ಯ ಒಕ್ಕೂಟದಿಂದ ಹೊರಬರುವ (ನೋ-ಡೀಲ್ ಬ್ರೆಕ್ಸಿಟ್) ಪ್ರಸ್ತಾಪವನ್ನು ಬ್ರಿಟಿಶ್ ಸಂಸದರು ಮಂಗಳವಾರ 318-310 ಮತಗಳ ಅಂತರದಿಂದ ತಿರಸ್ಕರಿಸಿದರು. ಆದರೆ, ಈಗಾಗಲೇ ಐರೋಪ್ಯ ಒಕ್ಕೂಟದ ಜೊತೆಗೆ ಮಾಡಿಕೊಂಡಿರುವ ಹಿಂದೆಗೆತ ಒಪ್ಪಂದಕ್ಕೆ ಬದಲಾವಣೆಗಳನ್ನು ಮಾಡುವ ಪ್ರಧಾನಿ ತೆರೇಸಾ ಮೇ ಅವರ ಪ್ರಯತ್ನಗಳಿಗೆ ಬೆಂಬಲ ನೀಡಿದರು.

ಅದೇ ವೇಳೆ, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ‘ಹೊರದಬ್ಬಲ್ಪಡುವುದನ್ನು’ ತಡೆಯಲು ಯತ್ನಿಸುವ ತಿದ್ದುಪಡಿಯೊಂದನ್ನು ಕನ್ಸರ್ವೇಟಿವ್ ಪಕ್ಷದ ಸಂಸದೆ ಕ್ಯಾರಲೈನ್ ಸ್ಪೆಲ್ಮನ್ ಮತ್ತು ಲೇಬರ್ ಪಕ್ಷದ ಸಂಸದ ಜಾಕ್ ಡ್ರೋಮಿ ಮಂಡಿಸಿದರು. ಅದು 8 ಮತಗಳ ಅಂತರದಿಂದ ಸಂಸದರ ಬೆಂಬಲವನ್ನು ಗಳಿಸಿತು. ಯಾವುದೇ ಒಪ್ಪಂದವಿಲ್ಲದೆ ಐರೋಪ್ಯ ಒಕ್ಕೂಟದಿಂದ ಹೊರಬೀಳಲು ಬ್ರಿಟನ್ ಸಿದ್ಧವಿದೆ ಎಂಬ ಸರಕಾರದ ವಾದಕ್ಕೆ ಇದರಿಂದ ಹಿನ್ನಡೆಯಾಯಿತು.

ಆದಾಗ್ಯೂ, ಈ ಫಲಿತಾಂಶವನ್ನು ಅನುಷ್ಠಾನಗೊಳಿಸಬೇಕೆಂಬ ನಿರ್ಬಂಧವೇನೂ ಸರಕಾರಕ್ಕಿಲ್ಲ.

ಐರೋಪ್ಯ ಒಕ್ಕೂಟದ ಜೊತೆ ಸಂಧಾನ ಪುನರಾರಂಭಕ್ಕೆ ಸಂಸತ್ತು ಒಪ್ಪಿಗೆ

ವಿವಾದಾಸ್ಪದ ‘ಐರಿಶ್ ಬ್ಯಾಕ್‌ಸ್ಟಾಪ್’ ಪ್ರಸ್ತಾಪಕ್ಕೆ ಪರ್ಯಾಯ ವ್ಯವಸ್ಥೆಯೊಂದನ್ನು ಕೋರುವ ಸರಕಾರ ಬೆಂಬಲಿತ ತಿದ್ದುಪಡಿಯೊಂದರ ಪರವಾಗಿ ಸಂಸದರು ಮತ ಚಲಾಯಿಸಿದರು.

‘ಬ್ರೆಕ್ಸಿಟ್’ ಬಳಿಕ ಐರ್‌ಲ್ಯಾಂಡ್ (ಐರೋಪ್ಯ ಒಕ್ಕೂಟಕ್ಕೆ ಸೇರಿದ ದೇಶ) ಮತ್ತು ನಾರ್ದರ್ನ್ ಐರ್‌ಲ್ಯಾಂಡ್ (ಬ್ರಿಟನ್‌ನ ಭಾಗ)ನಡುವೆ ಗಟ್ಟಿ ಗಡಿಯೊಂದು ಇರದಂತೆ ನೋಡಿಕೊಳ್ಳುವ ಪ್ರಸ್ತಾಪವನ್ನು ‘ಐರಿಶ್ ಬ್ಯಾಕ್‌ ಸ್ಟಾಪ್’ ಹೊಂದಿದೆ.

ಬ್ರಿಟಿಶ್ ಸಂಸದರು ಏನು ಬಯಸುತ್ತಾರೆ ಎಂಬುದರ ಸ್ಪಷ್ಟ ಸಂದೇಶದೊಂದಿಗೆ ಬ್ರಸೆಲ್ಸ್ (ಐರೋಪ್ಯ ಒಕ್ಕೂಟ) ನೊಂದಿಗಿನ ಸಂಧಾನವನ್ನು ಪುನರಾರಂಭಿಸುವ ತಿದ್ದುಪಡಿಯನ್ನು ಬೆಂಬಲಿಸುವುದಾಗಿ ತೆರೇಸಾ ಮೇ ಹೇಳಿದ್ದರು.

ಈ ಸಂಬಂಧ ಸಂಸದ ಗ್ರಹಾಂ ಬ್ರಾಡಿ ಮಂಡಿಸಿದ ತಿದ್ದುಪಡಿಯನ್ನು ಸದನವು 317-301 ಮತಗಳ ಅಂತರದಿಂದ ಅಂಗೀಕರಿಸಿತು. ಐರೋಪ್ಯ ಒಕ್ಕೂಟದೊಂದಿಗೆ ಬ್ರೆಕ್ಸಿಟ್ ಒಪ್ಪಂದವನ್ನು ಮರುರೂಪಿಸುವಂತೆ ಹಾಗೂ ವಿವಾದಾಸ್ಪದ ಐರಿಶ್ ಬ್ಯಾಕ್‌ಸ್ಟಾಪ್‌ಗೆ ಪರ್ಯಾಯವೊಂದನ್ನು ಕಂಡುಹಿಡಿಯುವಂತೆ ಈ ತಿದ್ದುಪಡಿಯು ಪ್ರಧಾನಿಗೆ ಕರೆ ನೀಡುತ್ತದೆ.

ಮರು ಸಂಧಾನಕ್ಕೆ ಐರೋಪ್ಯ ಒಕ್ಕೂಟ ಅಧಿಕಾರಿಗಳ ನಿರಾಸಕ್ತಿ

ಐರೋಪ್ಯ ಒಕ್ಕೂಟದಿಂದ ಹೊರಗೆ ಬರುವ ಒಪ್ಪಂದದ ಮರುಸಂಧಾನಕ್ಕೆ ಬ್ರಿಟನ್ ಸಂಸತ್ತು ಪ್ರಧಾನಿ ತೆರೇಸಾ ಮೇಗೆ ಅಧಿಕಾರ ನೀಡಿದೆಯಾದರೂ, ಐರೋಪ್ಯ ಒಕ್ಕೂಟದ ಅಧಿಕಾರಿಗಳು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ವಿವಾದಾಸ್ಪದ ‘ಬ್ಯಾಕ್‌ಸ್ಟಾಪ್’ ಕುರಿತ ಮಾತುಕತೆಗಳನ್ನು ಪುನರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X